<p><strong>ಸುರಪುರ</strong>: ಕಳೆದ ನಾಲ್ಕೈದು ದಿನಗಳ ಹಿಂದೆ ತಾಲ್ಲೂಕಿನ ಸಿದ್ದಾಪುರ ಹಾಗೂ ಮಾಚಗುಂಡಾಳ ಪ್ರದೇಶದಲ್ಲಿ ಕಾಣಿಸಿಕೊಂಡು ಭೀತಿ ಸೃಷ್ಟಿಸಿರುವ ಚಿರತೆಯ ಶೋಧ ಕಾರ್ಯ ಸೋಮವಾರವೂ ಮುಂದುವರೆದಿದ್ದು, ಇದುವರೆಗೂ ಚಿರತೆಯ ಯಾವ ಕುರುಹುಗಳು ಕಂಡು ಬಂದಿಲ್ಲ. </p>.<p>ಚಿರತೆ ನಾಯಿ ತಿಂದು ಹಾಕಿದ ಮಾಚಗುಂಡಾಳ ಪ್ರದೇಶದಲ್ಲಿ ಬೋನ್ ಇಡಲಾಗಿದೆ. ಕ್ಯಾಮೆರಾ ಟ್ರಾಪ್ ಅಳವಡಿಸಲಾಗಿದೆ. ಅರಣ್ಯ ಇಲಾಖೆ ಹಗಲೂ ರಾತ್ರಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.</p>.<p>ಸೋಮವಾರ ಮತ್ತೆ ನಾಲ್ಕು ಕ್ಯಾಮೆರಾಗಳನ್ನು ತರಿಸಲಾಗಿದ್ದು ಅವುಗಳನ್ನು ಅಲ್ಲಲ್ಲಿ ಅಳವಡಿಸುವ ಕಾರ್ಯ ನಡೆದಿದೆ. ಜಿಲ್ಲಾಧಿಕಾರಿ ಡಾ. ಸುಶೀಲ ಅವರ ಸೂಚನೆಯ ಮೇರೆಗೆ ತಹಶೀಲ್ದಾರ್ ಕೆ. ವಿಜಯಕುಮಾರ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.</p>.<p>ಅರಣ್ಯ ಇಲಾಖೆ ಚಿರತೆ ಕಂಡು ಬಂದಾಗ ಪಾಲಿಸಬೇಕಾದ ಅಂಶಗಳ ಕುರಿತು ದೇವರಗೋನಾಲ, ಸಿದ್ದಾಪುರ, ಬೊಮ್ಮನಳ್ಳಿ, ಜಾಲಿಬೆಂಚಿ ಇತರ ಗ್ರಾಮಗಳಲ್ಲಿ ಕರಪತ್ರ ಹಂಚಿದರು.</p>.<p>ವಲಯ ಅರಣ್ಯಾಧಿಕಾರಿ ಬುರಾನುದ್ದೀನ್ ಜನರಲ್ಲಿ ಜಾಗೃತಿ ಮೂಡಿಸಿ, ‘ಚಿರತೆ ಕಂಡು ಬಂದಲ್ಲಿ ತಕ್ಷಣ ಸಹಾಯವಾಣಿ 94819 93303 ಗೆ ಕರೆ ಮಾಡಿ, ಸ್ಥಳದ ಲೊಕೇಶನ್ ಕಳುಹಿಸಿ. ನಸುಕು ಮತ್ತು ರಾತ್ರಿ ಸಮಯದಲ್ಲಿ ಗ್ರಾಮಸ್ಥರು ಎಚ್ಚರದಿಂದ ಇರಬೇಕು’ ಎಂದು ತಿಳಿಸಿದರು.</p>.<p>‘ಮನೆಗಳ ಸುತ್ತಮುತ್ತ ಬೆಳೆದಿರುವ ಪೊದೆಗಳನ್ನು ತೆಗೆಯಬೇಕು. ಸಂಜೆಯ ನಂತರ ಸಾಕು ಪ್ರಾಣಿ, ದನಕರುಗಳನ್ನು ಒಳಗೆ ಕಟ್ಟಬೇಕು. ರೈತರು ಕೈಯಲ್ಲಿ ಕುಡುಗೋಲಿ ಅಥವಾ ದೊಣ್ಣೆ ಹಿಡಿದು ತಿರುಗಾಡಬೇಕು’ ಎಂದು ಸಲಹೆ ನೀಡಿದರು.</p>.