<p><strong>ಯಾದಗಿರಿ: </strong>ಮಹಿಳೆಯರ ರಕ್ಷಣೆ ಪೊಲೀಸ್ ಇಲಾಖೆಯ ಜವಾಬ್ದಾರಿಯಾಗಿದ್ದು, ಅದರ ಜತೆಗೆ ಅವರು ಸ್ವಯಂ ರಕ್ಷಣೆಯ ಕಲೆಗಳನ್ನು ತಿಳಿದುಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ತಿಳಿಸಿದರು.</p>.<p>ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಯುವತಿಯರ ಸ್ವ ರಕ್ಷಣೆಗಾಗಿ ಜಿಲ್ಲಾ ಪೊಲೀಸ್ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಕರಾಟೆ ತರಬೇತಿ ಕಾರ್ಯಾಗಾರದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಬಸ್ ಸೇರಿದಂತೆ ತಮ್ಮ ಗ್ರಾಮಗಳಿಗೆ ತೆರಳುವ ವೇಳೆ ಪುಂಡ ಪೋಕರಿಗಳು ತೊಂದರೆ ಕೊಟ್ಟರೆ ವಿದ್ಯಾರ್ಥಿನಿಯರು ತಮ್ಮ ಬ್ಯಾಗಿನಲ್ಲಿ ಪೆಪ್ಪರ್ ಪೌಡರ್, ಖಾರದ ಪುಡಿ ಇಟ್ಟುಕೊಳ್ಳಬೇಕು. ಆಗ ಸ್ವಯಂ ರಕ್ಷಣೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.</p>.<p>ಎಲ್ಲ ಬಳಿಯೂ ದುಬಾರಿ ಬೆಲೆಯ ಮೊಬೈಲ್ಗಳಿಗೆ ಆದರೆ ಸ್ವಯಂ ರಕ್ಷಣೆಗೆ ಖಾರದಿ ಪುಡಿ ಇಟ್ಟುಕೊಳ್ಳುವುದನ್ನು ರೂಢಿಸಿಕೊಳ್ಳಿ ಎಂದು ಅವರುಮಾಹಿತಿ ನೀಡಿದರು.</p>.<p>ನನಗೇನೂ ಆಗುವುದಿಲ್ಲ ಎನ್ನುವ ಭಾವನೆ ಬಿಟ್ಟು ಎಲ್ಲರೂ ತಮ್ಮ ರಕ್ಷಣೆ ಮಾಡಿಕೊಳ್ಳಬೇಕು. ಗೃಹ ರಕ್ಷಣೆ ಆ್ಯಪ್ ಬಳಸಿ ಕಳ್ಳತನ ಆಗುವುದನ್ನು ತಡೆಗಟ್ಟಬೇಕು. ಯಾವುದೇ ತುರ್ತು ಪರಿಸ್ಥಿತಿಯಲ್ಲಿ 112 ಸಂಖ್ಯೆಗೆ ಕರೆ ಮಾಡಬೇಕು. ಅಸ್ಪೃಶ್ಯತೆ ಆಚರಣೆ ಮಾಡುವುದು ಸಲ್ಲದು ಎಂದರು.</p>.<p>ಅಲ್ಲದೇ ಮಹಿಳಾ ಮಕ್ಕಳ ಮೇಲಿನ ದೌರ್ಜನ್ಯ, ಸಂಚಾರ ನಿಯಮ ಪಾಲನೆ ಬಗ್ಗೆ ಮಾಹಿತಿ ನೀಡಲಾಯಿತು.ನಂತರಕರಾಟೆ ತರಬೇತಿ ಕಾರ್ಯಾಗಾರ ಹಮ್ಮಿಕೊಂಡು ಕಾಲೇಜು ಮತ್ತು ಹೈಸ್ಕೂಲಿನಲ್ಲಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ನೀಡಲಾಯಿತು.</p>.