ಯಾದಗಿರಿ: ವಡಗೇರಾ ತಾಲ್ಲೂಕಿನ ತುಮಕೂರಿನ ಕೋರ್ ಗ್ರೀನ್ ಸಕ್ಕರೆ ಕಾರ್ಖಾನೆಯವರು ರೈತರಿಗೆ ₹23 ಕೋಟಿ ಕಬ್ಬಿನ ಬಾಕಿ ನೀಡದೆ ಪರಾರಿಯಾಗಿದ್ದು, ಶೀಘ್ರವೇ ಮಾಲಿಕರನ್ನು ಪತ್ತೆ ಹಚ್ಚಿ ಬಾಕಿ ಹಣ ವಸೂಲಿ ಮಾಡಿ ರೈತರಿಗೆ ನೀಡಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಜಾಥಾ ನಡೆಸಿದರು.