<p><strong>ಗುರುಮಠಕಲ್</strong>: ‘ಮೈ-ಕೈ ಮತ್ತು ಬಟ್ಟೆಗಳು ಹೊಲಸಾದರೆ ಮಾರುಕಟ್ಟೆಯಲ್ಲಿ ವಿವಿಧ ಸಾಬೂನುಗಳಿವೆ. ಆದರೆ, ಮನಸ್ಸು ಹೊಲಸಾದರೆ ಹೇಗೆ? ಗುರುಗಳ ಸಾನ್ನಿಧ್ಯ, ಸತ್ಸಂಗವು ಮನದ ಮಾಲಿನ್ಯವನ್ನು ಶುದ್ಧಗೊಳಿಸುತ್ತದೆ’ ಎಂದು ಕೃಷ್ಣಗಿರಿಯ ಮಹಾರಾಜ ಯೋಗಿ ಕೃಷ್ಣಾನಂದ ಸ್ವಾಮೀಜಿ ಹೇಳಿದರು.</p>.<p>ತಾಲ್ಲೂಕಿನ ಮಲ್ಲಾಪುರ ಗ್ರಾಮದಲ್ಲಿ ಗುರುವಾರ ಉಸೇನಪ್ಪ ಅವರ ಉಚಿತ ಆಯುರ್ವೇದ ಆರೋಗ್ಯ ಶಿಬಿರದಲ್ಲಿ ಅವರು ಮಾತನಾಡಿದರು.</p>.<p>‘ಇತ್ತೀಚೆಗೆ ಕ್ಯಾನ್ಸರ್ ರೋಗ ಹೆಚ್ಚುತ್ತಿದೆ. ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ಎಂದ ತಕ್ಷಣ ಭೀತರಾಗುತ್ತೇವೆ. ಆದರೆ, ತಲೆನೋವಿನಂತೆ ಕ್ಯಾನ್ಸರ್ ಎಂದು ಧೈರ್ಯದಿಂದಿರಿ. ನಮ್ಮಲ್ಲಿ ದೃಢತೆ ಮತ್ತು ಧೈರ್ಯವಿದ್ದರೆ ಅದೇ ನಿಜವಾದ ಔಷಧವಾಗುತ್ತದೆ’ ಎಂದರು.</p>.<p>‘ತಾಯಿ, ತಂದೆ ಮತ್ತು ಗುರುಗಳು ಭಗವಂತನೇ ಹೌದು. ಈ ಮೂವರ ಸೇವೆ ಮತ್ತು ಅವರನ್ನು ಗೌರವಿಸುವುದರಿಂದ ಅನ್ನ, ಅರಿವೆ, ಆಶ್ರಯದ ಸಮಸ್ಯೆಯಾಗದು. ಬಡ ಜನತೆಯ ಸೇವೆಯೇ ನಮ್ಮ ಗುರಿ. ಅದರಂತೆ ಸೇವೆಗೆ ತೊಡಗುವುದು ಮುಖ್ಯ’ ಎಂದು ಅವರು ಹೇಳಿದರು.</p>.<p>‘ಆರೋಗ್ಯವು ನಮ್ಮಲ್ಲಿದ್ದರೆ ಯಾವ ಐಶ್ವರ್ಯವೂ ಬೇಡ. ಎಲ್ಲಾ ಬಗೆಯ ಭಾಗ್ಯಗಳಿದ್ದು, ಪಂಚಭಕ್ಷಗಳಿದ್ದಾಗ ಆರೋಗ್ಯ ಇಲ್ಲವಾದರೆ? ರೋಗಿಯಾದರೆ ಏನನ್ನೂ ಸವಿಯಲಾಗದು. ಆದ್ದರಿಂದ ಆರೋಗ್ಯಕ್ಕೆ ಆದ್ಯತೆ ನೀಡಿ’ ಎಂದು ಸಲಹೆ ನೀಡಿದರು.</p>.<p>‘ಮದ್ಯ ಸೇವನೆ ಮತ್ತು ಮಾಂಸ ಭಕ್ಷಣೆ ತ್ಯಜಿಸಿ. ಮಾತೆ ಮಾಣಿಕೇಶ್ವರಿಯವರ ಆಶಯದಂತೆ ಅಹಿಂಸಾ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ’ ಎಂದು ಹೇಳಿದರು. ಆಯೋಜಕ ಉಸನಪ್ಪ ಹಾಗೂ ಮುಖಂಡ ಶಿವರೆಡ್ಡಿ ಮಾತನಾಡಿದರು.</p>.