<p><strong>ಕೆಂಭಾವಿ</strong>: ‘ಚಂದ್ರಶೇಖರ ಉಡುಪ ಅವರ ಕೃಪೆಯಲ್ಲಿ ಉಂಡವರಲ್ಲಿ ನಾನೂ ಒಬ್ಬ. ಕೆಂಭಾವಿ ಬಳಗ ಬೆಳೆದು ಬಂದ ದಾರಿಯನ್ನು ವಿವರಿಸುತ್ತ ನಾವೆಲ್ಲ ಒಂದೇ ಕುಟುಂಬದಂತೆ ಒಟ್ಟಿಗೆ ಇರುವುದು ಅವರ ಆಶೀರ್ವಾದದಿಂದಲೆ ಸಾಧ್ಯವಾಗಿದೆ’ ಎಂದು ವಿವೇಕ ಜಾಗೃತ ಬಳಗದ ಗೌರವಾಧ್ಯಕ್ಷ ಸುಮಿತ್ರಪ್ಪ ಅಂಗಡಿ ಹೇಳಿದರು.</p>.<p>ಈಚೆಗೆ ನಿಧನ ಹೊಂದಿದ ಸಾಲಿಗ್ರಾಮ ಡಿವೈನ್ ಪಾರ್ಕ ಸಂಸ್ಥಾಪಕ ಎ.ಚಂದ್ರಶೇಖರ ಉಡುಪ ಅವರಿಗೆ ಪಟ್ಟಣದ ಹೋಲಿಫೇಥ್ ಶಾಲೆಯಲ್ಲಿ ವಿವೇಕ ಜಾಗೃತ ಬಳಗದಿಂದ ನುಡಿ ನಮನ ಸಲ್ಲಿಸಿ ಮಾತನಾಡಿದರು.</p>.<p>ಬಳಗದ ಕಾರ್ಯಕಾರಿ ಶರಣಬಸಯ್ಯ ಹಿರೇಮಠ ಮಾತನಾಡಿ, ‘ಚಂದ್ರಶೇಖರ ಉಡುಪ ಅವರು ಒಬ್ಬ ಮಹಾನ್ ಸಾಧಕರು. ಅವರ ಸಂದೇಶಗಳು ಬದುಕಿನ ತಲ್ಲಣಗಳಿಗೆ ಸ್ಪಂದಿಸುತ್ತವೆ. ಎಲ್ಲ ಧರ್ಮಗಳ ಸಾಮರಸ್ಯದ ಮೂಲಕ ಏಕತೆಯ ಬೆಳಕು ತಂದರು. ಅವರ ತತ್ವ-ಸಿದ್ಧಾಂತಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸಿದಂತಾಗುತ್ತದೆ’ ಎಂದು ಹೇಳಿದರು.</p>.<p>ಕೆಂಭಾವಿ ಬಳಗದ ಅಧ್ಯಕ್ಷ ಡಾ. ಎ.ಜಿ.ಹಿರೇಮಠ, ಹಳ್ಳೆಪ್ಪಗೌಡ ಪಾಟೀಲ, ರಮೇಶ ಸೊನ್ನದ, ಗುಡದಯ್ಯ ದಾವಣಗೇರಿ, ಡಾ. ಗೀತಾ ಹಿರೇಮಠ, ಉಮಾದೇವಿ ಪಾಟೀಲ, ಡಾ.ಶೈಲಜಾ ಹಿರೇಮಠ, ಪವಿತ್ರಾ ವಡ್ಡೆ, ಅಕ್ಕಮಹಾದೇವಿ ಹಿರೇಮಠ, ರೇಖಾ ಬೈಚಬಾಳ ಮತ್ತು ಶಾಲೆಯ ಮಕ್ಕಳು ಸಭೆಯಲ್ಲಿ ಭಾಗವಹಿಸಿದರು.</p>.<p>ಈ ವೇಳೆ ಪ್ರತಿನಿತ್ಯ ಸತ್ಸಂಗದಂತೆ ಪ್ರತಿಜ್ಞಾ ವಿಧಿ, ಓಂಕಾರ, ರಾಮರಕ್ಷಾಸತೂತ್ರ ಪಠಣ, ಭಜನೆ ಇತ್ಯಾದಿಗಳು ನಡೆದವು. ಕಾರ್ಯಕ್ರಮ ಮತ್ತು ಪ್ರಸಾದದ ವ್ಯವಸ್ಥೆಯನ್ನು ಶಾಲೆ ಮುಖ್ಯಸ್ಥ ನರಸಿಂಹ ವಡ್ಡೆ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆಂಭಾವಿ</strong>: ‘ಚಂದ್ರಶೇಖರ ಉಡುಪ ಅವರ ಕೃಪೆಯಲ್ಲಿ ಉಂಡವರಲ್ಲಿ ನಾನೂ ಒಬ್ಬ. ಕೆಂಭಾವಿ ಬಳಗ ಬೆಳೆದು ಬಂದ ದಾರಿಯನ್ನು ವಿವರಿಸುತ್ತ ನಾವೆಲ್ಲ ಒಂದೇ ಕುಟುಂಬದಂತೆ ಒಟ್ಟಿಗೆ ಇರುವುದು ಅವರ ಆಶೀರ್ವಾದದಿಂದಲೆ ಸಾಧ್ಯವಾಗಿದೆ’ ಎಂದು ವಿವೇಕ ಜಾಗೃತ ಬಳಗದ ಗೌರವಾಧ್ಯಕ್ಷ ಸುಮಿತ್ರಪ್ಪ ಅಂಗಡಿ ಹೇಳಿದರು.</p>.<p>ಈಚೆಗೆ ನಿಧನ ಹೊಂದಿದ ಸಾಲಿಗ್ರಾಮ ಡಿವೈನ್ ಪಾರ್ಕ ಸಂಸ್ಥಾಪಕ ಎ.ಚಂದ್ರಶೇಖರ ಉಡುಪ ಅವರಿಗೆ ಪಟ್ಟಣದ ಹೋಲಿಫೇಥ್ ಶಾಲೆಯಲ್ಲಿ ವಿವೇಕ ಜಾಗೃತ ಬಳಗದಿಂದ ನುಡಿ ನಮನ ಸಲ್ಲಿಸಿ ಮಾತನಾಡಿದರು.</p>.<p>ಬಳಗದ ಕಾರ್ಯಕಾರಿ ಶರಣಬಸಯ್ಯ ಹಿರೇಮಠ ಮಾತನಾಡಿ, ‘ಚಂದ್ರಶೇಖರ ಉಡುಪ ಅವರು ಒಬ್ಬ ಮಹಾನ್ ಸಾಧಕರು. ಅವರ ಸಂದೇಶಗಳು ಬದುಕಿನ ತಲ್ಲಣಗಳಿಗೆ ಸ್ಪಂದಿಸುತ್ತವೆ. ಎಲ್ಲ ಧರ್ಮಗಳ ಸಾಮರಸ್ಯದ ಮೂಲಕ ಏಕತೆಯ ಬೆಳಕು ತಂದರು. ಅವರ ತತ್ವ-ಸಿದ್ಧಾಂತಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸಿದಂತಾಗುತ್ತದೆ’ ಎಂದು ಹೇಳಿದರು.</p>.<p>ಕೆಂಭಾವಿ ಬಳಗದ ಅಧ್ಯಕ್ಷ ಡಾ. ಎ.ಜಿ.ಹಿರೇಮಠ, ಹಳ್ಳೆಪ್ಪಗೌಡ ಪಾಟೀಲ, ರಮೇಶ ಸೊನ್ನದ, ಗುಡದಯ್ಯ ದಾವಣಗೇರಿ, ಡಾ. ಗೀತಾ ಹಿರೇಮಠ, ಉಮಾದೇವಿ ಪಾಟೀಲ, ಡಾ.ಶೈಲಜಾ ಹಿರೇಮಠ, ಪವಿತ್ರಾ ವಡ್ಡೆ, ಅಕ್ಕಮಹಾದೇವಿ ಹಿರೇಮಠ, ರೇಖಾ ಬೈಚಬಾಳ ಮತ್ತು ಶಾಲೆಯ ಮಕ್ಕಳು ಸಭೆಯಲ್ಲಿ ಭಾಗವಹಿಸಿದರು.</p>.<p>ಈ ವೇಳೆ ಪ್ರತಿನಿತ್ಯ ಸತ್ಸಂಗದಂತೆ ಪ್ರತಿಜ್ಞಾ ವಿಧಿ, ಓಂಕಾರ, ರಾಮರಕ್ಷಾಸತೂತ್ರ ಪಠಣ, ಭಜನೆ ಇತ್ಯಾದಿಗಳು ನಡೆದವು. ಕಾರ್ಯಕ್ರಮ ಮತ್ತು ಪ್ರಸಾದದ ವ್ಯವಸ್ಥೆಯನ್ನು ಶಾಲೆ ಮುಖ್ಯಸ್ಥ ನರಸಿಂಹ ವಡ್ಡೆ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>