<p><strong>ಹುಣಸಗಿ</strong>: ತಾಲ್ಲೂಕಿನ ಬೊಮ್ಮನಗುಡ್ಡ ಗ್ರಾಮದಲ್ಲಿ ಶಾಲಾ ಪ್ರಾರಂಭೋತ್ಸವವನ್ನು ವಿನೂತನವಾಗಿ ಆಚರಿಸಲಾಯಿತು.</p>.<p>ಬೆಳಿಗ್ಗೆ ಶಾಲೆಗೆ ಗ್ರಾಮದ ಮಕ್ಕಳು ಆಗಮಿಸಲು ಸಿದ್ಧರಾಗುತ್ತಿದ್ದಂತೆ ಗ್ರಾಮದ ಹಿರಿಯರು ಮತ್ತು ಎಸ್ಡಿಎಂಸಿ ಪದಾಧಿಕಾರಿಗಳು ಮಕ್ಕಳನ್ನು ಅಲಂಕೃತ ಎತ್ತಿನ ಬಂಡಿಯಲ್ಲಿ ಕುಳ್ಳಿರಿಸಿ ಶಾಲೆಗೆ ಕರೆದುಕೊಂಡು ಬರಲಾಯಿತು. ಗ್ರಾಮದೆಲ್ಲಡೆ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. </p>.<p>ಶಾಲೆಯ ಮುಖ್ಯ ಶಿಕ್ಷಕಿ ಜುಲೇಖಾ ಬೇಗಂ ಮಾತನಾಡಿ, ‘ಶಾಲಾ ಪ್ರಾರಂಭೋತ್ಸವದ ಸಂದರ್ಭದಲ್ಲಿ ಸಮುದಾಯದ ಸಹಭಾಗಿತ್ವದಿಂದಾಗಿ ಮಕ್ಕಳಲ್ಲಿ ಕಲಿಕಾ ಆಸಕ್ತಿ ಹೆಚ್ಚಾಗುವಂತೆ ಮಾಡಿದೆ. ಅಲ್ಲದೆ ನಮಗೂ ಕೂಡಾ ಹೊಸತನವನು ತಂದುಕೊಟ್ಟಿತು’ ಎಂದು ಹೇಳಿದರು.</p>.<p>ಈ ಸಂದರ್ಬದಲ್ಲಿ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಚಂದ್ರಶೇಖರ ಕದರಾಪುರ, ಪ್ರೌಢ ಶಾಲೆ ಮುಖ್ಯಶಿಕ್ಷಕ ಶರಣಗೌಡ ಪಾಟೀಲ, ಅಮರೇಶ ಅಗ್ನಿ, ಅಯ್ಯನಗೌಡ , ಕನಕರಾಯ, ಈರಪ್ಪ ಕುಂಬಾರ, ರಾಮನಗೌಡ ಪೊಲೀಸ್ ಪಾಟೀಲ, ಗದ್ದೆಪ್ಪ ಜಾಲಹಳ್ಳಿ, ಗುರುಬಸಪ್ಪ ಮೇಟಿ, ರಮೇಶ ಅಂಬಿಗೇರ, ನಿಂಗಣ್ಣ ನಾಗೂರ, ಅಮರೇಶ ಮಾರಲಬಾವಿ ಸೇರಿದಂತೆ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸಗಿ</strong>: ತಾಲ್ಲೂಕಿನ ಬೊಮ್ಮನಗುಡ್ಡ ಗ್ರಾಮದಲ್ಲಿ ಶಾಲಾ ಪ್ರಾರಂಭೋತ್ಸವವನ್ನು ವಿನೂತನವಾಗಿ ಆಚರಿಸಲಾಯಿತು.</p>.<p>ಬೆಳಿಗ್ಗೆ ಶಾಲೆಗೆ ಗ್ರಾಮದ ಮಕ್ಕಳು ಆಗಮಿಸಲು ಸಿದ್ಧರಾಗುತ್ತಿದ್ದಂತೆ ಗ್ರಾಮದ ಹಿರಿಯರು ಮತ್ತು ಎಸ್ಡಿಎಂಸಿ ಪದಾಧಿಕಾರಿಗಳು ಮಕ್ಕಳನ್ನು ಅಲಂಕೃತ ಎತ್ತಿನ ಬಂಡಿಯಲ್ಲಿ ಕುಳ್ಳಿರಿಸಿ ಶಾಲೆಗೆ ಕರೆದುಕೊಂಡು ಬರಲಾಯಿತು. ಗ್ರಾಮದೆಲ್ಲಡೆ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. </p>.<p>ಶಾಲೆಯ ಮುಖ್ಯ ಶಿಕ್ಷಕಿ ಜುಲೇಖಾ ಬೇಗಂ ಮಾತನಾಡಿ, ‘ಶಾಲಾ ಪ್ರಾರಂಭೋತ್ಸವದ ಸಂದರ್ಭದಲ್ಲಿ ಸಮುದಾಯದ ಸಹಭಾಗಿತ್ವದಿಂದಾಗಿ ಮಕ್ಕಳಲ್ಲಿ ಕಲಿಕಾ ಆಸಕ್ತಿ ಹೆಚ್ಚಾಗುವಂತೆ ಮಾಡಿದೆ. ಅಲ್ಲದೆ ನಮಗೂ ಕೂಡಾ ಹೊಸತನವನು ತಂದುಕೊಟ್ಟಿತು’ ಎಂದು ಹೇಳಿದರು.</p>.<p>ಈ ಸಂದರ್ಬದಲ್ಲಿ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಚಂದ್ರಶೇಖರ ಕದರಾಪುರ, ಪ್ರೌಢ ಶಾಲೆ ಮುಖ್ಯಶಿಕ್ಷಕ ಶರಣಗೌಡ ಪಾಟೀಲ, ಅಮರೇಶ ಅಗ್ನಿ, ಅಯ್ಯನಗೌಡ , ಕನಕರಾಯ, ಈರಪ್ಪ ಕುಂಬಾರ, ರಾಮನಗೌಡ ಪೊಲೀಸ್ ಪಾಟೀಲ, ಗದ್ದೆಪ್ಪ ಜಾಲಹಳ್ಳಿ, ಗುರುಬಸಪ್ಪ ಮೇಟಿ, ರಮೇಶ ಅಂಬಿಗೇರ, ನಿಂಗಣ್ಣ ನಾಗೂರ, ಅಮರೇಶ ಮಾರಲಬಾವಿ ಸೇರಿದಂತೆ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>