<p><strong>ಚಿಂತಕುಂಟ (ಯರಗೋಳ):</strong> ಪ್ರೌಢಶಾಲೆಯ ಮುಖವನ್ನೇ ನೋಡದ ವಿದ್ಯಾರ್ಥಿನಿ ಶ್ರೀದೇವಿ, ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಶೇ 98 ಅಂಕ ಪಡೆದು, ಬೆಂಗಳೂರು ನಗರ ಜಿಲ್ಲೆಗೆ ಅಗ್ರಸ್ಥಾನ ಗಳಿಸಿದ್ದಾರೆ.</p>.<p>ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 5ನೇ ತರಗತಿಯವರೆಗೆ ಅಧ್ಯಯನ, ಮೋಟ್ನಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 6 ಮತ್ತು 7ನೇ ತರಗತಿ ಪೂರ್ಣಗೊಳಿಸಿ ಬಳಿಕ ಶಾಲೆ ಬಿಟ್ಟು, ಜೀವನೋಪಾಯಕ್ಕಾಗಿ ತಂದೆ- ತಾಯಿಗಳ ಜೊತೆ ಶ್ರೀದೇವಿ ಬೆಂಗಳೂರಿಗೆ ದುಡಿಯಲು ಹೋಗಿದ್ದರು.</p>.<p>(8, 9 ,10 ತರಗತಿ) ಪ್ರೌಢಶಾಲೆಗೆ ಹೋಗದೆ, ಬಾಹ್ಯ ಅಭ್ಯರ್ಥಿಯಾಗಿ 2021ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆ ಬರೆದು ಶೇ 61 ಪ್ರತಿಶತ ಅಂಕಗಳಿಸಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದರು.</p>.<p>ಬೆಂಗಳೂರಿನ ಬಸವೇಶ್ವರ ನಗರದ ಬಿಬಿಎಂಪಿ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದ ಶ್ರೀದೇವಿ, 2023-24 ನೇ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ಬೆಂಗಳೂರು ನಗರ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇತಿಹಾಸ 98, ಅರ್ಥಶಾಸ್ತ್ರ 98, ರಾಜ್ಯಶಾಸ್ತ್ರ 100, ಕನ್ನಡ 98, ಇಂಗ್ಲಿಷ್ 94, ಸಮಾಜಶಾಸ್ತ್ರ 100, ಒಟ್ಟು 600ಕ್ಕೆ 588 ಅಂಕ ಪಡೆದಿದ್ದಾರೆ.</p>.<p>ಸಾಬಣ್ಣ, ಕಾಶಮ್ಮ ತಳವಾರ್ ದಂಪತಿಗೆ ಸ್ವಗ್ರಾಮ ಚಿಂತಕುಂಠದಲ್ಲಿ 3 ಎಕರೆ ಹೊಲವಿದ್ದು. ನಾಲ್ಕು ಜನ ಮಕ್ಕಳಿದ್ದಾರೆ. ಗಾರೆ (ಮನೆ ಕಟ್ಟುವ) ಕೆಲಸ ಮಾಡಿ, ಬೆಂಗಳೂರು ನಗರದ ಬಾಡಿಗೆ ಮನೆಯೆಲ್ಲಿ ಜೀವನ ಸಾಗಿಸುತ್ತಿದ್ದಾರೆ.</p>.<p>ತಂದೆ ಸಾಬಣ್ಣ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ ‘ನೋಡ್ರಿ ನಮಗೆ ಏನೂ ಗೊತ್ತಾಗುವುದಿಲ್ಲ. ಬಡತನದ ಕಾರಣ ಪ್ರೌಢಶಾಲೆಗೆ ಹೋಗ್ಲಿಲ್ರಿ, ಆದ್ರೂ ಪರೀಕ್ಷೆ ಬರೆದು ಪಾಸಾದಳು. ನನ್ನ ಮಗಳು ಎಲ್ಲಿತನಕ ಓದ್ತಾಳ ಅಲ್ಲಿವರೆಗೆ ಓದುಸ್ತೀನಿ’ ಎಂದರು.</p>.<p>‘ನಾನು ಮುಂದೆ ಕಲಾ ವಿಭಾಗದಲ್ಲಿ ಪದವಿ ಅಧ್ಯಯನ ಮಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡು ಉನ್ನತ ಅಧಿಕಾರಿ ಆಗುವ ಕನಸಿದೆ. ಅದನ್ನು ನನಸು ಮಾಡಿಕೊಳ್ಳುತ್ತೇನೆ’ ಎಂದು ವಿದ್ಯಾರ್ಥಿನಿ ಶ್ರೀದೇವಿ ತಿಳಿಸಿದರು.<br><br></p>.<div><blockquote>ವಿದ್ಯಾರ್ಥಿನಿ ಶ್ರೀದೇವಿ ಅಪ್ಪಟ ಗ್ರಾಮೀಣ ಪ್ರತಿಭೆ ಶ್ರಮವಹಿಸಿ ಅಧ್ಯಯನ ಮಾಡುತ್ತಿದ್ದಳು ಉತ್ತಮ ಅಂಕಗಳನ್ನು ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾಳೆ.</blockquote><span class="attribution"> ಈಶ್ವರಪ್ಪ ಪ್ರಾಂಶುಪಾಲರು ಬಿಬಿಎಂಪಿ ಸರ್ಕಾರಿ ಪ.