‘ವಡಗೇರಾ ತಾಲ್ಲೂಕಿನ ಗೌಡೂರ, ಯಕ್ಷಿಂತಿ, ಟೊಣ್ಣೂರ, ಐಕೂರ, ಅನಕಸೂಗೂರ ಮುಂತಾದ ಗ್ರಾಮಗಳಿಗೆ ನೀರು ಬರುವ ಆತಂಕ ದೂರವಾಗಿದೆ. ಆಯಾ ಗ್ರಾಮದಲ್ಲಿ ನಮ್ಮ ಕಂದಾಯ ಸಿಬ್ಬಂದಿ ನೆಲೆಸಿದ್ದಾರೆ. ಸದ್ಯಕ್ಕೆ ಯಾವುದೇ ತೊಂದರೆ ಇಲ್ಲ' ಎಂದು ವಡಗೇರಾ ತಹಶೀಲ್ದಾರ್ ಸುರೇಶ ಅಂಕಲಗಿ ತಿಳಿಸಿದ್ದಾರೆ.
ಪ್ರವಾಹದಿಂದ ಮೂರು ದಿನದಿಂದ ಶೀತಗಾಳಿ ಬೀಸುತ್ತಿದ್ದು, ಗ್ರಾಮೀಣ ಪ್ರದೇಶದ ಜನತೆಯಲ್ಲಿ ಮಲೇರಿಯಾ, ಡೆಂಗಿಜ್ವರ ಕಾಣಿಸಿಕೊಂಡಿದ್ದು, ಜನತೆ ಪರದಾಡುವಂತೆ ಆಗಿದೆ. ಖಾಸಗಿ ಆಸ್ಪತ್ರೆಗಳು ತುಂಬಿಕೊಂಡಿವೆ. ಅಲ್ಲದೆ ಕೊರೊನಾ ಹಾವಳಿಯಿಂದಲೂ ಹೈರಾಣಗೊಂಡಿದ್ದಾರೆ.