<p><strong>ಸುರಪುರ: </strong>ನಾಡಿನಾದ್ಯಂತ ಶ್ರಾವಣ ಮಾಸ ರಂಗೇರುತ್ತಿದ್ದು, ತಿಂಗಳಾಂತ್ಯದವರೆಗೂ ದೇವರ ಪೂಜಾ ಕೈಂಕರ್ಯಗಳಿಗೆ ಅವಶ್ಯವಾದ ಹೂಗಳ ದರ ಗಗನಮುಖಿಯಾಗಿದೆ.</p>.<p>ನಾಗರ ಪಂಚಮಿಯಿಂದ ಶುರು ವಾಗುವ ಪೂಜಾ ಕಾರ್ಯಗಳು ಬಿಡುವಿಲ್ಲದೆ ತಿಂಗಳ ಪೂರ್ತಿ ನಡೆ ಯುತ್ತವೆ. ಬೇರೆ ತಿಂಗಳಲ್ಲಿ ಮಾರಾಟವಾಗುವುದಕ್ಕಿಂತ ಹತ್ತು ಪಟ್ಟು ಹೆಚ್ಚು ಶ್ರಾವಣ ಮಾಸದಲ್ಲಿ ಮಾರಾಟವಾಗುತ್ತದೆ. ಆದರೆ ಈ ಬಾರಿ ಹೂವಿನ ದರ ಸಾಮಾನ್ಯ ದಿನಗಳಿಗಿಂತ ಮೂರು ಪಟ್ಟು ಹೆಚ್ಚಾಗಿದ್ದು, ಗ್ರಾಹಕರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.ಕೆ.ಜಿ. ಮಲ್ಲಿಗೆ ಹೂ ₹250, ಕೆ.ಜಿಕನಕಾಂಬರಿ ₹250, ಕೆ.ಜಿ ಸೇವಂತಿಗೆ ₹80 ಮತ್ತು ₹5ಕ್ಕೆ 3 ಗುಲಾಬಿ ಹೂವು ಮಾರಾಟ ಆಗುತ್ತಿದ್ದವು. ಈಗ ಮೂರುಪಟ್ಟು ಅಧಿಕವಾಗಿವೆ.</p>.<p>ತಾಲ್ಲೂಕಿನಲ್ಲಿ ಕೇವಲ 3 ಜನ ಹೂ ಕೃಷಿಕರಿದ್ದು, ಶೇ 90ರಷ್ಟು ಹೊರಗಿನಿಂದ ಆವಕವಾಗುತ್ತದೆ. 7 ಅಂಗಡಿಗಳು ಹಾಗೂ 15 ವರ್ತಕರು ಮನೆ ಮನೆಗೆ ತೆರಳಿ ಮಾರುತ್ತಾರೆ.</p>.<p>‘ಹಬ್ಬ ದಿನಗಳಲ್ಲಿ ರೈತರು ತಮ್ಮ ಇಚ್ಛೆಯಂತೆ ಬೆಲೆ ಹೆಚ್ಚಿಸುತ್ತಾರೆ. ಇದರಿಂದ ವರ್ತಕರಿಗೆ ಹೆಚ್ಚಿನ ಲಾಭ ಸಿಗುವುದಿಲ್ಲ‘ ಎನ್ನುತ್ತಾರೆ ಹೂ ವ್ಯಾಪಾರಿ.</p>.<p>‘ಒಂದು ಕೆ.ಜಿ. ಹೂವಿನಿಂದ 50 ಮೊಳ ಮಾಲೆ ತಯಾರಿಸಬಹುದು. ಒಂದು ಮೊಳ ಮಾಲೆ ಕಟ್ಟಲು ಶ್ರಮ ಸೇರಿ ₹18 ಖರ್ಚಾಗುತ್ತದೆ. ₹20ಕ್ಕೆ ಒಂದು ಮೊಳ ಮಾರಿದರೂ ನಷ್ಟವಾಗುತ್ತದೆ. ದರ ಹೆಚ್ಚಳದಿಂದ ವ್ಯಾಪಾರ ಕುಸಿದಿದ್ದು, ಗ್ರಾಹಕರು ಮಾರುಕಟ್ಟೆಗೆ ಬರುತ್ತಿಲ್ಲ. ಇದನ್ನೇ ನಂಬಿದ ವರ್ತಕರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ‘ ಎಂದು ಅಲವತ್ತುಕೊಂಡರು.