ಜೂನ್ 8 ರವರೆಗೂ ಸಮಯವಿದೆ. ಗುರುಮಠಕಲ್ ಡಿಪೋದಿಂದ ತೆಲಂಗಾಣಕ್ಕೆ ಬಸ್ ಇನ್ನೂ ಓಡಾಟ ಆರಂಭವಾಗಿಲ್ಲ. ಗಡಿ ಭಾಗದಲ್ಲಿ ಪರವಾನಗಿ ಇರುವ ಖಾಸಗಿ ವಾಹನಗಳ ಸಂಚಾರ ಮುಂದುವರೆದಿದೆ. ಚೆಕ್ ಪೋಸ್ಟ್ಗಳಲ್ಲಿ ಸಿಬ್ಬಂದಿಯ ಕಡಿತ ಮಾಡಲಾಗಿದೆ.
ಆಂಧ್ರ ಮತ್ತು ಕರ್ನಾಟಕದ ಗಡಿ ಭಾಗದ ಕಡೇಚೂರ ಸಮೀಪ ನಿರ್ಮಿಸಿದ ಚೆಕ್ ಪೋಸ್ಟ್ ಮೂಲಕ ಸೋಮವಾರ ಖಾಸಗಿ ವಾಹನಗಳು ಸಂಚರಿಸಿವೆ. ಕಲಬುರ್ಗಿಯಿಂದ ರಾಯಚೂರು 5, ಯಾದಗಿರಿಯಿಂದ ರಾಯಚೂರು 5, ರಾಯಚೂರು, ಸೈದಾಪುರ, ಯಾದಗಿರಿ, ಕಲಬುರ್ಗಿಗೆ 15, ತೆಲಂಗಾಣ ರಾಜ್ಯದ ಸಂಗಾರೆಡ್ಡಿ ತಾಲ್ಲೂಕಿನಿಂದ ಗೋಕಾಕ್ 1 ವಾಹನ ಸಂಚರಿಸಿವೆ.