<p><strong>ಯಾದಗಿರಿ:</strong> ‘ಪುರಂದರದಾಸರು ತಮ್ಮ ಕೀರ್ತನೆ, ಸುಳಾದಿ, ಉಗಾಭೋಗ ಸೇರಿದಂತೆ 4.75 ಲಕ್ಷ ರಚನೆಗಳ ಮೂಲಕ ಸಾಮಾನ್ಯ ಜನತೆಗೆ ದ್ವೈತ ಮತವನ್ನು ಅರ್ಥೈಸಿದರು’ ಎಂದು ನರಸಿಂಹಾಚಾರ್ ಪುರಾಣಿಕ ಹೇಳಿದರು.</p>.<p>ನಗರದಲ್ಲಿ ಉತ್ತರಾದಿ ಮಠದ ಪರಿಮಳ ಮಂಟಪದಲ್ಲಿ ಉತ್ತರಾದಿಮಠ ವಿಶ್ವ ಮದ್ವ ಮಹಾಪರಿಷತ್ ಮತ್ತು ಸೌರಭದಾಸ ಸಾಹಿತ್ಯ ವಿದ್ಯಾಲಯ ಸಹಯೋಗದಲ್ಲಿ ಪುರಂದರದಾಸರ ಪುಣ್ಯತಿಥಿಯ ಹಿನ್ನಲೆ ಆಯೋಜಿಸಿದ್ದ ನಗರ ಸಂಕೀರ್ತನೆ ಕಾರ್ಯಕ್ರಮ ಹಾಗೂ ಪುರಂದರ ದಾಸರ ಆರಾಧನಾ ಮಹೋತ್ಸವದಲ್ಲಿ ಅವರು ಮಾತನಾಡಿದರು.</p>.<p>‘ಪುರಂದರದಾಸರು ತಮ್ಮ ಗುರುಗಳಾದ ವ್ಯಾಸರಾಜ ಶ್ರೀಗಳಿಂದ ‘ದಾಸರೆಂದರೆ ಪುರಂದರದಾಸರಯ್ಯ’ ಎಂದು ಕರೆಸಿಕೊಂಡರು. ಸಂಸಾರದಲ್ಲಿದ್ದೂ ಕೃಷ್ಣನ ಒಲುಮೆಯಿಂದ ಮುಕ್ತಿ ಪಡೆಯಬಹುದು ಎಂದು ಭಗವಂತನ ಮಹಿಮೆ ಮತ್ತು ಭಕ್ತವತ್ಸಲತೆಯನ್ನು ಸಾರಿದ್ದಾರೆ’ ಎಂದರು.</p>.<p>‘ಆಚಾರ್ಯರ ಪಂಚಭೇದ ತಾರತಮ್ಯವನ್ನು ಸಾಮಾನ್ಯರಿಗೂ ತಿಳಿಯುವಂತೆ ಉಪದೇಶಿಸಿದ ಕೀರ್ತಿ ಮತ್ತು ಮದ್ವಮುನಿಗಳ ಮೂಲಕ ಶ್ರೀಹರಿಯ ಸೇರುವ ಮಾರ್ಗವನ್ನಿತ್ತ ಮಹನೀಯರು’ ಎಂದು ಅಭಿಪ್ರಾಯಪಟ್ಟರು.</p>.<p>‘ಕರ್ಣಾಟಕ ಸಂಗೀತ ಪಿತಾಮಹ ಪುರಂದರದಾಸರು ತಮ್ಮ ಕೀರ್ತನೆಗಳಿಂದ ಜನರನ್ನು ತಿದ್ದಿದ್ದಾರೆ. ನಮ್ಮ ರಾಜ್ಯದಲ್ಲಿ ಹಲವು ದಾಸರು ಜನಿಸಿದ್ದು, ನಮ್ಮೆಲ್ಲರ ಭಾಗ್ಯ. ಪುರಂದರ ದಾಸರು ಪುಷ್ಯಮಾಸದ ಅಮಾವಾಸ್ಯೆಗೆ ಕೃಷ್ಣೈಕ್ಯರಾದರು’ ಎಂದು ವಿವರಿಸಿದರು.</p>.