<p>‘ಮಕ್ಕಳು ಒಬ್ಬಂಟಿಯಾಗಿ ಓಡಾಡಲು ಬಿಡಬಾರದು. ಬಯಲು ಬಹಿರ್ದೆಸೆಗೆ ಹೋಗಬಾರದು. ಚಿರತೆ ಕಂಡುಬಂದಲ್ಲಿ ವಿಡಿಯೊ ಮಾಡುವುದು, ಸೆಲ್ಫಿ ತೆಗೆದುಕೊಳ್ಳುವುದು ಮಾಡಬಾರದು. ಅನಾವಶ್ಯಕವಾಗಿ ಸ್ಪೋಟಕ ವಸ್ತು ಸಿಡಿಸಬಾರದು’ ಎಂದು ತಿಳಿಸಿದರು.</p>.<p>ದನ ಕರು ಮೇಯಿಸುವಾಗಿ ಹಠಾತ್ತಾಗಿ ಚಿರತೆ ದಾಳಿ ಮಾಡಿದಲ್ಲಿ ಪ್ರತಿರೋಧ ಮಾಡದೆ ದೂರ ಸರಿಯಬೇಕು. ಜಾನುವಾರಗಳನ್ನು ಚಿರತೆ ಕೊಂದಲ್ಲಿ ಕಳೇಬರವನ್ನು ಮುಟ್ಟಬಾರದು. ಚಿತ್ರದಲ್ಲಿ ತೋರಿಸಿದಂತೆ ಚಿರತೆ ತಿರುಗಾಡಿದ ಸ್ಥಳದಲ್ಲಿ ಅದರ ಹೆಜ್ಜೆ ಗುರುತು ಮೂಡುತ್ತವೆ. ಅದನ್ನು ಅಳಿಸದೆ ಈ ಬಗ್ಗೆ ಇಲಾಖೆಗೆ ಮಾಹಿತಿ ನೀಡಬೇಕು. ಚಿರತೆ ಕುರಿತಂತೆ ಯಾವುದೆ ಸುಳ್ಳು ಸುದ್ದಿ, ವದಂತಿ ಹರಡಬೇಡಿ’ ಎಂದು ಮನವಿ ಮಾಡಿದರು.</p>.<p>ಉಪ ವಲಯ ಅರಣ್ಯಾಧಿಕಾರಿ ಶರಣಪ್ಪ ಕುಂಬಾರ, ಅರಣ್ಯ ಗಸ್ತುದಾರರಾದ ಮಲ್ಲಪ್ಪ ಚೌಧರಿ, ಬಸವರಾಜ ನಾಯಕ, ದುರ್ಗಣ್ಣ, ಸಿದ್ದಣ್ಣ ಇತರರು ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುರಪುರ</strong>: ಕಳೆದ ನಾಲ್ಕೈದು ದಿನಗಳ ಹಿಂದೆ ತಾಲ್ಲೂಕಿನ ಸಿದ್ದಾಪುರ ಹಾಗೂ ಮಾಚಗುಂಡಾಳ ಪ್ರದೇಶದಲ್ಲಿ ಕಾಣಿಸಿಕೊಂಡು ಭೀತಿ ಸೃಷ್ಟಿಸಿರುವ ಚಿರತೆಯ ಶೋಧ ಕಾರ್ಯ ಸೋಮವಾರವೂ ಮುಂದುವರೆದಿದ್ದು, ಇದುವರೆಗೂ ಚಿರತೆಯ ಯಾವ ಕುರುಹುಗಳು ಕಂಡು ಬಂದಿಲ್ಲ. </p>.<p>ಚಿರತೆ ನಾಯಿ ತಿಂದು ಹಾಕಿದ ಮಾಚಗುಂಡಾಳ ಪ್ರದೇಶದಲ್ಲಿ ಬೋನ್ ಇಡಲಾಗಿದೆ. ಕ್ಯಾಮೆರಾ ಟ್ರಾಪ್ ಅಳವಡಿಸಲಾಗಿದೆ. ಅರಣ್ಯ ಇಲಾಖೆ ಹಗಲೂ ರಾತ್ರಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.</p>.<p>ಸೋಮವಾರ ಮತ್ತೆ ನಾಲ್ಕು ಕ್ಯಾಮೆರಾಗಳನ್ನು ತರಿಸಲಾಗಿದ್ದು ಅವುಗಳನ್ನು ಅಲ್ಲಲ್ಲಿ ಅಳವಡಿಸುವ ಕಾರ್ಯ ನಡೆದಿದೆ. ಜಿಲ್ಲಾಧಿಕಾರಿ ಡಾ. ಸುಶೀಲ ಅವರ ಸೂಚನೆಯ ಮೇರೆಗೆ ತಹಶೀಲ್ದಾರ್ ಕೆ. ವಿಜಯಕುಮಾರ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.</p>.