‘ಮನೆ ಕಳೆದುಕೊಂಡು ಹಲವರು ಬೀದಿಗೆ ಬಿದ್ದಿದ್ದಾರೆ. ಹೀಗಾಗಿ ಶೀಘ್ರ ಪರಿಹಾರದ ಧನ ವಿತರಿಸಬೇಕು. ಜಿಲ್ಲೆಯಲ್ಲಿ ಭತ್ತ, ಹತ್ತಿ ಬೆಳೆ ಹೆಚ್ಚು ಹಾನಿಯಾಗಿದೆ. ಭತ್ತಕ್ಕೆ ₹30 ಸಾವಿರ, ಹತ್ತಿಗೆ ₹15 ಸಾವಿರ ಎಕರೆಗೆ ಖರ್ಚು ಮಾಡಿದ್ದಾರೆ. ಅಧಿಕಾರಿಗಳು ಪ್ರಮಾಣಿಕವಾಗಿ ವರದಿ ಸಲ್ಲಿಸಬೇಕು. ವೈಜ್ಞಾನಿಕ ಬೆಲೆ ನಿಗದಿಮಾಡಬೇಕು. ಜಿಲ್ಲೆಯ ಪ್ರತಿನಿಧಿಗಳು ಸರ್ಕಾರಕ್ಕೆ ಒತ್ತಡ ಹಾಕಿ ಪರಿಹಾರದ ಹಣ ಶೀಘ್ರ ಬರುವಂತೆ ಮಾಡಬೇಕು. ಪರಿಹಾರದ ವಿತರಣೆಯಲ್ಲಿ ಕೇಂದ್ರದ ಹೊಣೆಗಾರಿಕೆ ಹೆಚ್ಚಾಗಿರುತ್ತದೆ. ಹೀಗಾಗಿ ಇಬ್ಬರು ಸಂಸ ದರು ಜಿಲ್ಲೆಗೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಬೇಕು’ ಎಂದು ಆಗ್ರಹಿಸಿದರು.