‘ರಾಜ್ಯದ ಎಲ್ಲಾ ಜಿಲ್ಲಾಕೇಂದ್ರಗಳಲ್ಲಿ ಸ್ಥಳೀಯ ಸಾಧಕರನ್ನು ಗೌರವಿಸುತ್ತಾ ಬಂದಿವೆ. ಆದರೆ, ಯಾದಗಿರಿ ಜಿಲ್ಲೆಯಾಗಿ ಒಂಬತ್ತು ವರ್ಷ ಕಳೆದರೂ ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಮುಂದಾಗಿಲ್ಲ. ಜಿಲ್ಲೆಯಲ್ಲಿ ಶಿಕ್ಷಣ, ಆರೊಗ್ಯ, ಕೃಷಿ, ಜನಪದ, ಸಮಾಜಸೇವೆ, ಪತ್ರಿಕಾ ಮಾಧ್ಯಮ, ಗ್ರಾಮೀಣ ಕಲೆ, ಕುಶಲ ಕೈಗಾರಿಕೆ, ಸಂಗೀತ, ಭರತನಾಟ್ಯ ಇನ್ನೂ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ಇದ್ದಾರೆ. 50ಕ್ಕೂ ಹೆಚ್ಚು ವಯೋಮಾನದ ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಜಿಲ್ಲಾಡಳಿತ ಮಾಡಬೇಕಿದೆ’ ಎಂದು ಅವರು ಸಲಹೆ ನೀಡಿದ್ದಾರೆ.