<p>ಅರಣ್ಯ ಇಲಾಖೆ ಚಿರತೆ ಕಂಡು ಬಂದಾಗ ಪಾಲಿಸಬೇಕಾದ ಅಂಶಗಳ ಕುರಿತು ದೇವರಗೋನಾಲ, ಸಿದ್ದಾಪುರ, ಬೊಮ್ಮನಳ್ಳಿ, ಜಾಲಿಬೆಂಚಿ ಇತರ ಗ್ರಾಮಗಳಲ್ಲಿ ಕರಪತ್ರ ಹಂಚಿದರು.</p>.<p>ವಲಯ ಅರಣ್ಯಾಧಿಕಾರಿ ಬುರಾನುದ್ದೀನ್ ಜನರಲ್ಲಿ ಜಾಗೃತಿ ಮೂಡಿಸಿ, ‘ಚಿರತೆ ಕಂಡು ಬಂದಲ್ಲಿ ತಕ್ಷಣ ಸಹಾಯವಾಣಿ 94819 93303 ಗೆ ಕರೆ ಮಾಡಿ, ಸ್ಥಳದ ಲೊಕೇಶನ್ ಕಳುಹಿಸಿ. ನಸುಕು ಮತ್ತು ರಾತ್ರಿ ಸಮಯದಲ್ಲಿ ಗ್ರಾಮಸ್ಥರು ಎಚ್ಚರದಿಂದ ಇರಬೇಕು’ ಎಂದು ತಿಳಿಸಿದರು.</p>.<p>‘ಮನೆಗಳ ಸುತ್ತಮುತ್ತ ಬೆಳೆದಿರುವ ಪೊದೆಗಳನ್ನು ತೆಗೆಯಬೇಕು. ಸಂಜೆಯ ನಂತರ ಸಾಕು ಪ್ರಾಣಿ, ದನಕರುಗಳನ್ನು ಒಳಗೆ ಕಟ್ಟಬೇಕು. ರೈತರು ಕೈಯಲ್ಲಿ ಕುಡುಗೋಲಿ ಅಥವಾ ದೊಣ್ಣೆ ಹಿಡಿದು ತಿರುಗಾಡಬೇಕು’ ಎಂದು ಸಲಹೆ ನೀಡಿದರು.</p>.<p>‘ಮಕ್ಕಳು ಒಬ್ಬಂಟಿಯಾಗಿ ಓಡಾಡಲು ಬಿಡಬಾರದು. ಬಯಲು ಬಹಿರ್ದೆಸೆಗೆ ಹೋಗಬಾರದು. ಚಿರತೆ ಕಂಡುಬಂದಲ್ಲಿ ವಿಡಿಯೊ ಮಾಡುವುದು, ಸೆಲ್ಫಿ ತೆಗೆದುಕೊಳ್ಳುವುದು ಮಾಡಬಾರದು. ಅನಾವಶ್ಯಕವಾಗಿ ಸ್ಪೋಟಕ ವಸ್ತು ಸಿಡಿಸಬಾರದು’ ಎಂದು ತಿಳಿಸಿದರು.</p>.<p>ದನ ಕರು ಮೇಯಿಸುವಾಗಿ ಹಠಾತ್ತಾಗಿ ಚಿರತೆ ದಾಳಿ ಮಾಡಿದಲ್ಲಿ ಪ್ರತಿರೋಧ ಮಾಡದೆ ದೂರ ಸರಿಯಬೇಕು. ಜಾನುವಾರಗಳನ್ನು ಚಿರತೆ ಕೊಂದಲ್ಲಿ ಕಳೇಬರವನ್ನು ಮುಟ್ಟಬಾರದು. ಚಿತ್ರದಲ್ಲಿ ತೋರಿಸಿದಂತೆ ಚಿರತೆ ತಿರುಗಾಡಿದ ಸ್ಥಳದಲ್ಲಿ ಅದರ ಹೆಜ್ಜೆ ಗುರುತು ಮೂಡುತ್ತವೆ. ಅದನ್ನು ಅಳಿಸದೆ ಈ ಬಗ್ಗೆ ಇಲಾಖೆಗೆ ಮಾಹಿತಿ ನೀಡಬೇಕು. ಚಿರತೆ ಕುರಿತಂತೆ ಯಾವುದೆ ಸುಳ್ಳು ಸುದ್ದಿ, ವದಂತಿ ಹರಡಬೇಡಿ’ ಎಂದು ಮನವಿ ಮಾಡಿದರು.</p>.<p>ಉಪ ವಲಯ ಅರಣ್ಯಾಧಿಕಾರಿ ಶರಣಪ್ಪ ಕುಂಬಾರ, ಅರಣ್ಯ ಗಸ್ತುದಾರರಾದ ಮಲ್ಲಪ್ಪ ಚೌಧರಿ, ಬಸವರಾಜ ನಾಯಕ, ದುರ್ಗಣ್ಣ, ಸಿದ್ದಣ್ಣ ಇತರರು ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>