<p>ಜಗನ್, ಲಕ್ಷ್ಮಣ, ನರಸಿಂಹ, ಸದಾಶಿವರೆಡ್ಡಿ, ಶ್ರೀನಿವಾಸರೆಡ್ಡಿ, ವೆಂಕಟರೆಡ್ಡಿ, ವೆಂಕಟಪ್ಪ, ಶಿವ, ರಮೇಶ, ಕಿಶನ್, ಸಾಬಣ್ಣ, ರಾಮುನಾಯಕ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುರುಮಠಕಲ್</strong>: ‘ಮೈ-ಕೈ ಮತ್ತು ಬಟ್ಟೆಗಳು ಹೊಲಸಾದರೆ ಮಾರುಕಟ್ಟೆಯಲ್ಲಿ ವಿವಿಧ ಸಾಬೂನುಗಳಿವೆ. ಆದರೆ, ಮನಸ್ಸು ಹೊಲಸಾದರೆ ಹೇಗೆ? ಗುರುಗಳ ಸಾನ್ನಿಧ್ಯ, ಸತ್ಸಂಗವು ಮನದ ಮಾಲಿನ್ಯವನ್ನು ಶುದ್ಧಗೊಳಿಸುತ್ತದೆ’ ಎಂದು ಕೃಷ್ಣಗಿರಿಯ ಮಹಾರಾಜ ಯೋಗಿ ಕೃಷ್ಣಾನಂದ ಸ್ವಾಮೀಜಿ ಹೇಳಿದರು.</p>.<p>ತಾಲ್ಲೂಕಿನ ಮಲ್ಲಾಪುರ ಗ್ರಾಮದಲ್ಲಿ ಗುರುವಾರ ಉಸೇನಪ್ಪ ಅವರ ಉಚಿತ ಆಯುರ್ವೇದ ಆರೋಗ್ಯ ಶಿಬಿರದಲ್ಲಿ ಅವರು ಮಾತನಾಡಿದರು.</p>.<p>‘ಇತ್ತೀಚೆಗೆ ಕ್ಯಾನ್ಸರ್ ರೋಗ ಹೆಚ್ಚುತ್ತಿದೆ. ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ಎಂದ ತಕ್ಷಣ ಭೀತರಾಗುತ್ತೇವೆ. ಆದರೆ, ತಲೆನೋವಿನಂತೆ ಕ್ಯಾನ್ಸರ್ ಎಂದು ಧೈರ್ಯದಿಂದಿರಿ. ನಮ್ಮಲ್ಲಿ ದೃಢತೆ ಮತ್ತು ಧೈರ್ಯವಿದ್ದರೆ ಅದೇ ನಿಜವಾದ ಔಷಧವಾಗುತ್ತದೆ’ ಎಂದರು.</p>.<p>‘ತಾಯಿ, ತಂದೆ ಮತ್ತು ಗುರುಗಳು ಭಗವಂತನೇ ಹೌದು. ಈ ಮೂವರ ಸೇವೆ ಮತ್ತು ಅವರನ್ನು ಗೌರವಿಸುವುದರಿಂದ ಅನ್ನ, ಅರಿವೆ, ಆಶ್ರಯದ ಸಮಸ್ಯೆಯಾಗದು. ಬಡ ಜನತೆಯ ಸೇವೆಯೇ ನಮ್ಮ ಗುರಿ. ಅದರಂತೆ ಸೇವೆಗೆ ತೊಡಗುವುದು ಮುಖ್ಯ’ ಎಂದು ಅವರು ಹೇಳಿದರು.</p>.<p>‘ಆರೋಗ್ಯವು ನಮ್ಮಲ್ಲಿದ್ದರೆ ಯಾವ ಐಶ್ವರ್ಯವೂ ಬೇಡ. ಎಲ್ಲಾ ಬಗೆಯ ಭಾಗ್ಯಗಳಿದ್ದು, ಪಂಚಭಕ್ಷಗಳಿದ್ದಾಗ ಆರೋಗ್ಯ ಇಲ್ಲವಾದರೆ? ರೋಗಿಯಾದರೆ ಏನನ್ನೂ ಸವಿಯಲಾಗದು. ಆದ್ದರಿಂದ ಆರೋಗ್ಯಕ್ಕೆ ಆದ್ಯತೆ ನೀಡಿ’ ಎಂದು ಸಲಹೆ ನೀಡಿದರು.</p>.<p>‘ಮದ್ಯ ಸೇವನೆ ಮತ್ತು ಮಾಂಸ ಭಕ್ಷಣೆ ತ್ಯಜಿಸಿ. ಮಾತೆ ಮಾಣಿಕೇಶ್ವರಿಯವರ ಆಶಯದಂತೆ ಅಹಿಂಸಾ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ’ ಎಂದು ಹೇಳಿದರು. ಆಯೋಜಕ ಉಸನಪ್ಪ ಹಾಗೂ ಮುಖಂಡ ಶಿವರೆಡ್ಡಿ ಮಾತನಾಡಿದರು.</p>.<p>ಜಗನ್, ಲಕ್ಷ್ಮಣ, ನರಸಿಂಹ, ಸದಾಶಿವರೆಡ್ಡಿ, ಶ್ರೀನಿವಾಸರೆಡ್ಡಿ, ವೆಂಕಟರೆಡ್ಡಿ, ವೆಂಕಟಪ್ಪ, ಶಿವ, ರಮೇಶ, ಕಿಶನ್, ಸಾಬಣ್ಣ, ರಾಮುನಾಯಕ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>