ಪೂ. ಮಹಾವಿದ್ಯಾಲಯ ಬಸವೇಶ್ವರನಗರ ಬೆಂಗಳೂರು</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂತಕುಂಟ (ಯರಗೋಳ):</strong> ಪ್ರೌಢಶಾಲೆಯ ಮುಖವನ್ನೇ ನೋಡದ ವಿದ್ಯಾರ್ಥಿನಿ ಶ್ರೀದೇವಿ, ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಶೇ 98 ಅಂಕ ಪಡೆದು, ಬೆಂಗಳೂರು ನಗರ ಜಿಲ್ಲೆಗೆ ಅಗ್ರಸ್ಥಾನ ಗಳಿಸಿದ್ದಾರೆ.</p>.<p>ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 5ನೇ ತರಗತಿಯವರೆಗೆ ಅಧ್ಯಯನ, ಮೋಟ್ನಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 6 ಮತ್ತು 7ನೇ ತರಗತಿ ಪೂರ್ಣಗೊಳಿಸಿ ಬಳಿಕ ಶಾಲೆ ಬಿಟ್ಟು, ಜೀವನೋಪಾಯಕ್ಕಾಗಿ ತಂದೆ- ತಾಯಿಗಳ ಜೊತೆ ಶ್ರೀದೇವಿ ಬೆಂಗಳೂರಿಗೆ ದುಡಿಯಲು ಹೋಗಿದ್ದರು.</p>.<p>(8, 9 ,10 ತರಗತಿ) ಪ್ರೌಢಶಾಲೆಗೆ ಹೋಗದೆ, ಬಾಹ್ಯ ಅಭ್ಯರ್ಥಿಯಾಗಿ 2021ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆ ಬರೆದು ಶೇ 61 ಪ್ರತಿಶತ ಅಂಕಗಳಿಸಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದರು.</p>.<p>ಬೆಂಗಳೂರಿನ ಬಸವೇಶ್ವರ ನಗರದ ಬಿಬಿಎಂಪಿ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದ ಶ್ರೀದೇವಿ, 2023-24 ನೇ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ಬೆಂಗಳೂರು ನಗರ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇತಿಹಾಸ 98, ಅರ್ಥಶಾಸ್ತ್ರ 98, ರಾಜ್ಯಶಾಸ್ತ್ರ 100, ಕನ್ನಡ 98, ಇಂಗ್ಲಿಷ್ 94, ಸಮಾಜಶಾಸ್ತ್ರ 100, ಒಟ್ಟು 600ಕ್ಕೆ 588 ಅಂಕ ಪಡೆದಿದ್ದಾರೆ.</p>.<p>ಸಾಬಣ್ಣ, ಕಾಶಮ್ಮ ತಳವಾರ್ ದಂಪತಿಗೆ ಸ್ವಗ್ರಾಮ ಚಿಂತಕುಂಠದಲ್ಲಿ 3 ಎಕರೆ ಹೊಲವಿದ್ದು. ನಾಲ್ಕು ಜನ ಮಕ್ಕಳಿದ್ದಾರೆ. ಗಾರೆ (ಮನೆ ಕಟ್ಟುವ) ಕೆಲಸ ಮಾಡಿ, ಬೆಂಗಳೂರು ನಗರದ ಬಾಡಿಗೆ ಮನೆಯೆಲ್ಲಿ ಜೀವನ ಸಾಗಿಸುತ್ತಿದ್ದಾರೆ.</p>.<p>ತಂದೆ ಸಾಬಣ್ಣ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ ‘ನೋಡ್ರಿ ನಮಗೆ ಏನೂ ಗೊತ್ತಾಗುವುದಿಲ್ಲ. ಬಡತನದ ಕಾರಣ ಪ್ರೌಢಶಾಲೆಗೆ ಹೋಗ್ಲಿಲ್ರಿ, ಆದ್ರೂ ಪರೀಕ್ಷೆ ಬರೆದು ಪಾಸಾದಳು. ನನ್ನ ಮಗಳು ಎಲ್ಲಿತನಕ ಓದ್ತಾಳ ಅಲ್ಲಿವರೆಗೆ ಓದುಸ್ತೀನಿ’ ಎಂದರು.</p>.<p>‘ನಾನು ಮುಂದೆ ಕಲಾ ವಿಭಾಗದಲ್ಲಿ ಪದವಿ ಅಧ್ಯಯನ ಮಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡು ಉನ್ನತ ಅಧಿಕಾರಿ ಆಗುವ ಕನಸಿದೆ. ಅದನ್ನು ನನಸು ಮಾಡಿಕೊಳ್ಳುತ್ತೇನೆ’ ಎಂದು ವಿದ್ಯಾರ್ಥಿನಿ ಶ್ರೀದೇವಿ ತಿಳಿಸಿದರು.<br><br></p>.<div><blockquote>ವಿದ್ಯಾರ್ಥಿನಿ ಶ್ರೀದೇವಿ ಅಪ್ಪಟ ಗ್ರಾಮೀಣ ಪ್ರತಿಭೆ ಶ್ರಮವಹಿಸಿ ಅಧ್ಯಯನ ಮಾಡುತ್ತಿದ್ದಳು ಉತ್ತಮ ಅಂಕಗಳನ್ನು ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾಳೆ.</blockquote><span class="attribution"> ಈಶ್ವರಪ್ಪ ಪ್ರಾಂಶುಪಾಲರು ಬಿಬಿಎಂಪಿ ಸರ್ಕಾರಿ ಪ.ಪೂ. ಮಹಾವಿದ್ಯಾಲಯ ಬಸವೇಶ್ವರನಗರ ಬೆಂಗಳೂರು</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>