<p><strong>ಸಾವೂರು (ಸೈದಾಪುರ):</strong> ಸಮೀಪದ ಸಾವೂರ ಗ್ರಾಮದ ದೊಡ್ಡಪ್ಪತಾತ ದೇವಸ್ಥಾನದಲ್ಲಿ ದೊಡ್ಡಪ್ಪ ತಾತ ಶಿವಶರಣರ ರಥೋತ್ಸವವು ಬುಧವಾರ ಸಂಜೆ ಸಾವಿರಾರು ಭಕ್ತರ ಮಧ್ಯೆ ಅದ್ದೂರಿಯಾಗಿ ಜರುಗಿತು.</p>.<p>ದೊಡ್ಡಪ್ಪತಾತಾ ಮೂರ್ತಿಗೆ ಅಭಿಷೇಕ ಮಾಡಿ ವಿಶೇಷ ಪೂಜೆ ಸಲ್ಲಿಸಿದ ಭಕ್ತರು ನಂದಿಕೋಲು ಮತ್ತು ಪುರವಂತರ ಸೇವೆ ಮಾಡಿದರು. ಮಂದಿರದಿಂದ ದೊಡ್ಡಪ್ಪತಾತಾ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಹೊತ್ತು ದೇವಸ್ಥಾನ ಹಾಗೂ ಭವ್ಯ ರಥದ ಸುತ್ತಲೂ ಪ್ರದಕ್ಷಣೆ ಹಾಕಲಾಯಿತು.</p>.<p>ರಥದಲ್ಲಿ ಮೂರ್ತಿಯನ್ನು ಇಟ್ಟು, ಸಂಜೆ 6ರ ಸುಮಾರು ವೀರಯ್ಯಸ್ವಾಮಿ ಹಿರೇಮಠ ಸಾನ್ನಿಧ್ಯದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥೋತ್ಸವದ ದಾರಿಯುದ್ದಕ್ಕೂ ಜನರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ರಥವನ್ನು ಬಣ್ಣ ಬಣ್ಣದ ಹೂಗಳು, ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿತ್ತು.</p>.<p>ಮಲ್ಹಾರ, ಹೆಗ್ಗಣಗೇರಾ, ಲಿಂಗೇರಿ, ಕೌಳೂರು, ಮುಷ್ಠೂರು, ಕ್ಯಾತ್ನಾಳ, ಆನೂರು (ಬಿ), ಆನೂರು (ಕೆ), ಬೆಳಗುಂದಿ, ಭೀಮನಳ್ಳಿ, ದುಪ್ಪಲ್ಲಿ, ಬದ್ದೇಪಲ್ಲಿ, ಕೂಡ್ಲೂರು, ನಾಗರಬಂಡಿ, ಗೌಡಗೇರಾ, ಮುನಗಾಲ, ಗೊಂದಡಿಗಿ, ಸೈದಾಪುರ ಸೇರಿದಂತೆ ನೆರೆಯ ರಾಯಚೂರು, ಕಲಬುರ್ಗಿ, ವಿಜಯಪುರ ಸೇರಿದಂತೆ ನೆರೆಯ ರಾಜ್ಯಗಳ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾವೂರು (ಸೈದಾಪುರ):</strong> ಸಮೀಪದ ಸಾವೂರ ಗ್ರಾಮದ ದೊಡ್ಡಪ್ಪತಾತ ದೇವಸ್ಥಾನದಲ್ಲಿ ದೊಡ್ಡಪ್ಪ ತಾತ ಶಿವಶರಣರ ರಥೋತ್ಸವವು ಬುಧವಾರ ಸಂಜೆ ಸಾವಿರಾರು ಭಕ್ತರ ಮಧ್ಯೆ ಅದ್ದೂರಿಯಾಗಿ ಜರುಗಿತು.</p>.<p>ದೊಡ್ಡಪ್ಪತಾತಾ ಮೂರ್ತಿಗೆ ಅಭಿಷೇಕ ಮಾಡಿ ವಿಶೇಷ ಪೂಜೆ ಸಲ್ಲಿಸಿದ ಭಕ್ತರು ನಂದಿಕೋಲು ಮತ್ತು ಪುರವಂತರ ಸೇವೆ ಮಾಡಿದರು. ಮಂದಿರದಿಂದ ದೊಡ್ಡಪ್ಪತಾತಾ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಹೊತ್ತು ದೇವಸ್ಥಾನ ಹಾಗೂ ಭವ್ಯ ರಥದ ಸುತ್ತಲೂ ಪ್ರದಕ್ಷಣೆ ಹಾಕಲಾಯಿತು.</p>.<p>ರಥದಲ್ಲಿ ಮೂರ್ತಿಯನ್ನು ಇಟ್ಟು, ಸಂಜೆ 6ರ ಸುಮಾರು ವೀರಯ್ಯಸ್ವಾಮಿ ಹಿರೇಮಠ ಸಾನ್ನಿಧ್ಯದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥೋತ್ಸವದ ದಾರಿಯುದ್ದಕ್ಕೂ ಜನರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ರಥವನ್ನು ಬಣ್ಣ ಬಣ್ಣದ ಹೂಗಳು, ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿತ್ತು.</p>.<p>ಮಲ್ಹಾರ, ಹೆಗ್ಗಣಗೇರಾ, ಲಿಂಗೇರಿ, ಕೌಳೂರು, ಮುಷ್ಠೂರು, ಕ್ಯಾತ್ನಾಳ, ಆನೂರು (ಬಿ), ಆನೂರು (ಕೆ), ಬೆಳಗುಂದಿ, ಭೀಮನಳ್ಳಿ, ದುಪ್ಪಲ್ಲಿ, ಬದ್ದೇಪಲ್ಲಿ, ಕೂಡ್ಲೂರು, ನಾಗರಬಂಡಿ, ಗೌಡಗೇರಾ, ಮುನಗಾಲ, ಗೊಂದಡಿಗಿ, ಸೈದಾಪುರ ಸೇರಿದಂತೆ ನೆರೆಯ ರಾಯಚೂರು, ಕಲಬುರ್ಗಿ, ವಿಜಯಪುರ ಸೇರಿದಂತೆ ನೆರೆಯ ರಾಜ್ಯಗಳ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>