ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ, ‌ಡೆಕ್ಕನ್ ಹೆರಾಲ್ಡ್‌ನಿಂದ ಕಾರ್ಮಿಕ ದಿನಾಚರಣೆ ಆಚರಣೆ

Published 1 ಮೇ 2023, 15:00 IST
Last Updated 1 ಮೇ 2023, 15:00 IST
ಅಕ್ಷರ ಗಾತ್ರ

ಯಾದಗಿರಿ: ಪ್ರಜಾವಾಣಿ ಮತ್ತು ‌ಡೆಕ್ಕನ್ ಹೆರಾಲ್ಡ್‌ ವತಿಯಿಂದ ಸೋಮವಾರ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಕಾರ್ಮಿಕರ ದಿನಾಚರಣೆ ಆಚರಿಸಲಾಯಿತು.

ಕೆಕ್‌ ಕತ್ತರಿಸಿ ಪರಸ್ಪರ ಕಾರ್ಮಿಕ ದಿನಾಚರಣೆಯ ಶುಭಾಶಯ ವಿನಿಮಯ ಮಾಡಿಕೊಳ್ಳಲಾಯಿತು. ನಂತರ ವೃತ್ತದಲ್ಲಿ ಕೆಲವರಿಗೆ ಕೇಕ್‌, ಖಾರಾ ಬೂಂದಿ ವಿತರಿಸಲಾಯಿತು.

ಪ್ರಸಾರಂಗ ಪ್ರತಿನಿಧಿ‌ ಮಹಾಂತೇಶ ಬಸುಗುಂಡೆ ಮಾತನಾಡಿ, 'ಕಾರ್ಮಿಕರ ಶ್ರಮ ಪ್ರಮುಖ್ಯವಾಗಿದ್ದು, ಪತ್ರಿಕೆಯನ್ನು ಮನೆ ಮನೆಗೆ ತಲುಪಿಸುವಲ್ಲಿ ಕಾರ್ಮಿಕರ ಪಾತ್ರ ಅಪಾರವಾಗಿದೆ' ಎಂದು ಅಭಿಪ್ರಾಯಿಸಿದರು.

ಎಜೆಂಟ್‌ರಾದ ಅಮರಯ್ಯ ಸ್ವಾಮಿ ಹಿರೇಮಠ, ಗುಂಡೇರಾವ, ಹಾಕರ್ಸ್ ಮಂಜುನಾಥ, ಬಸವರಾಜ‍, ಪಿಂಟು ಹರೀಶ, ಗಣೇಶ, ವೆಂಕಟೇಶ, ಪ್ರಜಾವಾಣಿ ಜಿಲ್ಲಾ ವರದಿಗಾರ ಬಿ.ಜಿ.ಪ್ರವೀಣಕುಮಾರ, ಪ್ರಸಾರಂಗ ಪ್ರತಿನಿಧಿ‌ ಮಹಾಂತೇಶ ಬಸುಗುಂಡೆ, ಛಾಯಾಚಿತ್ರಗ್ರಾಹಕ ರಾಜಕುಮಾರ ನಳ್ಳಿಕರ ಸೇರಿದಂತೆ ಅನೇಕರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT