ಪಿಎಂ ವಿಶ್ವಕರ್ಮ ತರಬೇತಿ ಕೇಂದ್ರದಲ್ಲಿ ಫಲಾನುಭವಿಗಳು ನಿಂತಿರುವುದು
ಪಿಎಂ ವಿಶ್ವಕರ್ಮ ಯೋಜನೆಯಡಿ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಲಾಗಿದ್ದು ಫಲಾನುಭವಿಗಳ ಜೊತೆಗೆ ಹಲವರು ಬರುತ್ತಿದ್ದು ತರಬೇತಿ ಕೇಂದ್ರದಲ್ಲಿ ಜನ ಜಂಗುಳಿ ಹೆಚ್ಚಾಗುತ್ತಿದೆ. ಯಾರಿಗೆ ಕರೆ ಮಾಡಿದ್ದಾರೊ ಅವರು ಮಾತ್ರವೇ ಬಂದರೆ ಸಮಸ್ಯೆಯಾಗುವುದಿಲ್ಲ
–ಮರೇಶ್, ಪಿಎಂ ವಿಶ್ವಕರ್ಮ ಜಿಲ್ಲಾ ಮೇಲ್ವಿಚಾರಕ
ಪಿಎಂ ವಿಶ್ವಕರ್ಮ ತರಬೇತಿ ಕೇಂದ್ರದಲ್ಲಿ ಯಾವುದೇ ಸೌಲಭ್ಯಗಳಿಲ್ಲ. ನೂರಾರು ಫಲಾನುಭವಿಗಳು ಏಕಕಾಲದಲ್ಲಿ ಕೇಂದ್ರದಲ್ಲಿ ಸೇರುವುದರಿಂದ ಯಾವುದೇ ಕೆಲಸಗಳು ಆಗುತ್ತಿಲ್ಲ. ಇದರಿಂದ ಫಲಾನುಭವಿಗಳಿಗೆ ಸೂಕ್ತ ಸೌಕರ್ಯಗಳನ್ನು ಒದಗಿಸಿಕೊಡಬೇಕು
–ರಾಮು ಹೂಗಾರ, ಖಾನಾಪುರ ಫಲಾನುಭವಿ
ಪಿಎಂ ವಿಶ್ವಕರ್ಮ ತರಬೇತಿ ಕೇಂದ್ರ ಸೂಕ್ತ ಕಟ್ಟಡದಲ್ಲಿ ಮಾಡಬೇಕು. ಈಗ ಇರುವ ಕಟ್ಟಡ ಸಂಪೂರ್ಣ ಅವೈಜ್ಞಾನಿಕವಾಗಿದೆ. ಯಾವುದೇ ಸೌಲಭ್ಯಗಳಿಲ್ಲ. ಇದರಿಂದ ಫಲಾನುಭವಿಗಳು ತೊಂದರೆ ಪಡುವಂತೆ ಆಗಿದೆ