ಶಿಬಿರದ ಆಯೋಜಕ ಹುಣಸಗಿ ಜಿ.ಪಂ.ಸದಸ್ಯ ಬಸವರಾಜಸ್ವಾಮಿ ಸ್ಥಾವರಮಠ ಮಾತನಾಡಿ,‘ತಾಲ್ಲೂಕಿನ ಜನರ ಆರೋಗ್ಯದ ಕಾಳಜಿಯಿಂದಾಗಿ ಕಳೆದ ಮೂರು ವರ್ಷಗಳಿಂದ ಶಿಬಿರ ಆಯೋಜಿಸುತ್ತ ಬರಲಾಗಿದೆ. ಶಸ್ತ್ರ ಚಿಕಿತ್ಸೆ ಅಗತ್ಯ ಇರುವ ರೋಗಿಗಳಿಗೆ ಬೆಂಗಳೂರಿಗೆ ಹೋಗಿ ಬರಲು ಬಸ್ ವೆಚ್ಚವನ್ನು ಭರಿಸಲಾಗುವುದು’ ಎಂದರು.
ವೈದ್ಯ ಡಾ. ಯೂಸೂಫ್ ಡೆಕ್ಕನ್, ಮುಖಂಡರಾದ ಮೇಲಪ್ಪ ಗುಳಗಿ, ಎಎಸ್ಐ ಮೌನೇಶ ಬಡಿಗೇರ, ಈರಪ್ಪ ದೇಸಾಯಿ, ಎಂ.ಎಸ್. ಚಂದಾ, ಎಸ್.ಎಂ.ವಿರಕ್ತಮಠ, ಬಸಣ್ಣ ಬಾಲಗೌಡರ್, ಹಳ್ಳೆಪ್ಪ ಗುತ್ತೇದಾರ್ ಹಾಗೂ ಅಮರಪ್ಪ ಬಂಡೋಳಿ ಇದ್ದರು.