ಯಾದಗಿರಿ: ಜಿಲ್ಲೆಯ ವಿವಿಧೆಡೆ ಶನಿವಾರ ಬೆಳಗಿನ ಜಾವ ತುಂತುರು ಮಳೆಯಾಗಿದ್ದು, ಈಗ ಮೋಡ ಕವಿದ ವಾತಾವರಣ ಇದೆ.
ನಗರದಲ್ಲಿ ಬೆಳಿಗ್ಗೆ 7 ಗಂಟೆಗೆ ಶುರುವಾರ ಮಳೆ 10 ನಿಮಿಷ ಮಳೆ ಸುರಿಯಿತು. ಅಲ್ಲಲ್ಲಿ ನೀರು ನಿಂತು ತಂಪಿನ ವಾತಾವರಣ ನಿರ್ಮಾಣವಾಯಿತು.
ವಡಗೇರಾದಲ್ಲಿ ಬೆಳಗಿನ ಜಾವ ಸ್ವಲ್ಪ ಮಳೆಯಾಗಿದೆ. ಈಗ ಮೋಡ ಕವಿದ ವಾತಾವರಣ ಇದೆ.
ಹುಣಸಗಿ, ಶಹಾಪುರ, ಸುರಪುರ, ನಾರಾಯಣಪುರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮೋಡ ಕವಿದ ವಾತಾವರಣ ಇದೆ.
ವಿದ್ಯುತ್ ವ್ಯತ್ಯಯ: ಬೆಳಗಿನ ಜಾವ ಮಳೆಯಾದ ಕಾರಣ ನಗರದ ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.