<p><strong>ಸುರಪುರ:</strong> ತಾಲ್ಲೂಕಿನ ಕೋನ್ಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳ ಕೊರತೆ ಎದುರಿಸುತ್ತಿತ್ತು.</p>.<p>2016ರಲ್ಲಿ ಸಹ ಶಿಕ್ಷಕರಾಗಿ ಈ ಶಾಲೆಯಲ್ಲಿ ಸೇವೆಗೆ ಸೇರಿದ ದೇವದುರ್ಗ ತಾಲ್ಲೂಕಿನ ದಂಡಬಳಿ ಗ್ರಾಮದ ಬಸಮ್ಮ ಅಯ್ಯನಗೌಡ ಪಾಟೀಲ ಅವರಿಗೆ ಮಕ್ಕಳ ದಾಖಲಾತಿ ಜೊತೆಗೆ ಹಾಜರಾತಿ ಹೆಚ್ಚಿಸಬೇಕೆನ್ನುವ ಹಂಬಲ. ಇದಕ್ಕೆ ಅವರು ಆರಿಸಿಕೊಂಡಿದ್ದು ‘ಆಟದೊಂದಿಗೆ ಕಲಿಕೆ’ ಎಂಬ ವಿಧಾನ.</p>.<p>ಮಕ್ಕಳು ಆಟದಲ್ಲಿ ಅಭಿರುಚಿ ಹೊಂದಿದ್ದಾರೆ ಎಂದು ಕಂಡುಕೊಂಡ ಅವರು ವೈವಿಧ್ಯಮಯ ಕಲಿಕೋಪಕರಣಗಳನ್ನು ಸ್ವಂತ ಹಣದಲ್ಲಿ ತಯಾರಿಸಿದರು. ಜೊತೆಗೆ ಚಕಾರ, ಹುಲಿಮನಿ ಇತರ ಜನಪ್ರಿಯ ಗ್ರಾಮೀಣ ಕ್ರೀಡೆಗಳ ಮೂಲಕ ಬೋಧನೆ ಆರಂಭಿಸಿದರು.</p>.<p>ತಾವು ನಿತ್ಯ ಆಡುವ ಆಟದ ಮೂಲಕ ಬೋಧಿಸುತ್ತಿದ್ದರಿಂದ ಕ್ರಮೇಣ ಮಕ್ಕಳು ಆಕರ್ಷಿತರಾಗಿ ನಿತ್ಯವೂ ಶಾಲೆಗೆ ಬರತೊಡಗಿದರು. ಪಾಠದಲ್ಲೂ ಪ್ರಗತಿ ಸಾಧಿಸಿ ಉತ್ತಮ ಅಂಕ ಪಡೆಯತೊಡಗಿದರು. ಕ್ರಮೇಣ ಮಕ್ಕಳ ಹಾಜರಾತಿ ಹೆಚ್ಚಾಗತೊಡಗಿತ್ತು.</p>.<p>2016ರಲ್ಲಿ 100ರೊಳಗೆ ಇದ್ದ ದಾಖಲಾತಿ ಈಗ 150ಕ್ಕೂ ಹೆಚ್ಚಾಗಿದೆ. ಹಾಜರಾತಿ ಶೇ 95ರಷ್ಟು ಇರುವುದು ಬಸಮ್ಮ ಅವರ ಪ್ರಯತ್ನದ ಫಲ. ಬಸಮ್ಮ ಈಗ ಪ್ರಭಾರ ಮುಖ್ಯ ಶಿಕ್ಷಕಿ.</p>.<p>ಪಠ್ಯದ ಜೊತೆಗೆ ಟೇಲರಿಂಗ್, ಕಸೂತಿ, ಕ್ರಾಫ್ಟ್ ಇತರ ಕರಕುಶಲ ಕಲೆಗಳನ್ನು ಕಲಿಸುತ್ತಾರೆ. ಪ್ರತಿಭಾ ಕಾರಂಜಿ ಇತರ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸುತ್ತಾರೆ. ಪರಿಣಾಮ ಈಗ ಇವರ ಶಿಷ್ಯಂದಿರು ವಿಶೇಷವಾಗಿ ಬಾಲಕಿಯರು ಕಾಲೇಜು ಮೆಟ್ಟಿಲನ್ನು ಏರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುರಪುರ:</strong> ತಾಲ್ಲೂಕಿನ ಕೋನ್ಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳ ಕೊರತೆ ಎದುರಿಸುತ್ತಿತ್ತು.