<p><strong>ಸುರಪುರ</strong>: ಸಿಡಿಲು ಬಡಿದು ಅಸುನೀಗಿದ ಜಾನುವಾರುಗಳ ಮಾಲೀಕರಿಗೆ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಶಾಸಕ ರಾಜೂಗೌಡ ಸೋಮವಾರ ಪರಿಹಾರದ ಚೆಕ್ ವಿತರಿಸಿದರು.</p>.<p>ಈಚೆಗೆ ಸುರಿದ ಅಕಾಲಿಕ ಮಳೆಯಲ್ಲಿ ಸಿಡಿಲು ಬಡಿದು ಕಕ್ಕೇರಾ ಗ್ರಾಮದಲ್ಲಿ 2 ಎತ್ತುಗಳು, ಶೆಳ್ಳಗಿ ಗ್ರಾಮದಲ್ಲಿ 1 ಹಸು, ಮತ್ತು ಗುಡಿಹಾಳ ಜೆ.ಗ್ರಾಮದಲ್ಲಿ 4 ಕುರಿಗಳು ಅಸುನೀಗಿದ್ದವು.</p>.<p>ಎತ್ತುಗಳ ಮಾಲೀಕ ಭೀಮಣ್ಣ ನಿಂಗಪ್ಪ ಕಕ್ಕೇರಾ ಅವರಿಗೆ ₹50 ಸಾವಿರ, ಹಸುವಿನ ಮಾಲೀಕ ನಾಗಪ್ಪ ಸೋಮನಿಂಗಪ್ಪ ಅವರಿಗೆ ₹30 ಸಾವಿರ ಮತ್ತು ಕುರಿಗಳ ಮಾಲೀಕ ನಿಂಗಪ್ಪ ಗುಡಿಹಾಳ ಅವರಿಗೆ ₹12 ಸಾವಿರ ಪರಿಹಾರ ಚೆಕ್ ನೀಡಿದರು.</p>.<p>ರಾಜೂಗೌಡ ಮಾತನಾಡಿ, ‘ನಮೆಲ್ಲರಿಗೂ ಅನ್ನ ನೀಡುವ ರೈತ ದೇಶದ ಬೆನ್ನೆಲುಬು. ಜಾನುವಾರು ಆತನ ಸಂಗಾತಿ. ಘಟನೆಯಲ್ಲಿ ಎತ್ತುಗಳು ಅಸುನೀಗಿರುವುದು ದುರ್ದೈವ. ಜಾನುವಾರು ಕಳೆದುಕೊಂಡ ರೈತರಿಗೆ ಪುನಃ ಬದುಕು ಕಟ್ಟಿಕೊಳ್ಳಲು ಸರ್ಕಾರ ಪರಿಹಾರ ನೀಡುತ್ತದೆ’ ಎಂದರು.</p>.<p>‘ಸಿಡಿಲು, ಮಳೆ, ಗಾಳಿ, ಪ್ರವಾಹ ಅವಘಡಗಳಿಗೆ ಸಿಲುಕಿ ಜಾನುವಾರುಗಳು ಮೃತಪಟ್ಟಲ್ಲಿ ರೈತರು ಚಿಂತಿಸುವ ಅಗತ್ಯವಿಲ್ಲ. ಎನ್ಡಿಆರ್ಎಫ್ ಮಾರ್ಗಸೂಚಿಯಂತೆ ತಕ್ಷಣವೇ ಪರಿಹಾರ ನೀಡಲು ಪಶು ಸಂಗೋಪನಾ ಸಚಿವಾಲಯ ಆದೇಶಿಸಿದೆ. ಅಧಿಕಾರಿಗಳು ಸಕಾಲಕ್ಕೆ ಸಂಪರ್ಕಕ್ಕೆ ಸಿಗದಿದ್ದಲ್ಲಿ ರೈತರು ಮೊ: 8277100200 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿ. ಸಂಬಂಧಪಟ್ಟ ಅಧಿಕಾರಿಗಳು ಪರಿಹಾರ ದೊರಕಿಸುವ ಕೆಲಸ ಮಾಡುತ್ತಾರೆ’ ಎಂದರು.</p>.<p>ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ಕಂದಾಯ ನಿರೀಕ್ಷಕ ಗುರುಬಸಪ್ಪ ಪಾಟೀಲ, ಗ್ರಾಮ ಲೇಖಕ ದುಶ್ಯಂತ, ಮುಖಂಡರಾದ ಭೀಮಣ್ಣ ಬೇವಿನಾಳ, ದೇವರಾಜ ಮಕಾಶಿ ಇತರರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುರಪುರ</strong>: ಸಿಡಿಲು ಬಡಿದು ಅಸುನೀಗಿದ ಜಾನುವಾರುಗಳ ಮಾಲೀಕರಿಗೆ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಶಾಸಕ ರಾಜೂಗೌಡ ಸೋಮವಾರ ಪರಿಹಾರದ ಚೆಕ್ ವಿತರಿಸಿದರು.