<p><strong>ಯರಗೋಳ</strong>: ಮುಂಗಾರು ಮಳೆಯು ನಿಗದಿತ ಅವಧಿಯ ಮೊದಲೆ ಆಗಮಿಸಿರುವುದರಿಂದ ಹತ್ತಿಕುಣಿ ಹೋಬಳಿಯ ವ್ಯಾಪ್ತಿಯ ಗ್ರಾಮಗಳಲ್ಲಿ ರೈತರು ಉತ್ಸಹದಿಂದ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ.<br />ಕಳೆದ ಸಾಲಿನಲ್ಲಿ ಅತಿವೃಷ್ಟಿ ಪರಿಣಾಮ, ಹೆಸರು, ತೊಗರಿ, ಹತ್ತಿ ಬೆಳೆಗಳು ಕೊಳೆತು ಭೂಮಿಯ ಪಾಲಾಗಿ, ಭತ್ತ ನೆಲ ಕಚ್ಚಿತ್ತು. ರೈತರು ಕಣ್ಣೀರು ಸುರಿಸುವಂತಾಗಿತ್ತು.</p>.<p>ಈ ವರ್ಷ ಮಿರಗ (ಮೃಗಶಿರ) ಮಳೆಗಿಂತ ಮೊದಲೆ ಮಳೆ ಸುರಿದ ಪರಿಣಾಮ, ಹಲವು ಹಳ್ಳಿಗಳಲ್ಲಿ ಬಿತ್ತನೆ ಪೂರ್ಣಗೊಂಡಿದೆ. ಇನ್ನು ಕೆಲವು ಹಳ್ಳಿಗಳಲ್ಲಿ ಬಿತ್ತನೆ ಕಾರ್ಯ ಚುರುಕುಗೊಂಡಿದೆ.</p>.<p>ಹತ್ತಿಕುಣಿ, ಯರಗೋಳ ಸರ್ಕಾರಿ ಕೃಷಿ ಕೇಂದ್ರಗಳಲ್ಲಿ ಇಲ್ಲಿಯವರೆಗೆ 30 ಕ್ವಿಂಟಲ್ ಹೆಸರು ಬಿತ್ತನೆ ಬೀಜ ಮಾರಾಟವಾಗಿದೆ ಎಂದು 'ಪ್ರಜಾವಾಣಿ' ಗೆ ಕೃಷಿ ಅಧಿಕಾರಿಗಳು ಮಾಹಿತಿ ನೀಡಿದರು.</p>.<p>ಕಂಚಗಾರಳ್ಳಿ, ಮಲಕಪ್ಪನಳ್ಳಿ, ಅಲ್ಲಿಪುರ, ವಡ್ನಳ್ಳಿ, ಕ್ಯಾಸಪ್ಪನಳ್ಳಿ, ಬಸವಂತಪುರ, ಖಾನಳ್ಳಿ, ಹೆಡಗಿಮದ್ರ, ಅಬ್ಬೆತುಮಕೂರು, ಮುದ್ನಾಳ, ಯಡ್ಡಳ್ಳಿ, ಬಂದಳ್ಳಿ, ಚಾಮನಳ್ಳಿ, ಹೊನಗೇರಾ, ಬೆಳಗೇರಾ, ಮೋಟ್ನಳ್ಳಿ, ಹೊಸಳ್ಳಿ, ಕೋಟಗೇರಾ ಗ್ರಾಮದಲ್ಲಿ ಬಿತ್ತನೆ ಮುಂದುವರೆದಿದೆ.</p>.<p>ಕೃಷಿ ಇಲಾಖೆಯ ಅಧಿಕಾರಿಗಳ ಮಾಹಿತಿಯಂತೆ, ಹತ್ತಿಕುಣಿ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ 2 ಸಾವಿರ ಎಕರೆ ಬಿತ್ತನೆಯಾಗಿದ್ದು, ಒಟ್ಟು 6 ಸಾವಿರ ಎಕರೆ ಬಿತ್ತನೆಯ ಗುರಿ ಇದೆ. ರೈತರು ಹೆಚ್ಚಿನ ಪ್ರಮಾಣದಲ್ಲಿ ಹೆಸರು ಬೀಜಗಳು ಬಿತ್ತನೆ ಮಾಡಿದ್ದಾರೆ ಎಂದರು.</p>.<p>ರಾಜ್ಯ ಸರ್ಕಾರ ಕೋವಿಡ್ ನಿಯಮಾವಳಿಗಳಲ್ಲಿ ಕೃಷಿ ಚಟುವಟಿಕೆಗೆ ಸಡಿಲಿಕೆ ನೀಡಿರುವುದರಿಂದ ರೈತರಿಗೆ ರಸಗೊಬ್ಬರ, ಬಿತ್ತನೆ ಬೀಜಗಳ ಖರೀದಿಗೆ, ಇನ್ನಿತರ ಕೃಷಿ ಸಂಬಂಧಿಸಿದ ಚಟುವಟಿಕೆಗೆ ತೊಂದರೆಯಾಗಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯರಗೋಳ</strong>: ಮುಂಗಾರು ಮಳೆಯು ನಿಗದಿತ ಅವಧಿಯ ಮೊದಲೆ ಆಗಮಿಸಿರುವುದರಿಂದ ಹತ್ತಿಕುಣಿ ಹೋಬಳಿಯ ವ್ಯಾಪ್ತಿಯ ಗ್ರಾಮಗಳಲ್ಲಿ ರೈತರು ಉತ್ಸಹದಿಂದ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ.