<p><strong>ಶಹಾಪುರ</strong>: ಕಲ್ಲಿನಿಂದ ಕೈ ಬೆರಳಿಗೆ ಹೊಡೆದು ಗಾಯ ಮಾಡಿ, ಜೀವ ಬೆದರಿಕೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪ ಸಾಬೀತಾಗಿದ್ದರಿಂದ ಮಂಗಳವಾರ ಇಲ್ಲಿನ ಹೆಚ್ಚುವರಿ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ ಪೂಜಾರ ಅವರು ಒಬ್ಬರಿಗೆ ₹3 ಸಾವಿರ ಹಾಗೂ ಇನ್ನೊಬ್ಬರಿಗೆ ₹13 ಸಾವಿರ ದಂಡ ಹಾಗೂ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.</p>.<p>ತಾಲ್ಲೂಕಿನ ಗೋಗಿ(ಕೆ) ಗ್ರಾಮದ ಚಂದ್ರಪ್ಪ ತಿಪ್ಪಣ್ಣ ಹೊಸಮನಿ ಹಾಗೂ ದೊಡ್ಡಮ್ಮ ಚಂದ್ರಪ್ಪ ಹೊಸಮನಿ ಶಿಕ್ಷೆ ಹಾಗೂ ದಂಡನೆಗೆ ಒಳಗಾದ ವ್ಯಕ್ತಿಗಳು ಆಗಿದ್ದಾರೆ.</p>.<p>ಚಂದ್ರಪ್ಪ ಅವರಿಗೆ ನ್ಯಾಯಾಲಯವು ₹13 ಸಾವಿರ ದಂಡ ಹಾಗೂ 1ವರ್ಷ ಜೈಲು ಶಿಕ್ಷೆ ವಿಧಿಸಿದೆ. ದೊಡ್ಡಮ್ಮ ಅವರಿಗೆ ₹3 ಸಾವಿರ ದಂಡ ವಿಧಿಸಿದೆ.</p>.<p>2023 ಮಾರ್ಚ್ 4ರಂದು ಮನೆಯ ಜಾಗದ ವಿಷಯವಾಗಿ ತಕರಾರು ನಡೆದಾಗ ಚಂದ್ರಪ್ಪ ಹಾಗೂ ದೊಡ್ಡಮ್ಮ ಇಬ್ಬರು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಗೋಗಿ ಠಾಣೆಯಲ್ಲಿ ಅಂಬಲಪ್ಪ ಸಾಯಿಬಣ್ಣ ಹೊಸಮನಿ ದೂರು ದಾಖಲಿಸಿದ್ದರು.</p>.<p>ಅಂದಿನ ಠಾಣೆಯ ಪಿಎಸ್ಐ ವಸೀಮ್ ಪಟೇಲ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಫಿರ್ಯಾದಿದಾರರ ಪರವಾಗಿ ಎಪಿಪಿ ಮರೆಪ್ಪ ಹೊಸಮನಿ ವಾದ ಮಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಹಾಪುರ</strong>: ಕಲ್ಲಿನಿಂದ ಕೈ ಬೆರಳಿಗೆ ಹೊಡೆದು ಗಾಯ ಮಾಡಿ, ಜೀವ ಬೆದರಿಕೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪ ಸಾಬೀತಾಗಿದ್ದರಿಂದ ಮಂಗಳವಾರ ಇಲ್ಲಿನ ಹೆಚ್ಚುವರಿ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ ಪೂಜಾರ ಅವರು ಒಬ್ಬರಿಗೆ ₹3 ಸಾವಿರ ಹಾಗೂ ಇನ್ನೊಬ್ಬರಿಗೆ ₹13 ಸಾವಿರ ದಂಡ ಹಾಗೂ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.</p>.<p>ತಾಲ್ಲೂಕಿನ ಗೋಗಿ(ಕೆ) ಗ್ರಾಮದ ಚಂದ್ರಪ್ಪ ತಿಪ್ಪಣ್ಣ ಹೊಸಮನಿ ಹಾಗೂ ದೊಡ್ಡಮ್ಮ ಚಂದ್ರಪ್ಪ ಹೊಸಮನಿ ಶಿಕ್ಷೆ ಹಾಗೂ ದಂಡನೆಗೆ ಒಳಗಾದ ವ್ಯಕ್ತಿಗಳು ಆಗಿದ್ದಾರೆ.</p>.<p>ಚಂದ್ರಪ್ಪ ಅವರಿಗೆ ನ್ಯಾಯಾಲಯವು ₹13 ಸಾವಿರ ದಂಡ ಹಾಗೂ 1ವರ್ಷ ಜೈಲು ಶಿಕ್ಷೆ ವಿಧಿಸಿದೆ. ದೊಡ್ಡಮ್ಮ ಅವರಿಗೆ ₹3 ಸಾವಿರ ದಂಡ ವಿಧಿಸಿದೆ.</p>.<p>2023 ಮಾರ್ಚ್ 4ರಂದು ಮನೆಯ ಜಾಗದ ವಿಷಯವಾಗಿ ತಕರಾರು ನಡೆದಾಗ ಚಂದ್ರಪ್ಪ ಹಾಗೂ ದೊಡ್ಡಮ್ಮ ಇಬ್ಬರು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಗೋಗಿ ಠಾಣೆಯಲ್ಲಿ ಅಂಬಲಪ್ಪ ಸಾಯಿಬಣ್ಣ ಹೊಸಮನಿ ದೂರು ದಾಖಲಿಸಿದ್ದರು.</p>.<p>ಅಂದಿನ ಠಾಣೆಯ ಪಿಎಸ್ಐ ವಸೀಮ್ ಪಟೇಲ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಫಿರ್ಯಾದಿದಾರರ ಪರವಾಗಿ ಎಪಿಪಿ ಮರೆಪ್ಪ ಹೊಸಮನಿ ವಾದ ಮಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>