<p>ಕೊಡೇಕಲ್ಲ (ಹುಣಸಗಿ): ಇಲ್ಲಿನ ಕಾಲಜ್ಞಾನಿ ಕೊಡೇಕಲ್ಲ ಬಸವಣ್ಣನವರ ಜಾತ್ರೆ ಶುಕ್ರವಾರ ಹಾಗೂ ಶನಿವಾರ ಶ್ರದ್ಧಾ ಭಕ್ತಿಯಿಂದ ನಡೆಯಿತು.</p>.<p>ಶುಕ್ರವಾರ ರಾತ್ರಿ ಹುಣ್ಣಿಮೆ ದಿನ ಮಹಲಿನ ಮಠದ ವೃಷಬೇಂದ್ರ ಅಪ್ಪನವರ ಸಾನ್ನಿಧ್ಯದಲ್ಲಿ ಜೋಡು ಪಲ್ಲಕ್ಕಿಗಳಿಗೆ ಕಳಸಾರೋಹಣ, ಅಷ್ಟ ವಿಧಾರ್ವನೆ ಪೂಜೆ ಜರುಗಿತು. ನಂತರ ಕಲಾತಂಡಗಳಿಂದ ಭಜನೆ ಹಾಗೂ ಸಂಗೀತ ಕಾರ್ಯಕ್ರಮ ನಡೆಯಿತು.</p>.<p>ಶನಿವಾರ ಬೆಳಿಗ್ಗೆ ಗ್ರಾಮದ ಗುಡಿಯ ಮುಂದೆ ಅಲಂಕರಿಸಿ ಕೂರಿಸಿದ್ದ ಜೋಡು ಪಲ್ಲಕ್ಕಿಗಳಿಗೆ ವೃಷಬೇಂದ್ರ ಅಪ್ಪ ಹಾಗೂ ಗ್ರಾಮದ ಬಾರಾ ಬಲೂತಿ ವತನದಾರರು ಪೂಜಿಸಿ ಉತ್ಸವಕ್ಕೆ ಚಾಲನೆ ನೀಡಿದರು.</p>.<p>ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿದ ಜೋಡು ಪಲ್ಲಕ್ಕಿಗಳಿಗೆ ದಾರಿಯುದ್ದಕ್ಕೂ ಭಕ್ತರು ಶ್ರದ್ಧಾ ಭಕ್ತಿಯಿಂದ ನಮಸ್ಕರಿಸಿ ಹೂ, ಉತ್ತತ್ತಿ, ಬಾಳೆಹಣ್ಣು ಎರಚಿ ಭಕ್ತಿ ಸಮರ್ಪಿಸಿದರು.</p>.<p>‘ಕೋವಿಡ್ ಕಾರಣದಿಂದಾಗಿ ಎರಡು ಬಾರಿ ಜಾತ್ರೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಪಾಲ್ಗೊಂಡಿರುವದು ಖುಷಿ ತಂದಿದೆ’ ಎಂದು ಹೊಕ್ರಾಣಿ ಭಕ್ತರಾದ ಸಂಗಮೇಶ ಹಾಗೂ ಸಂಗಪ್ಪ ಕಗ್ಗೋಡ ತಿಳಿಸಿದರು.</p>.<p>‘6 ವರ್ಷಗಳಿಂದಲೂ ಪಾದಯಾತ್ರೆ ಮೂಲಕ ಕೊಡೇಕಲ್ಲ ಜಾತ್ರೆಗೆ ಆಗಮಿಸುತ್ತಿದ್ದೇವೆ. ಆದರೆ ಕೋವಿಡ್ ಸಂದರ್ಭದಲ್ಲಿ ಜಾತ್ರೆಗೆ ಅವಕಾಶವಿಲ್ಲದ ಕಾರಣ ಬೇಸರವಾಗಿತ್ತು. ಈ ಬಾರಿ ದೇವರ ದರ್ಶನ ಹಾಗೂ ಪಲ್ಲಕ್ಕಿ ಸೇವೆಯಲ್ಲಿ ಪಾಲ್ಗೊಂಡಿದ್ದರಿಂದಾಗಿ ಸಂತಸವಾಗಿದೆ’ ಎಂದು ದೇವರಹಿಪ್ಪರಗಿ ಬಳಿಯ ದೇವೂರ ಗ್ರಾಮದ ರಮೇಶ ಜೋಗೂರ ಹಾಗೂ ಮಲ್ಲಿಕಾರ್ಜುನ ಜೋಗೂರ ತಿಳಿಸಿದರು.</p>.<p>ಹುಣಸಗಿ, ವಿಜಯಪುರ, ಆಹೇರಿ, ಹೊಕ್ರಾಣಿ, ನಂದ್ಯಾಳ, ನಾಲತವಾಡ, ಮುದ್ದೇಬಿಹಾಳ, ಸುರಪುರ, ದ್ಯಾಮನಹಾಳ ಪಟ್ಟಣ ಜತೆಗೆ ಸುತ್ತಲಿನ ಗ್ರಾಮಗಳ ಜನರು ಪಾಲ್ಗೊಂಡಿದ್ದರು.</p>.<p>ಕೊಡೇಕಲ್ಲ ಪೊಲೀಸ್ ಠಾಣೆಯ ಪಿಎಸ್ಐ ಅಧಿಕಾರಿಗಳಾದ ಬಾಶುಮೀಯ ಕೊಂಚೂರು, ಕೃಷ್ಣಮೂರ್ತಿ ಪುರೋಹಿತ್, ಸಿದ್ದೇಶ್ವರ ಗರಡೆ ನೇತೃತ್ವದಲ್ಲಿ ಸಿಬ್ಬಂದಿ ಬಂದೋಬಸ್ತ್ ಒದಗಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೊಡೇಕಲ್ಲ (ಹುಣಸಗಿ): ಇಲ್ಲಿನ ಕಾಲಜ್ಞಾನಿ ಕೊಡೇಕಲ್ಲ ಬಸವಣ್ಣನವರ ಜಾತ್ರೆ ಶುಕ್ರವಾರ ಹಾಗೂ ಶನಿವಾರ ಶ್ರದ್ಧಾ ಭಕ್ತಿಯಿಂದ ನಡೆಯಿತು.</p>.<p>ಶುಕ್ರವಾರ ರಾತ್ರಿ ಹುಣ್ಣಿಮೆ ದಿನ ಮಹಲಿನ ಮಠದ ವೃಷಬೇಂದ್ರ ಅಪ್ಪನವರ ಸಾನ್ನಿಧ್ಯದಲ್ಲಿ ಜೋಡು ಪಲ್ಲಕ್ಕಿಗಳಿಗೆ ಕಳಸಾರೋಹಣ, ಅಷ್ಟ ವಿಧಾರ್ವನೆ ಪೂಜೆ ಜರುಗಿತು. ನಂತರ ಕಲಾತಂಡಗಳಿಂದ ಭಜನೆ ಹಾಗೂ ಸಂಗೀತ ಕಾರ್ಯಕ್ರಮ ನಡೆಯಿತು.</p>.<p>ಶನಿವಾರ ಬೆಳಿಗ್ಗೆ ಗ್ರಾಮದ ಗುಡಿಯ ಮುಂದೆ ಅಲಂಕರಿಸಿ ಕೂರಿಸಿದ್ದ ಜೋಡು ಪಲ್ಲಕ್ಕಿಗಳಿಗೆ ವೃಷಬೇಂದ್ರ ಅಪ್ಪ ಹಾಗೂ ಗ್ರಾಮದ ಬಾರಾ ಬಲೂತಿ ವತನದಾರರು ಪೂಜಿಸಿ ಉತ್ಸವಕ್ಕೆ ಚಾಲನೆ ನೀಡಿದರು.</p>.<p>ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿದ ಜೋಡು ಪಲ್ಲಕ್ಕಿಗಳಿಗೆ ದಾರಿಯುದ್ದಕ್ಕೂ ಭಕ್ತರು ಶ್ರದ್ಧಾ ಭಕ್ತಿಯಿಂದ ನಮಸ್ಕರಿಸಿ ಹೂ, ಉತ್ತತ್ತಿ, ಬಾಳೆಹಣ್ಣು ಎರಚಿ ಭಕ್ತಿ ಸಮರ್ಪಿಸಿದರು.</p>.<p>‘ಕೋವಿಡ್ ಕಾರಣದಿಂದಾಗಿ ಎರಡು ಬಾರಿ ಜಾತ್ರೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಪಾಲ್ಗೊಂಡಿರುವದು ಖುಷಿ ತಂದಿದೆ’ ಎಂದು ಹೊಕ್ರಾಣಿ ಭಕ್ತರಾದ ಸಂಗಮೇಶ ಹಾಗೂ ಸಂಗಪ್ಪ ಕಗ್ಗೋಡ ತಿಳಿಸಿದರು.</p>.<p>‘6 ವರ್ಷಗಳಿಂದಲೂ ಪಾದಯಾತ್ರೆ ಮೂಲಕ ಕೊಡೇಕಲ್ಲ ಜಾತ್ರೆಗೆ ಆಗಮಿಸುತ್ತಿದ್ದೇವೆ. ಆದರೆ ಕೋವಿಡ್ ಸಂದರ್ಭದಲ್ಲಿ ಜಾತ್ರೆಗೆ ಅವಕಾಶವಿಲ್ಲದ ಕಾರಣ ಬೇಸರವಾಗಿತ್ತು. ಈ ಬಾರಿ ದೇವರ ದರ್ಶನ ಹಾಗೂ ಪಲ್ಲಕ್ಕಿ ಸೇವೆಯಲ್ಲಿ ಪಾಲ್ಗೊಂಡಿದ್ದರಿಂದಾಗಿ ಸಂತಸವಾಗಿದೆ’ ಎಂದು ದೇವರಹಿಪ್ಪರಗಿ ಬಳಿಯ ದೇವೂರ ಗ್ರಾಮದ ರಮೇಶ ಜೋಗೂರ ಹಾಗೂ ಮಲ್ಲಿಕಾರ್ಜುನ ಜೋಗೂರ ತಿಳಿಸಿದರು.</p>.<p>ಹುಣಸಗಿ, ವಿಜಯಪುರ, ಆಹೇರಿ, ಹೊಕ್ರಾಣಿ, ನಂದ್ಯಾಳ, ನಾಲತವಾಡ, ಮುದ್ದೇಬಿಹಾಳ, ಸುರಪುರ, ದ್ಯಾಮನಹಾಳ ಪಟ್ಟಣ ಜತೆಗೆ ಸುತ್ತಲಿನ ಗ್ರಾಮಗಳ ಜನರು ಪಾಲ್ಗೊಂಡಿದ್ದರು.</p>.<p>ಕೊಡೇಕಲ್ಲ ಪೊಲೀಸ್ ಠಾಣೆಯ ಪಿಎಸ್ಐ ಅಧಿಕಾರಿಗಳಾದ ಬಾಶುಮೀಯ ಕೊಂಚೂರು, ಕೃಷ್ಣಮೂರ್ತಿ ಪುರೋಹಿತ್, ಸಿದ್ದೇಶ್ವರ ಗರಡೆ ನೇತೃತ್ವದಲ್ಲಿ ಸಿಬ್ಬಂದಿ ಬಂದೋಬಸ್ತ್ ಒದಗಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>