</p>.<p>2016ರಲ್ಲಿ ಸಹ ಶಿಕ್ಷಕರಾಗಿ ಈ ಶಾಲೆಯಲ್ಲಿ ಸೇವೆಗೆ ಸೇರಿದ ದೇವದುರ್ಗ ತಾಲ್ಲೂಕಿನ ದಂಡಬಳಿ ಗ್ರಾಮದ ಬಸಮ್ಮ ಅಯ್ಯನಗೌಡ ಪಾಟೀಲ ಅವರಿಗೆ ಮಕ್ಕಳ ದಾಖಲಾತಿ ಜೊತೆಗೆ ಹಾಜರಾತಿ ಹೆಚ್ಚಿಸಬೇಕೆನ್ನುವ ಹಂಬಲ. ಇದಕ್ಕೆ ಅವರು ಆರಿಸಿಕೊಂಡಿದ್ದು ‘ಆಟದೊಂದಿಗೆ ಕಲಿಕೆ’ ಎಂಬ ವಿಧಾನ.</p>.<p>ಮಕ್ಕಳು ಆಟದಲ್ಲಿ ಅಭಿರುಚಿ ಹೊಂದಿದ್ದಾರೆ ಎಂದು ಕಂಡುಕೊಂಡ ಅವರು ವೈವಿಧ್ಯಮಯ ಕಲಿಕೋಪಕರಣಗಳನ್ನು ಸ್ವಂತ ಹಣದಲ್ಲಿ ತಯಾರಿಸಿದರು. ಜೊತೆಗೆ ಚಕಾರ, ಹುಲಿಮನಿ ಇತರ ಜನಪ್ರಿಯ ಗ್ರಾಮೀಣ ಕ್ರೀಡೆಗಳ ಮೂಲಕ ಬೋಧನೆ ಆರಂಭಿಸಿದರು.</p>.<p>ತಾವು ನಿತ್ಯ ಆಡುವ ಆಟದ ಮೂಲಕ ಬೋಧಿಸುತ್ತಿದ್ದರಿಂದ ಕ್ರಮೇಣ ಮಕ್ಕಳು ಆಕರ್ಷಿತರಾಗಿ ನಿತ್ಯವೂ ಶಾಲೆಗೆ ಬರತೊಡಗಿದರು. ಪಾಠದಲ್ಲೂ ಪ್ರಗತಿ ಸಾಧಿಸಿ ಉತ್ತಮ ಅಂಕ ಪಡೆಯತೊಡಗಿದರು. ಕ್ರಮೇಣ ಮಕ್ಕಳ ಹಾಜರಾತಿ ಹೆಚ್ಚಾಗತೊಡಗಿತ್ತು.</p>.<p>2016ರಲ್ಲಿ 100ರೊಳಗೆ ಇದ್ದ ದಾಖಲಾತಿ ಈಗ 150ಕ್ಕೂ ಹೆಚ್ಚಾಗಿದೆ. ಹಾಜರಾತಿ ಶೇ 95ರಷ್ಟು ಇರುವುದು ಬಸಮ್ಮ ಅವರ ಪ್ರಯತ್ನದ ಫಲ. ಬಸಮ್ಮ ಈಗ ಪ್ರಭಾರ ಮುಖ್ಯ ಶಿಕ್ಷಕಿ.</p>.<p>ಪಠ್ಯದ ಜೊತೆಗೆ ಟೇಲರಿಂಗ್, ಕಸೂತಿ, ಕ್ರಾಫ್ಟ್ ಇತರ ಕರಕುಶಲ ಕಲೆಗಳನ್ನು ಕಲಿಸುತ್ತಾರೆ. ಪ್ರತಿಭಾ ಕಾರಂಜಿ ಇತರ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸುತ್ತಾರೆ. ಪರಿಣಾಮ ಈಗ ಇವರ ಶಿಷ್ಯಂದಿರು ವಿಶೇಷವಾಗಿ ಬಾಲಕಿಯರು ಕಾಲೇಜು ಮೆಟ್ಟಿಲನ್ನು ಏರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>