<p><strong>ಸುರಪುರ</strong>: ಸುರಪುರ ಮತ್ತು ಹುಣಸಗಿ ತಾಲ್ಲೂಕಿನ ಪ್ರಾಗೈತಿಹಾಸಿಕ, ಐತಿಹಾಸಿಕ ಸ್ಥಳಗಳಿಗೆ ಫ್ರಾನ್ಸ್ ದೇಶದ ಪುರಾತ್ವತ್ವ ಶಾಸ್ತ್ರಜ್ಞ ಸರ್ಜಲೆ ಗಿರಿಕ್ ಭೇಟಿ ನೀಡಿದರು.</p>.<p>ಕಳೆದ ಹಲವಾರು ವರ್ಷಗಳಿಂದ ಪುರಾತತ್ವ ಅಧ್ಯಯನದಲ್ಲಿ ತೊಡಗಿರುವ ಗಿರಿಕ್, ವಿಶ್ವದಾದ್ಯಂತ ಸುತ್ತಾಡಿ ಪ್ರಾಗೈತಿಹಾಸಿಕ ನೆಲೆಗಳನ್ನು ವೀಕ್ಷಿಸುತ್ತಿದ್ದಾರೆ. ಭಾರತ ದೇಶದಲ್ಲಿ ಇಂತಹ ಅನೇಕ ನೆಲೆಗಳು ದೊರಕಿರುವ ಕಾರಣ ಅವುಗಳ ಬಗ್ಗೆ ವಿವರವಾದ ಅಧ್ಯಯನ ನಡೆಸಲು ಮಧ್ಯಪ್ರದೇಶದ ಅಮರಕಂಟಕದಲ್ಲಿ ಅವರು ಅಧ್ಯಯನ ಸಂಸ್ಥೆ ತೆರೆದಿದ್ದಾರೆ. </p>.<p>ಮೆಡೋಜ ಟೇಲರ್ ಮತ್ತು ಕೆ. ಪೆದ್ದಯ್ಯ ಅವರು ತಮ್ಮ ಪುಸ್ತಕಗಳಲ್ಲಿ ಉಲ್ಲೇಖಿಸಿರುವ ಅಂಶಗಳನ್ನು ಗಮನಿಸಿ ಹುಣಸಗಿ, ರಾಜನಕೋಳೂರು, ರಾಯನಪಾಳೆ, ಬೂದಿಹಾಳ, ಹಗರಟಗಿ, ಬೈಚಬಾಳ, ಕೋಡೇಕಲ್, ಕಕ್ಕೇರಾ ಇತರ ಸ್ಥಳಗಳಿಗೆ ಭೇಟಿ ಪ್ರಾಗೈತಿಹಾಸಿಕ ನೆಲೆಗಳನ್ನು ವೀಕ್ಷಿಸಿದರು.<br> ಇದೇ ಸಂದರ್ಭದಲ್ಲಿ ಅವರು ನಗರದ ಅರಮನೆಗೆ ಭೇಟಿ ನೀಡಿ ಕಟ್ಟಡದ ವಾಸ್ತುಶಿಲ್ಪಕ್ಕೆ ಬೆರಗಾದರು. ಅಧ್ಯಾತ್ಮ ಜೀವಿಗಳೂ ಆದ ಅವರು ಅರಮನೆಯ ಮಹಡಿಯ ಒಂದು ಕೋಣೆಯ ಮಾಡದಲ್ಲಿ ಧ್ಯಾನಕ್ಕೆ ಕುಳಿತರು.</p>.<p>‘ನನಗೆ ರೋಮಾಂಚನವಾಗುತ್ತಿದೆ, ಕಂಪನ ಉಂಟಾಗುತ್ತಿದೆ. ಈ ಸ್ಥಳ ವಿಶೇಷವಾಗಿದೆ. ಅಂತೇಯೇ ಇಲ್ಲಿ ಅರಮನೆ ನಿರ್ಮಿಸಲಾಗಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.</p>.<p>ಟೇಲರ್ ಮಂಜಿಲ್ನಲ್ಲಿ ಒಂದು ದಿನ ವಾಸ್ತವ್ಯ ಹೂಡಿದ್ದರು. ಮಂಜಿಲ್ನ ವಾಸ್ತುಶಿಲ್ಪವೂ ವಿಶಿಷ್ಟವಾಗಿದೆ ಎಂದು ಬಣ್ಣಿಸಿದರು. ಕುದುರೆಗುಡ್ಡದ ಮೇಲೆ ಹತ್ತಿ ವೀಕ್ಷಣೆ ಮಾಡಿದರು. ಈ ನಗರ ಪೆರು ದೇಶದ ‘ಲಿಮಾ’ ನಗರ ಹೋಲುತ್ತದೆ ಎಂದರು.</p>.