ಪ್ರತಿ ವರ್ಷ ಮುಂಗಾರು ಆರಂಭದ ಸಮಯದಲ್ಲಿ ಮಹಾರುದ್ರಾಭಿಷೇಕ ಮಾಡಲಾಗುತ್ತದೆ. ಈ ವರ್ಷವು ನಡೆಯಲಿದೆ. ಮಹಿಳೆಯರ ಕುಂಭಕಳಶ ಮೆರವಣಿಗೆ, ಭಜನೆ ಕಾರ್ಯಕ್ರಮ ನಡೆಯಲಿದೆ. ರೈತರು ಬೆಳೆಯುವ ಬೆಳೆ, ದವಸ, ಧಾನ್ಯಗಳು ಇಳುವರಿ ಹೆಚ್ಚಾಗಲೆಂದು, ರೋಗ ಕೀಟಬಾಧೆ ತಗುಲದಿರಲೆಂದು ಸಮಸ್ತ ನಾಡಿನ ಜನರು ಸುಖ–ಶಾಂತಿ, ಆರೋಗ್ಯ–ಐಶ್ವರ್ಯ ನೀಡಲೆಂದು ಮಹಾರುದ್ರಾಭಿಷೇಕ ಹಮ್ಮಿಕೊಳ್ಳಲಾಗಿದೆ ಎಂದು ರಾಜಶೇಖರ ರಾಜೇಶ್ವರ, ಶಿವಾನಂದ ಇಟಗಿ, ಮಾಣಿಕಪ್ಪ ಜನಕಟ್ಟಿ, ಅಂಬರಾಯ ಲಗಶೆಟ್ಟಿ, ಭೋಜಪ್ಪ ರಾಜೇಶ್ವರ ತಿಳಿಸಿದ್ದಾರೆ.