<p>ರಾಘವೇಂದ್ರ ಜೋಶಿ ಸೇರಿದಂತೆ ಅನೇಕ ವಿಪ್ರರು ಮತ್ತು ಗಣ್ಯರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ:</strong> ‘ಪುರಂದರದಾಸರು ತಮ್ಮ ಕೀರ್ತನೆ, ಸುಳಾದಿ, ಉಗಾಭೋಗ ಸೇರಿದಂತೆ 4.75 ಲಕ್ಷ ರಚನೆಗಳ ಮೂಲಕ ಸಾಮಾನ್ಯ ಜನತೆಗೆ ದ್ವೈತ ಮತವನ್ನು ಅರ್ಥೈಸಿದರು’ ಎಂದು ನರಸಿಂಹಾಚಾರ್ ಪುರಾಣಿಕ ಹೇಳಿದರು.</p>.<p>ನಗರದಲ್ಲಿ ಉತ್ತರಾದಿ ಮಠದ ಪರಿಮಳ ಮಂಟಪದಲ್ಲಿ ಉತ್ತರಾದಿಮಠ ವಿಶ್ವ ಮದ್ವ ಮಹಾಪರಿಷತ್ ಮತ್ತು ಸೌರಭದಾಸ ಸಾಹಿತ್ಯ ವಿದ್ಯಾಲಯ ಸಹಯೋಗದಲ್ಲಿ ಪುರಂದರದಾಸರ ಪುಣ್ಯತಿಥಿಯ ಹಿನ್ನಲೆ ಆಯೋಜಿಸಿದ್ದ ನಗರ ಸಂಕೀರ್ತನೆ ಕಾರ್ಯಕ್ರಮ ಹಾಗೂ ಪುರಂದರ ದಾಸರ ಆರಾಧನಾ ಮಹೋತ್ಸವದಲ್ಲಿ ಅವರು ಮಾತನಾಡಿದರು.</p>.<p>‘ಪುರಂದರದಾಸರು ತಮ್ಮ ಗುರುಗಳಾದ ವ್ಯಾಸರಾಜ ಶ್ರೀಗಳಿಂದ ‘ದಾಸರೆಂದರೆ ಪುರಂದರದಾಸರಯ್ಯ’ ಎಂದು ಕರೆಸಿಕೊಂಡರು. ಸಂಸಾರದಲ್ಲಿದ್ದೂ ಕೃಷ್ಣನ ಒಲುಮೆಯಿಂದ ಮುಕ್ತಿ ಪಡೆಯಬಹುದು ಎಂದು ಭಗವಂತನ ಮಹಿಮೆ ಮತ್ತು ಭಕ್ತವತ್ಸಲತೆಯನ್ನು ಸಾರಿದ್ದಾರೆ’ ಎಂದರು.</p>.<p>‘ಆಚಾರ್ಯರ ಪಂಚಭೇದ ತಾರತಮ್ಯವನ್ನು ಸಾಮಾನ್ಯರಿಗೂ ತಿಳಿಯುವಂತೆ ಉಪದೇಶಿಸಿದ ಕೀರ್ತಿ ಮತ್ತು ಮದ್ವಮುನಿಗಳ ಮೂಲಕ ಶ್ರೀಹರಿಯ ಸೇರುವ ಮಾರ್ಗವನ್ನಿತ್ತ ಮಹನೀಯರು’ ಎಂದು ಅಭಿಪ್ರಾಯಪಟ್ಟರು.</p>.<p>‘ಕರ್ಣಾಟಕ ಸಂಗೀತ ಪಿತಾಮಹ ಪುರಂದರದಾಸರು ತಮ್ಮ ಕೀರ್ತನೆಗಳಿಂದ ಜನರನ್ನು ತಿದ್ದಿದ್ದಾರೆ. ನಮ್ಮ ರಾಜ್ಯದಲ್ಲಿ ಹಲವು ದಾಸರು ಜನಿಸಿದ್ದು, ನಮ್ಮೆಲ್ಲರ ಭಾಗ್ಯ. ಪುರಂದರ ದಾಸರು ಪುಷ್ಯಮಾಸದ ಅಮಾವಾಸ್ಯೆಗೆ ಕೃಷ್ಣೈಕ್ಯರಾದರು’ ಎಂದು ವಿವರಿಸಿದರು.</p>.<p>ರಾಘವೇಂದ್ರ ಜೋಶಿ ಸೇರಿದಂತೆ ಅನೇಕ ವಿಪ್ರರು ಮತ್ತು ಗಣ್ಯರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>