ಗ್ರಾಮದ ಪಶ್ಚಿಮ ದಿಕ್ಕಿನಲ್ಲಿರುವ ನಾಗಯ್ಯ ದೇವಾಲಯವನ್ನು ರಾಷ್ಟ್ರಕೂಟರ ಕಾಲದಲ್ಲಿ ನಿರ್ಮಿಸಿರಬಹುದು. ಸೂಕ್ತ ರಕ್ಷಣೆ ಇಲ್ಲದೆ ಸಂಪೂರ್ಣವಾಗಿ ನಾಶವಾಗಿದೆ. ಗ್ರಾಮದಲ್ಲಿ ಹಲವಾರು ದೇಗುಲಗಳು ಮುಚ್ಚಿ ಹೋಗಿವೆ. ದನದ ಕೊಟ್ಟಿಗೆ ನಿರ್ಮಿಸಿದ್ದಾರೆ, ಶೌಚಾಲದ ಕಟ್ಟಡ ತಲೆ ಎತ್ತಿವೆ. ಅಲ್ಲಲ್ಲಿ ಪಾಳು ಬಿದ್ದು ಜಾಲಿ ಗಿಡ ಬೆಳೆದು ನಿಂತಿವೆ. ಅವೆಲ್ಲವುಗಳಿಗೆ ಸೂಕ್ತ ಸಂರಕ್ಷಣೆ ಅಗತ್ಯವಾಗಿದೆ ಎನ್ನುತ್ತಾರೆ ಗ್ರಾಮದ ಮುಖಂಡ ಮರೆಪ್ಪಪ್ಯಾಟಿ.