<p><strong>ಹುಣಸಗಿ:</strong> ಪ್ರಜಾಪ್ರಭುತ್ವದ ಯಶಸ್ವಿಗೆ ಮತದಾನವೇ ಭದ್ರ ಬುನಾದಿಯಾಗಿದ್ದು, ಪ್ರತಿಯೊಬ್ಬರ ದೇಶ ಪ್ರೇಮ ಮತದಾನದಲ್ಲಿ ಅಡಗಿದೆ ಎಂದು ಹುಣಸಗಿ ಗ್ರೇಡ್– 2 ತಹಶೀಲ್ದಾರ್ ಮಹಾದೇವಪ್ಪಗೌಡ ಬಿರಾದಾರ ಹೇಳಿದರು.</p>.<p>ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಆಯೋಜಿಸಿದ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವರು ಮಾತನಾಡಿದರು.</p>.<p>ಮತದಾರರ ಪಟ್ಟಿಯಲ್ಲಿ ಇರುವ ಎಲ್ಲ ಮತದಾರರು ತಮ್ಮ ಹಕ್ಕು ಚಲಾಯಿಸಬೇಕು. ಯಾವುದೇ ಕಾರಣಕ್ಕೂ ಮತದಾನದಿಂದ ದೂರ ಉಳಿಯಬಾರದು ಎಂದರು.</p>.<p>ಈ ವೇಳೆ ಮತದಾನದ ಪ್ರತಿಜ್ಞಾವಿಧಿ ಬೋಧಿಸಿ, ಮತದಾರರ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆಯಾದವರಿಗೆ ನೂತನ ಗುರುತಿನ ಚೀಟಿ ನೀಡಲಾಯಿತು.</p>.<p>ಉಪ ತಹಶೀಲ್ದಾರ್ ಪ್ರವೀಣ ಸಜ್ಜನ್, ಪ್ರಕಾಶ ಪಾಟೀಲ, ಹಸನ್ ಸಾಬ್, ಮಹಾಂತೇಶ, ವೆಂಕಟೇಶ, ಸುಮಂಗಲಾ ಪಾಟೀಲ ಇದ್ದರು.</p>.<p>ಪ್ರತಿಜ್ಞಾವಿಧಿ ಬೋಧನೆ: ಕೊಡೇಕಲ್ಲ ಗ್ರಾಮದ ಜನಕ ಪದವಿ ಕಾಲೇಜಿನಲ್ಲಿ ಎಸ್ಎಸ್ಎಸ್ ಸಹಯೋಗದಲ್ಲಿ ಮತದಾರರ ದಿನಾಚರಣೆ ಆಚರಿಸಲಾಯಿತು.</p>.<p>ಪ್ರಾಚಾರ್ಯ ಸೋಮಶೇಖರ ಪಂಚಗಲ್ಲ ಮಾತನಾಡಿ, ಪ್ರತಿಯೊಬ್ಬ ಪ್ರಜೆಯು ತನಗೆ ಸೂಕ್ತವಾದ ಅಭ್ಯರ್ಥಿಯನ್ನು ಮತದಾನದ ಮೂಲಕ ಆಯ್ಕೆ ಮಾಡಿಕೊಳ್ಳಬಹುದು ಎಂದು ಹೇಳಿದರು.</p>.<p>ಬಳಿಕ ಉಪನ್ಯಾಸಕ ನಾಗರಾಜ ಪಾಟೀಲ ಅವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸಗಿ:</strong> ಪ್ರಜಾಪ್ರಭುತ್ವದ ಯಶಸ್ವಿಗೆ ಮತದಾನವೇ ಭದ್ರ ಬುನಾದಿಯಾಗಿದ್ದು, ಪ್ರತಿಯೊಬ್ಬರ ದೇಶ ಪ್ರೇಮ ಮತದಾನದಲ್ಲಿ ಅಡಗಿದೆ ಎಂದು ಹುಣಸಗಿ ಗ್ರೇಡ್– 2 ತಹಶೀಲ್ದಾರ್ ಮಹಾದೇವಪ್ಪಗೌಡ ಬಿರಾದಾರ ಹೇಳಿದರು.</p>.<p>ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಆಯೋಜಿಸಿದ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವರು ಮಾತನಾಡಿದರು.</p>.<p>ಮತದಾರರ ಪಟ್ಟಿಯಲ್ಲಿ ಇರುವ ಎಲ್ಲ ಮತದಾರರು ತಮ್ಮ ಹಕ್ಕು ಚಲಾಯಿಸಬೇಕು. ಯಾವುದೇ ಕಾರಣಕ್ಕೂ ಮತದಾನದಿಂದ ದೂರ ಉಳಿಯಬಾರದು ಎಂದರು.</p>.<p>ಈ ವೇಳೆ ಮತದಾನದ ಪ್ರತಿಜ್ಞಾವಿಧಿ ಬೋಧಿಸಿ, ಮತದಾರರ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆಯಾದವರಿಗೆ ನೂತನ ಗುರುತಿನ ಚೀಟಿ ನೀಡಲಾಯಿತು.</p>.<p>ಉಪ ತಹಶೀಲ್ದಾರ್ ಪ್ರವೀಣ ಸಜ್ಜನ್, ಪ್ರಕಾಶ ಪಾಟೀಲ, ಹಸನ್ ಸಾಬ್, ಮಹಾಂತೇಶ, ವೆಂಕಟೇಶ, ಸುಮಂಗಲಾ ಪಾಟೀಲ ಇದ್ದರು.</p>.<p>ಪ್ರತಿಜ್ಞಾವಿಧಿ ಬೋಧನೆ: ಕೊಡೇಕಲ್ಲ ಗ್ರಾಮದ ಜನಕ ಪದವಿ ಕಾಲೇಜಿನಲ್ಲಿ ಎಸ್ಎಸ್ಎಸ್ ಸಹಯೋಗದಲ್ಲಿ ಮತದಾರರ ದಿನಾಚರಣೆ ಆಚರಿಸಲಾಯಿತು.</p>.<p>ಪ್ರಾಚಾರ್ಯ ಸೋಮಶೇಖರ ಪಂಚಗಲ್ಲ ಮಾತನಾಡಿ, ಪ್ರತಿಯೊಬ್ಬ ಪ್ರಜೆಯು ತನಗೆ ಸೂಕ್ತವಾದ ಅಭ್ಯರ್ಥಿಯನ್ನು ಮತದಾನದ ಮೂಲಕ ಆಯ್ಕೆ ಮಾಡಿಕೊಳ್ಳಬಹುದು ಎಂದು ಹೇಳಿದರು.</p>.<p>ಬಳಿಕ ಉಪನ್ಯಾಸಕ ನಾಗರಾಜ ಪಾಟೀಲ ಅವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>