<p><strong>ಸುರಪುರ: </strong>‘ಸ್ವಾತಂತ್ರ್ಯ ಚಳವಳಿಯಲ್ಲಿ ವಕೀಲರ ಕೊಡುಗೆ ಅನನ್ಯವಾಗಿದೆ’ ಎಂದು ವಕೀಲ ನಿಂಗಣ್ಣ ಚಿಂಚೋಡಿ ಹೇಳಿದರು.</p>.<p>ನಗರದ ವಕೀಲರ ಕಾರ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಕೀಲರ ದಿನಾಚರಣೆಯಲ್ಲಿ ಅವರು ಮಾತನಾಡಿದರು.</p>.<p>‘ಸ್ವಾತಂತ್ರ್ಯ ಹೋರಾಟಗಾರರಲ್ಲಿ ಬಹುತೇಕರು ವಕೀಲರೇ ಆಗಿದ್ದರು. ಮಹಾತ್ಮಾ ಗಾಂಧಿ, ಜವಾಹರಲಾಲ ನೆಹರು, ಸರ್ದಾರ ವಲ್ಲಭಭಾಯಿ ಪಟೇಲ್ ಅವರಂಥ ದಿಗ್ಗಜರು ವಕೀಲಿ ವೃತ್ತಿ ಮಾಡಿದವರು. ಹೀಗಾಗಿ ವಕೀಲರಿಗೆ ಸಮಾಜದಲ್ಲಿ ವಿಶಿಷ್ಟ ಸ್ಥಾನಮಾನವಿದೆ’ ಎಂದರು.</p>.<p>ವಕೀಲ ದೇವೀಂದ್ರಪ್ಪ ಬೇವಿನಕಟ್ಟಿ ಮಾತನಾಡಿ, ‘ವಕೀಲರಾಗಿದ್ದ ಪ್ರಥಮ ರಾಷ್ಟ್ರಪತಿ ಬಾಬುರಾಜೇಂದ್ರ ಪ್ರಸಾದ ಅವರ ಸವಿನೆನಪಲ್ಲಿ ವಕೀಲರ ದಿನಾಚರಣೆ ಆಚರಿಸಲಾಗುತ್ತಿದೆ. ದೇಶ ಅಭಿವೃದ್ಧಿ ಪಥದಲ್ಲಿ ಸಾಗಲು ವಕೀಲರ ಕೊಡುಗೆ ಮಹತ್ತರವಾಗಿದೆ’ ಎಂದರು.</p>.<p>ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಬಸವರಾಜ ಕಿಲ್ಲೇದಾರ ಮಾತನಾಡಿ, ‘ಇಂದಿನ ವಕೀಲರು ದೇಶಕ್ಕೆ ಸ್ವಾತಂತ್ರ ತಂದು ಕೊಟ್ಟ ವಕೀಲರ ಮಾರ್ಗದಲ್ಲಿ ನಡೆಯಬೇಕು. ಅವರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಕೀಲಿ ವೃತ್ತಿಗೆ ಘನತೆ ತರಬೇಕು’ ಎಂದು ಕರೆ ನೀಡಿದರು.</p>.<p>ಬಸವಲಿಂಗಪ್ಪ ಪಾಟೀಲ, ಜಿ.ಎಸ್. ಪಾಟೀಲ, ಉದಯಸಿಂಗ್, ಮಹ್ಮದ್ ಹುಸೇನ್, ರಮಾನಂದ ಕವಲಿ, ಜಿ.ಆರ್. ಬನ್ನಾಳ, ಅಶೋಕ ಕವಲಿ, ಶ್ರೀದೇವಿ ಪಾಟೀಲ, ಭೀಮಣ್ಣ ಹೊಸಮನಿ, ಎಸ್. ಸಿದ್ರಾಮಪ್ಪ, ಸುರೇಂದ್ರ ದೊಡ್ಡಮನಿ, ಆದಪ್ಪ ಹೊಸಮನಿ, ಪ್ರಕಾಶ ಕವಲಿ, ಸುಭಾಷ ಬಿರಾದಾರ ಇದ್ದರು.</p>.<p>ಸಂಘದ ಕಾರ್ಯದರ್ಶಿ ಗೋಪಾಲ ತಳವಾರ ನಿರೂಪಿಸಿದರು. ಸಂತೋಷ ಗಾರಂಪಳ್ಳಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುರಪುರ: </strong>‘ಸ್ವಾತಂತ್ರ್ಯ ಚಳವಳಿಯಲ್ಲಿ ವಕೀಲರ ಕೊಡುಗೆ ಅನನ್ಯವಾಗಿದೆ’ ಎಂದು ವಕೀಲ ನಿಂಗಣ್ಣ ಚಿಂಚೋಡಿ ಹೇಳಿದರು.