<br />ಕಳೆದ ಸಾಲಿನಲ್ಲಿ ಅತಿವೃಷ್ಟಿ ಪರಿಣಾಮ, ಹೆಸರು, ತೊಗರಿ, ಹತ್ತಿ ಬೆಳೆಗಳು ಕೊಳೆತು ಭೂಮಿಯ ಪಾಲಾಗಿ, ಭತ್ತ ನೆಲ ಕಚ್ಚಿತ್ತು. ರೈತರು ಕಣ್ಣೀರು ಸುರಿಸುವಂತಾಗಿತ್ತು.</p>.<p>ಈ ವರ್ಷ ಮಿರಗ (ಮೃಗಶಿರ) ಮಳೆಗಿಂತ ಮೊದಲೆ ಮಳೆ ಸುರಿದ ಪರಿಣಾಮ, ಹಲವು ಹಳ್ಳಿಗಳಲ್ಲಿ ಬಿತ್ತನೆ ಪೂರ್ಣಗೊಂಡಿದೆ. ಇನ್ನು ಕೆಲವು ಹಳ್ಳಿಗಳಲ್ಲಿ ಬಿತ್ತನೆ ಕಾರ್ಯ ಚುರುಕುಗೊಂಡಿದೆ.</p>.<p>ಹತ್ತಿಕುಣಿ, ಯರಗೋಳ ಸರ್ಕಾರಿ ಕೃಷಿ ಕೇಂದ್ರಗಳಲ್ಲಿ ಇಲ್ಲಿಯವರೆಗೆ 30 ಕ್ವಿಂಟಲ್ ಹೆಸರು ಬಿತ್ತನೆ ಬೀಜ ಮಾರಾಟವಾಗಿದೆ ಎಂದು 'ಪ್ರಜಾವಾಣಿ' ಗೆ ಕೃಷಿ ಅಧಿಕಾರಿಗಳು ಮಾಹಿತಿ ನೀಡಿದರು.</p>.<p>ಕಂಚಗಾರಳ್ಳಿ, ಮಲಕಪ್ಪನಳ್ಳಿ, ಅಲ್ಲಿಪುರ, ವಡ್ನಳ್ಳಿ, ಕ್ಯಾಸಪ್ಪನಳ್ಳಿ, ಬಸವಂತಪುರ, ಖಾನಳ್ಳಿ, ಹೆಡಗಿಮದ್ರ, ಅಬ್ಬೆತುಮಕೂರು, ಮುದ್ನಾಳ, ಯಡ್ಡಳ್ಳಿ, ಬಂದಳ್ಳಿ, ಚಾಮನಳ್ಳಿ, ಹೊನಗೇರಾ, ಬೆಳಗೇರಾ, ಮೋಟ್ನಳ್ಳಿ, ಹೊಸಳ್ಳಿ, ಕೋಟಗೇರಾ ಗ್ರಾಮದಲ್ಲಿ ಬಿತ್ತನೆ ಮುಂದುವರೆದಿದೆ.</p>.<p>ಕೃಷಿ ಇಲಾಖೆಯ ಅಧಿಕಾರಿಗಳ ಮಾಹಿತಿಯಂತೆ, ಹತ್ತಿಕುಣಿ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ 2 ಸಾವಿರ ಎಕರೆ ಬಿತ್ತನೆಯಾಗಿದ್ದು, ಒಟ್ಟು 6 ಸಾವಿರ ಎಕರೆ ಬಿತ್ತನೆಯ ಗುರಿ ಇದೆ. ರೈತರು ಹೆಚ್ಚಿನ ಪ್ರಮಾಣದಲ್ಲಿ ಹೆಸರು ಬೀಜಗಳು ಬಿತ್ತನೆ ಮಾಡಿದ್ದಾರೆ ಎಂದರು.</p>.<p>ರಾಜ್ಯ ಸರ್ಕಾರ ಕೋವಿಡ್ ನಿಯಮಾವಳಿಗಳಲ್ಲಿ ಕೃಷಿ ಚಟುವಟಿಕೆಗೆ ಸಡಿಲಿಕೆ ನೀಡಿರುವುದರಿಂದ ರೈತರಿಗೆ ರಸಗೊಬ್ಬರ, ಬಿತ್ತನೆ ಬೀಜಗಳ ಖರೀದಿಗೆ, ಇನ್ನಿತರ ಕೃಷಿ ಸಂಬಂಧಿಸಿದ ಚಟುವಟಿಕೆಗೆ ತೊಂದರೆಯಾಗಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>