‘ನಿರಂತರವಾಗಿ ಸುರಿದ ಮಳೆಗೆ ಸ್ವಲ್ಪ ಬೆಳೆ ಸತ್ತಿದೆ. ಉಳಿದ ಬೆಳೆಯಾದರೂ ಚೆನ್ನಾಗಿರುತ್ತದೆ ಎಂದರೆ ಈಗ ಪ್ರತಿನಿತ್ಯ ದಟ್ಟವಾದ ಮಂಜು ಆವರಿಸಿಕೊಳ್ಳುತ್ತಿದೆ. ತೊಗರಿಗೆ ರೋಗದ ಜತೆಗೆ ಎಲೆ, ಹೂ, ಮೊಗ್ಗುಗಳು ಉದುರುತ್ತಿವೆ. ಎಲೆಗಳಲ್ಲಿ ಚುಕ್ಕೆಗಳು ಕಾಣಿಸಿಕೊಳ್ಳುತ್ತಿವೆ. ನಿರೀಕ್ಷಿತ ಫಸಲು ಸಿಗದೆ, ಇಳುವರಿ ಕುಸಿಯುವ ಸಾಧ್ಯತೆಯಿದೆ’ ಎನ್ನುವುದು ರೈತರಾದ ಅನೀಲ್ ಕಂದಕೂರ, ಪ್ರಸಾದ ಅವರ ಆತಂಕದ ನುಡಿಗಳು.