</p>.<p>ನಗರದ ವಕೀಲರ ಕಾರ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಕೀಲರ ದಿನಾಚರಣೆಯಲ್ಲಿ ಅವರು ಮಾತನಾಡಿದರು.</p>.<p>‘ಸ್ವಾತಂತ್ರ್ಯ ಹೋರಾಟಗಾರರಲ್ಲಿ ಬಹುತೇಕರು ವಕೀಲರೇ ಆಗಿದ್ದರು. ಮಹಾತ್ಮಾ ಗಾಂಧಿ, ಜವಾಹರಲಾಲ ನೆಹರು, ಸರ್ದಾರ ವಲ್ಲಭಭಾಯಿ ಪಟೇಲ್ ಅವರಂಥ ದಿಗ್ಗಜರು ವಕೀಲಿ ವೃತ್ತಿ ಮಾಡಿದವರು. ಹೀಗಾಗಿ ವಕೀಲರಿಗೆ ಸಮಾಜದಲ್ಲಿ ವಿಶಿಷ್ಟ ಸ್ಥಾನಮಾನವಿದೆ’ ಎಂದರು.</p>.<p>ವಕೀಲ ದೇವೀಂದ್ರಪ್ಪ ಬೇವಿನಕಟ್ಟಿ ಮಾತನಾಡಿ, ‘ವಕೀಲರಾಗಿದ್ದ ಪ್ರಥಮ ರಾಷ್ಟ್ರಪತಿ ಬಾಬುರಾಜೇಂದ್ರ ಪ್ರಸಾದ ಅವರ ಸವಿನೆನಪಲ್ಲಿ ವಕೀಲರ ದಿನಾಚರಣೆ ಆಚರಿಸಲಾಗುತ್ತಿದೆ. ದೇಶ ಅಭಿವೃದ್ಧಿ ಪಥದಲ್ಲಿ ಸಾಗಲು ವಕೀಲರ ಕೊಡುಗೆ ಮಹತ್ತರವಾಗಿದೆ’ ಎಂದರು.</p>.<p>ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಬಸವರಾಜ ಕಿಲ್ಲೇದಾರ ಮಾತನಾಡಿ, ‘ಇಂದಿನ ವಕೀಲರು ದೇಶಕ್ಕೆ ಸ್ವಾತಂತ್ರ ತಂದು ಕೊಟ್ಟ ವಕೀಲರ ಮಾರ್ಗದಲ್ಲಿ ನಡೆಯಬೇಕು. ಅವರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಕೀಲಿ ವೃತ್ತಿಗೆ ಘನತೆ ತರಬೇಕು’ ಎಂದು ಕರೆ ನೀಡಿದರು.</p>.<p>ಬಸವಲಿಂಗಪ್ಪ ಪಾಟೀಲ, ಜಿ.ಎಸ್. ಪಾಟೀಲ, ಉದಯಸಿಂಗ್, ಮಹ್ಮದ್ ಹುಸೇನ್, ರಮಾನಂದ ಕವಲಿ, ಜಿ.ಆರ್. ಬನ್ನಾಳ, ಅಶೋಕ ಕವಲಿ, ಶ್ರೀದೇವಿ ಪಾಟೀಲ, ಭೀಮಣ್ಣ ಹೊಸಮನಿ, ಎಸ್. ಸಿದ್ರಾಮಪ್ಪ, ಸುರೇಂದ್ರ ದೊಡ್ಡಮನಿ, ಆದಪ್ಪ ಹೊಸಮನಿ, ಪ್ರಕಾಶ ಕವಲಿ, ಸುಭಾಷ ಬಿರಾದಾರ ಇದ್ದರು.</p>.<p>ಸಂಘದ ಕಾರ್ಯದರ್ಶಿ ಗೋಪಾಲ ತಳವಾರ ನಿರೂಪಿಸಿದರು. ಸಂತೋಷ ಗಾರಂಪಳ್ಳಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>