ಯಾದಗಿರಿ: ಅಬಕಾರಿ ಇಲಾಖೆ ವಿವಿಧೆಡೆ ದಾಳಿ ಮಾಡಿ ಪ್ರಮಾಣ ಮದ್ಯೆ ವಶಕ್ಕೆ ಪಡೆದಿದೆ.
ಶಹಾಪುರ ನಗರದ ಭೀಮರಾನಯಗುಡಿ ವೃತ್ತದ ಬಳಿ ಬೈಕ್ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 8.640 ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ಕಕ್ಕೇರಾ ಪಟ್ಟಣದಿಂದ ಬೆಂಚಿಗಡ್ಡಿ ಗ್ರಾಮಕ್ಕೆ ಹೋಗುವ ದಾರಿ ಮಧ್ಯದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಗಸ್ತು ಮಾಡುತ್ತಿರುವಾಗ ರಾಘವೇಂದ್ರ ಹಳ್ಳೆಪ್ಪ ದಾಸರ ಬೈಕ್ನಲ್ಲಿ ಒರಿಜಿನಲ್ ಚಾಯ್ಸ್ ವಿಸ್ಕಿ ಮುದ್ರಿತ 90 ಎಂಎಲ್ನ 240 ಟೆಟ್ರಾಪ್ಯಾಕೆಟ್ಗಳು (21.600 ಲೀಟರ್ ಮದ್ಯ) ವಶಪಡಿಸಿಕೊಳ್ಳಲಾಗಿದೆ.
ಎರಡು ಪ್ರಕರಣಗಳ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪ್ರಥಮ ವರ್ತಮಾನ ವರದಿ ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.