</p>.<p>‘ಪುಷ್ಪ ಕೃಷಿ ಕಷ್ಟದಾಯಕ. ಹಬ್ಬದ ದಿನಗಳಲ್ಲಿ ಮಾತ್ರವೇ ಆ ನಷ್ಟ ಸರಿ ದೂಗಿಸಿಕೊಳ್ಳಬೇಕು. ಶ್ರಾವಣ, ದಸರಾ, ದೀಪಾವಳಿ ದಿನಗಳಲ್ಲಿ ಹೆಚ್ಚು ಬೆಲೆ ಸಿಗುತ್ತದೆ. ಉಳಿದ ದಿನಗಳಲ್ಲಿ ವ್ಯಾಪಾರಿಗಳಿಗೆ ಲಾಭ‘ ಎಂಬುದು ಬೆಳೆಗಾರರ ವಾದ.</p>.<p>‘ನಾಗರ ಪಂಚಮಿ, ಗೌರಿ ಪೂಜೆಯಂತಹ ಹಬ್ಬಗಳಿಗೆ ಹೆಚ್ಚಿನ ಹೂವುಗಳ ಅಗತ್ಯವಿದೆ. ಮನೆ ಮನೆಗೆ ಅರಿಷಿಣ, ಕುಂಕುಮಕ್ಕೆ ಹೋಗುವ ಮಹಿಳೆಯರಿಗೆ ಹೂವು ನೀಡಬೇಕು. ಬೆಲೆ ಹೆಚ್ಚಳದಿಂದ ಹಬ್ಬದ ಸಂಭ್ರಮ ಕಸಿದುಕೊಂಡಂತಾಗಿದೆ‘ ಎನ್ನುತ್ತಾರೆ ಗ್ರಾಹಕರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುರಪುರ: </strong>ನಾಡಿನಾದ್ಯಂತ ಶ್ರಾವಣ ಮಾಸ ರಂಗೇರುತ್ತಿದ್ದು, ತಿಂಗಳಾಂತ್ಯದವರೆಗೂ ದೇವರ ಪೂಜಾ ಕೈಂಕರ್ಯಗಳಿಗೆ ಅವಶ್ಯವಾದ ಹೂಗಳ ದರ ಗಗನಮುಖಿಯಾಗಿದೆ.</p>.<p>ನಾಗರ ಪಂಚಮಿಯಿಂದ ಶುರು ವಾಗುವ ಪೂಜಾ ಕಾರ್ಯಗಳು ಬಿಡುವಿಲ್ಲದೆ ತಿಂಗಳ ಪೂರ್ತಿ ನಡೆ ಯುತ್ತವೆ. ಬೇರೆ ತಿಂಗಳಲ್ಲಿ ಮಾರಾಟವಾಗುವುದಕ್ಕಿಂತ ಹತ್ತು ಪಟ್ಟು ಹೆಚ್ಚು ಶ್ರಾವಣ ಮಾಸದಲ್ಲಿ ಮಾರಾಟವಾಗುತ್ತದೆ. ಆದರೆ ಈ ಬಾರಿ ಹೂವಿನ ದರ ಸಾಮಾನ್ಯ ದಿನಗಳಿಗಿಂತ ಮೂರು ಪಟ್ಟು ಹೆಚ್ಚಾಗಿದ್ದು, ಗ್ರಾಹಕರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.ಕೆ.ಜಿ. ಮಲ್ಲಿಗೆ ಹೂ ₹250, ಕೆ.ಜಿಕನಕಾಂಬರಿ ₹250, ಕೆ.ಜಿ ಸೇವಂತಿಗೆ ₹80 ಮತ್ತು ₹5ಕ್ಕೆ 3 ಗುಲಾಬಿ ಹೂವು ಮಾರಾಟ ಆಗುತ್ತಿದ್ದವು. ಈಗ ಮೂರುಪಟ್ಟು ಅಧಿಕವಾಗಿವೆ.