</p>.<p>ಈಚೆಗೆ ಸುರಿದ ಅಕಾಲಿಕ ಮಳೆಯಲ್ಲಿ ಸಿಡಿಲು ಬಡಿದು ಕಕ್ಕೇರಾ ಗ್ರಾಮದಲ್ಲಿ 2 ಎತ್ತುಗಳು, ಶೆಳ್ಳಗಿ ಗ್ರಾಮದಲ್ಲಿ 1 ಹಸು, ಮತ್ತು ಗುಡಿಹಾಳ ಜೆ.ಗ್ರಾಮದಲ್ಲಿ 4 ಕುರಿಗಳು ಅಸುನೀಗಿದ್ದವು.</p>.<p>ಎತ್ತುಗಳ ಮಾಲೀಕ ಭೀಮಣ್ಣ ನಿಂಗಪ್ಪ ಕಕ್ಕೇರಾ ಅವರಿಗೆ ₹50 ಸಾವಿರ, ಹಸುವಿನ ಮಾಲೀಕ ನಾಗಪ್ಪ ಸೋಮನಿಂಗಪ್ಪ ಅವರಿಗೆ ₹30 ಸಾವಿರ ಮತ್ತು ಕುರಿಗಳ ಮಾಲೀಕ ನಿಂಗಪ್ಪ ಗುಡಿಹಾಳ ಅವರಿಗೆ ₹12 ಸಾವಿರ ಪರಿಹಾರ ಚೆಕ್ ನೀಡಿದರು.</p>.<p>ರಾಜೂಗೌಡ ಮಾತನಾಡಿ, ‘ನಮೆಲ್ಲರಿಗೂ ಅನ್ನ ನೀಡುವ ರೈತ ದೇಶದ ಬೆನ್ನೆಲುಬು. ಜಾನುವಾರು ಆತನ ಸಂಗಾತಿ. ಘಟನೆಯಲ್ಲಿ ಎತ್ತುಗಳು ಅಸುನೀಗಿರುವುದು ದುರ್ದೈವ. ಜಾನುವಾರು ಕಳೆದುಕೊಂಡ ರೈತರಿಗೆ ಪುನಃ ಬದುಕು ಕಟ್ಟಿಕೊಳ್ಳಲು ಸರ್ಕಾರ ಪರಿಹಾರ ನೀಡುತ್ತದೆ’ ಎಂದರು.</p>.<p>‘ಸಿಡಿಲು, ಮಳೆ, ಗಾಳಿ, ಪ್ರವಾಹ ಅವಘಡಗಳಿಗೆ ಸಿಲುಕಿ ಜಾನುವಾರುಗಳು ಮೃತಪಟ್ಟಲ್ಲಿ ರೈತರು ಚಿಂತಿಸುವ ಅಗತ್ಯವಿಲ್ಲ. ಎನ್ಡಿಆರ್ಎಫ್ ಮಾರ್ಗಸೂಚಿಯಂತೆ ತಕ್ಷಣವೇ ಪರಿಹಾರ ನೀಡಲು ಪಶು ಸಂಗೋಪನಾ ಸಚಿವಾಲಯ ಆದೇಶಿಸಿದೆ. ಅಧಿಕಾರಿಗಳು ಸಕಾಲಕ್ಕೆ ಸಂಪರ್ಕಕ್ಕೆ ಸಿಗದಿದ್ದಲ್ಲಿ ರೈತರು ಮೊ: 8277100200 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿ. ಸಂಬಂಧಪಟ್ಟ ಅಧಿಕಾರಿಗಳು ಪರಿಹಾರ ದೊರಕಿಸುವ ಕೆಲಸ ಮಾಡುತ್ತಾರೆ’ ಎಂದರು.</p>.<p>ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ಕಂದಾಯ ನಿರೀಕ್ಷಕ ಗುರುಬಸಪ್ಪ ಪಾಟೀಲ, ಗ್ರಾಮ ಲೇಖಕ ದುಶ್ಯಂತ, ಮುಖಂಡರಾದ ಭೀಮಣ್ಣ ಬೇವಿನಾಳ, ದೇವರಾಜ ಮಕಾಶಿ ಇತರರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>