<p>ಸಾಹಿತಿಗಳಾದ ಸಣ್ಣಕ್ಕೆಪ್ಪ ಕೊಂಡಿಕಾರ, ರಾಜಗೋಪಾಲ ವಿಭೂತಿ, ಮರೆಪ್ಪನಾಯಕ ಗುಡ್ಡಕಾಯಿ ಇಲ್ಲಿನ ಇತಿಹಾಸದ ಬಗ್ಗೆ ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುರಪುರ</strong>: ಸುರಪುರ ಮತ್ತು ಹುಣಸಗಿ ತಾಲ್ಲೂಕಿನ ಪ್ರಾಗೈತಿಹಾಸಿಕ, ಐತಿಹಾಸಿಕ ಸ್ಥಳಗಳಿಗೆ ಫ್ರಾನ್ಸ್ ದೇಶದ ಪುರಾತ್ವತ್ವ ಶಾಸ್ತ್ರಜ್ಞ ಸರ್ಜಲೆ ಗಿರಿಕ್ ಭೇಟಿ ನೀಡಿದರು.</p>.<p>ಕಳೆದ ಹಲವಾರು ವರ್ಷಗಳಿಂದ ಪುರಾತತ್ವ ಅಧ್ಯಯನದಲ್ಲಿ ತೊಡಗಿರುವ ಗಿರಿಕ್, ವಿಶ್ವದಾದ್ಯಂತ ಸುತ್ತಾಡಿ ಪ್ರಾಗೈತಿಹಾಸಿಕ ನೆಲೆಗಳನ್ನು ವೀಕ್ಷಿಸುತ್ತಿದ್ದಾರೆ. ಭಾರತ ದೇಶದಲ್ಲಿ ಇಂತಹ ಅನೇಕ ನೆಲೆಗಳು ದೊರಕಿರುವ ಕಾರಣ ಅವುಗಳ ಬಗ್ಗೆ ವಿವರವಾದ ಅಧ್ಯಯನ ನಡೆಸಲು ಮಧ್ಯಪ್ರದೇಶದ ಅಮರಕಂಟಕದಲ್ಲಿ ಅವರು ಅಧ್ಯಯನ ಸಂಸ್ಥೆ ತೆರೆದಿದ್ದಾರೆ. </p>.<p>ಮೆಡೋಜ ಟೇಲರ್ ಮತ್ತು ಕೆ. ಪೆದ್ದಯ್ಯ ಅವರು ತಮ್ಮ ಪುಸ್ತಕಗಳಲ್ಲಿ ಉಲ್ಲೇಖಿಸಿರುವ ಅಂಶಗಳನ್ನು ಗಮನಿಸಿ ಹುಣಸಗಿ, ರಾಜನಕೋಳೂರು, ರಾಯನಪಾಳೆ, ಬೂದಿಹಾಳ, ಹಗರಟಗಿ, ಬೈಚಬಾಳ, ಕೋಡೇಕಲ್, ಕಕ್ಕೇರಾ ಇತರ ಸ್ಥಳಗಳಿಗೆ ಭೇಟಿ ಪ್ರಾಗೈತಿಹಾಸಿಕ ನೆಲೆಗಳನ್ನು ವೀಕ್ಷಿಸಿದರು.<br> ಇದೇ ಸಂದರ್ಭದಲ್ಲಿ ಅವರು ನಗರದ ಅರಮನೆಗೆ ಭೇಟಿ ನೀಡಿ ಕಟ್ಟಡದ ವಾಸ್ತುಶಿಲ್ಪಕ್ಕೆ ಬೆರಗಾದರು. ಅಧ್ಯಾತ್ಮ ಜೀವಿಗಳೂ ಆದ ಅವರು ಅರಮನೆಯ ಮಹಡಿಯ ಒಂದು ಕೋಣೆಯ ಮಾಡದಲ್ಲಿ ಧ್ಯಾನಕ್ಕೆ ಕುಳಿತರು.</p>.<p>‘ನನಗೆ ರೋಮಾಂಚನವಾಗುತ್ತಿದೆ, ಕಂಪನ ಉಂಟಾಗುತ್ತಿದೆ. ಈ ಸ್ಥಳ ವಿಶೇಷವಾಗಿದೆ. ಅಂತೇಯೇ ಇಲ್ಲಿ ಅರಮನೆ ನಿರ್ಮಿಸಲಾಗಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.</p>.<p>ಟೇಲರ್ ಮಂಜಿಲ್ನಲ್ಲಿ ಒಂದು ದಿನ ವಾಸ್ತವ್ಯ ಹೂಡಿದ್ದರು. ಮಂಜಿಲ್ನ ವಾಸ್ತುಶಿಲ್ಪವೂ ವಿಶಿಷ್ಟವಾಗಿದೆ ಎಂದು ಬಣ್ಣಿಸಿದರು. ಕುದುರೆಗುಡ್ಡದ ಮೇಲೆ ಹತ್ತಿ ವೀಕ್ಷಣೆ ಮಾಡಿದರು. ಈ ನಗರ ಪೆರು ದೇಶದ ‘ಲಿಮಾ’ ನಗರ ಹೋಲುತ್ತದೆ ಎಂದರು.</p>.<p>ಸಾಹಿತಿಗಳಾದ ಸಣ್ಣಕ್ಕೆಪ್ಪ ಕೊಂಡಿಕಾರ, ರಾಜಗೋಪಾಲ ವಿಭೂತಿ, ಮರೆಪ್ಪನಾಯಕ ಗುಡ್ಡಕಾಯಿ ಇಲ್ಲಿನ ಇತಿಹಾಸದ ಬಗ್ಗೆ ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>