</p>.<p>ತಾಲ್ಲೂಕಿನಲ್ಲಿ ಕೇವಲ 3 ಜನ ಹೂ ಕೃಷಿಕರಿದ್ದು, ಶೇ 90ರಷ್ಟು ಹೊರಗಿನಿಂದ ಆವಕವಾಗುತ್ತದೆ. 7 ಅಂಗಡಿಗಳು ಹಾಗೂ 15 ವರ್ತಕರು ಮನೆ ಮನೆಗೆ ತೆರಳಿ ಮಾರುತ್ತಾರೆ.</p>.<p>‘ಹಬ್ಬ ದಿನಗಳಲ್ಲಿ ರೈತರು ತಮ್ಮ ಇಚ್ಛೆಯಂತೆ ಬೆಲೆ ಹೆಚ್ಚಿಸುತ್ತಾರೆ. ಇದರಿಂದ ವರ್ತಕರಿಗೆ ಹೆಚ್ಚಿನ ಲಾಭ ಸಿಗುವುದಿಲ್ಲ‘ ಎನ್ನುತ್ತಾರೆ ಹೂ ವ್ಯಾಪಾರಿ.</p>.<p>‘ಒಂದು ಕೆ.ಜಿ. ಹೂವಿನಿಂದ 50 ಮೊಳ ಮಾಲೆ ತಯಾರಿಸಬಹುದು. ಒಂದು ಮೊಳ ಮಾಲೆ ಕಟ್ಟಲು ಶ್ರಮ ಸೇರಿ ₹18 ಖರ್ಚಾಗುತ್ತದೆ. ₹20ಕ್ಕೆ ಒಂದು ಮೊಳ ಮಾರಿದರೂ ನಷ್ಟವಾಗುತ್ತದೆ. ದರ ಹೆಚ್ಚಳದಿಂದ ವ್ಯಾಪಾರ ಕುಸಿದಿದ್ದು, ಗ್ರಾಹಕರು ಮಾರುಕಟ್ಟೆಗೆ ಬರುತ್ತಿಲ್ಲ. ಇದನ್ನೇ ನಂಬಿದ ವರ್ತಕರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ‘ ಎಂದು ಅಲವತ್ತುಕೊಂಡರು.</p>.<p>‘ಪುಷ್ಪ ಕೃಷಿ ಕಷ್ಟದಾಯಕ. ಹಬ್ಬದ ದಿನಗಳಲ್ಲಿ ಮಾತ್ರವೇ ಆ ನಷ್ಟ ಸರಿ ದೂಗಿಸಿಕೊಳ್ಳಬೇಕು. ಶ್ರಾವಣ, ದಸರಾ, ದೀಪಾವಳಿ ದಿನಗಳಲ್ಲಿ ಹೆಚ್ಚು ಬೆಲೆ ಸಿಗುತ್ತದೆ. ಉಳಿದ ದಿನಗಳಲ್ಲಿ ವ್ಯಾಪಾರಿಗಳಿಗೆ ಲಾಭ‘ ಎಂಬುದು ಬೆಳೆಗಾರರ ವಾದ.</p>.<p>‘ನಾಗರ ಪಂಚಮಿ, ಗೌರಿ ಪೂಜೆಯಂತಹ ಹಬ್ಬಗಳಿಗೆ ಹೆಚ್ಚಿನ ಹೂವುಗಳ ಅಗತ್ಯವಿದೆ. ಮನೆ ಮನೆಗೆ ಅರಿಷಿಣ, ಕುಂಕುಮಕ್ಕೆ ಹೋಗುವ ಮಹಿಳೆಯರಿಗೆ ಹೂವು ನೀಡಬೇಕು. ಬೆಲೆ ಹೆಚ್ಚಳದಿಂದ ಹಬ್ಬದ ಸಂಭ್ರಮ ಕಸಿದುಕೊಂಡಂತಾಗಿದೆ‘ ಎನ್ನುತ್ತಾರೆ ಗ್ರಾಹಕರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>