ವಿಶ್ವಪ್ರಸನ್ನ ತೀರ್ಥ ಶ್ರೀಗಳು ಆಶೀರ್ವಚನ ನೀಡಿ, ‘ಅಯೋಧ್ಯಾ ಕ್ಷೇತ್ರವು ಮೋಕ್ಷದಾಯಕವಾಗಿದೆ. ಶ್ರೀರಾಮ ದೇವರ ಭವ್ಯಮಂದಿರ ನಿರ್ಮಾಣವಾಗಿ ಶ್ರೀರಾಮದೇವರ ಪ್ರಾಣ ಪ್ರತಿಷ್ಠಾಪನೆಯೊಂದಿಗೆ ದೇಗುಲ ಲೋಕಾರ್ಪಣೆಗೊಂಡಿರುವುದು ಅತ್ಯಂತ ಹರ್ಷದ ವಿಷಯವಾಗಿದೆ. ಅಂತಹ ಶ್ರೀರಾಮ ದೇವರನ್ನು ಧೃಡವಾದ ಭಕ್ತಿಯಿಂದ ಪೂಜಿಸುವ ಭಕ್ತ ಗಣಕ್ಕೆ ಅನುಗ್ರಹ ಆಶೀರ್ವಾದ ಸದಾ ಇರುತ್ತದೆ. ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ತಾವು ಬಯಸಿದ ಭಾಗ್ಯ ಪಡೆಯಲು ಪ್ರಯತ್ನದೊಂದಿಗೆ ದೇವರ ಅನುಗ್ರಹವು ಬೇಕು. ಸನಾತನ ಧರ್ಮದ ಹಿರಿಮೆ ಅದು ಎಂದೆಂದೆಗೂ ವಿನಾಶಕ್ಕೀಡಾಗದ ಮತ್ತೆ ತೆಲೆಯೆತ್ತಿ ನಿಲ್ಲುವ ಸಂಸ್ಕೃತಿಯಾಗಿದೆ. ಮಕ್ಕಳಿಗೆ ಹಿರಿಯರಿಂದ ಬಂದಿರುವ ಭಕ್ತಿ, ಪ್ರೀತಿ, ಅಭಿಮಾನ, ಭಜನೆ, ಹರಿಕತೆ, ಭರತನಾಟ್ಯ, ಯಕ್ಷಗಾನ ದಂತಹ ಕಲೆಗಳು ಮಾಧ್ಯಮದ ಮೂಲಕ ಪರಿಚಯವಾಗಿವೆ. ಅಂತಹ ಭವ್ಯವಾದ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಿ, ಬೆಳೆಸಿ ಹಸ್ತಾಂತರಿಸಬೇಕು ಎಂದು ಸಲಹೆ ನೀಡಿದರು.