<p>ಈ ವೇಳೆ ಯಾದಗಿರಿ ಡಿವೈಎಸ್ಪಿ ಸಂತೋಷ ಬನ್ನಟ್ಟಿ, ಸಿಪಿಐ ದೀಪಕ್, ಸಂಚಾರ ಪಿಎಸ್ಐ ಮಹೆಬೂಬ್ ಅಲಿ, ಬಾಲಕಿಯರ ಕಾಲೇಜು ಪ್ರಾಶುಂಪಾಲ ಚನ್ನಬಸಪ್ಪ ಕುಳಗೇರಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ: </strong>ಮಹಿಳೆಯರ ರಕ್ಷಣೆ ಪೊಲೀಸ್ ಇಲಾಖೆಯ ಜವಾಬ್ದಾರಿಯಾಗಿದ್ದು, ಅದರ ಜತೆಗೆ ಅವರು ಸ್ವಯಂ ರಕ್ಷಣೆಯ ಕಲೆಗಳನ್ನು ತಿಳಿದುಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ತಿಳಿಸಿದರು.</p>.<p>ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಯುವತಿಯರ ಸ್ವ ರಕ್ಷಣೆಗಾಗಿ ಜಿಲ್ಲಾ ಪೊಲೀಸ್ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಕರಾಟೆ ತರಬೇತಿ ಕಾರ್ಯಾಗಾರದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಬಸ್ ಸೇರಿದಂತೆ ತಮ್ಮ ಗ್ರಾಮಗಳಿಗೆ ತೆರಳುವ ವೇಳೆ ಪುಂಡ ಪೋಕರಿಗಳು ತೊಂದರೆ ಕೊಟ್ಟರೆ ವಿದ್ಯಾರ್ಥಿನಿಯರು ತಮ್ಮ ಬ್ಯಾಗಿನಲ್ಲಿ ಪೆಪ್ಪರ್ ಪೌಡರ್, ಖಾರದ ಪುಡಿ ಇಟ್ಟುಕೊಳ್ಳಬೇಕು. ಆಗ ಸ್ವಯಂ ರಕ್ಷಣೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.</p>.<p>ಎಲ್ಲ ಬಳಿಯೂ ದುಬಾರಿ ಬೆಲೆಯ ಮೊಬೈಲ್ಗಳಿಗೆ ಆದರೆ ಸ್ವಯಂ ರಕ್ಷಣೆಗೆ ಖಾರದಿ ಪುಡಿ ಇಟ್ಟುಕೊಳ್ಳುವುದನ್ನು ರೂಢಿಸಿಕೊಳ್ಳಿ ಎಂದು ಅವರುಮಾಹಿತಿ ನೀಡಿದರು.</p>.<p>ನನಗೇನೂ ಆಗುವುದಿಲ್ಲ ಎನ್ನುವ ಭಾವನೆ ಬಿಟ್ಟು ಎಲ್ಲರೂ ತಮ್ಮ ರಕ್ಷಣೆ ಮಾಡಿಕೊಳ್ಳಬೇಕು. ಗೃಹ ರಕ್ಷಣೆ ಆ್ಯಪ್ ಬಳಸಿ ಕಳ್ಳತನ ಆಗುವುದನ್ನು ತಡೆಗಟ್ಟಬೇಕು. ಯಾವುದೇ ತುರ್ತು ಪರಿಸ್ಥಿತಿಯಲ್ಲಿ 112 ಸಂಖ್ಯೆಗೆ ಕರೆ ಮಾಡಬೇಕು. ಅಸ್ಪೃಶ್ಯತೆ ಆಚರಣೆ ಮಾಡುವುದು ಸಲ್ಲದು ಎಂದರು.</p>.<p>ಅಲ್ಲದೇ ಮಹಿಳಾ ಮಕ್ಕಳ ಮೇಲಿನ ದೌರ್ಜನ್ಯ, ಸಂಚಾರ ನಿಯಮ ಪಾಲನೆ ಬಗ್ಗೆ ಮಾಹಿತಿ ನೀಡಲಾಯಿತು.ನಂತರಕರಾಟೆ ತರಬೇತಿ ಕಾರ್ಯಾಗಾರ ಹಮ್ಮಿಕೊಂಡು ಕಾಲೇಜು ಮತ್ತು ಹೈಸ್ಕೂಲಿನಲ್ಲಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ನೀಡಲಾಯಿತು.</p>.<p>ಈ ವೇಳೆ ಯಾದಗಿರಿ ಡಿವೈಎಸ್ಪಿ ಸಂತೋಷ ಬನ್ನಟ್ಟಿ, ಸಿಪಿಐ ದೀಪಕ್, ಸಂಚಾರ ಪಿಎಸ್ಐ ಮಹೆಬೂಬ್ ಅಲಿ, ಬಾಲಕಿಯರ ಕಾಲೇಜು ಪ್ರಾಶುಂಪಾಲ ಚನ್ನಬಸಪ್ಪ ಕುಳಗೇರಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>