<p>ಪ್ರಜಾವಾಣಿ ವಾರ್ತೆ</p>.<p><strong>ಶಹಾಪುರ:</strong> ತಾಲ್ಲೂಕಿನ ಗೋಗಿ ಗ್ರಾಮದ ಕೆನರಾ ಬ್ಯಾಂಕ್ ಶಾಖೆಯ ಕಚೇರಿಯ ಮೇಲೆ ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ದಿನವಾದ ಗುರುವಾರವೇ ಧ್ವಜಾರೋಹಣ ಮಾಡಲಾಗಿದೆ.</p>.<p>ಸಂಜೆ 6ರ ಸುಮಾರಿಗೆ ಬ್ಯಾಂಕ್ ಮೇಲೆ ತ್ರಿವರ್ಣ ಧ್ವಜ ಹಾರಾಡುವುದನ್ನು ನೋಡಿದ ಗ್ರಾಮಸ್ಥರು ಅಚ್ಚರಿ ಮತ್ತು ಬೇಸರ ವ್ಯಕ್ತಪಡಿಸಿದ್ದಾರೆ. ‘ಬ್ಯಾಂಕ್ ಅಧಿಕಾರಿಗಳಿಗೆ ರಾಷ್ಟ್ರಧ್ವಜ, ಸ್ವಾತಂತ್ರ್ಯ ದಿನಾಚರಣೆಯ ಬೆಲೆ ಗೊತ್ತಿಲ್ಲವೆ’ ಎಂದು ಕಿಡಿಕಾರಿದರು. ತಕ್ಷಣವೇ ಸ್ಥಳೀಯ ಅಧಿಕಾರಿಗಳ ಗಮನಕ್ಕೆ ತಂದರು. </p>.<p>‘ಬ್ಯಾಂಕಿನ ವ್ಯವಸ್ಥಾಪಕರಾಗಿ ಮಹಿಬೂಬು ಬಾಷಾ ಅವರು ಹೊಸದಾಗಿ ಬಂದಿದ್ದಾರೆ. ಆಗಸ್ಟ್ 15ರಂದು ತಮ್ಮ ಕೆಲಸದ ನಿಮಿತ್ತ ಬ್ಯಾಂಕ್ಗೆ ಬರಲು ಆಗುವುದಿಲ್ಲವೆಂದು ಗುರುವಾರ ಸಂಜೆಯೇ ಧ್ವಜಾರೋಹಣ ಮಾಡಿಸಿದ್ದಾರೆ. ಧ್ವಜಾರೋಹಣದ ಫೋಟೊವನ್ನು ತೆಗೆದುಕೊಂಡು ರಾಯಚೂರಿಗೆ ತೆರಳಿದರು’ ಎಂದು ಬ್ಯಾಂಕ್ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ರಾಷ್ಟ್ರಧ್ವಜಾರೋಹಣ ಬಹು ಸೂಕ್ಷ್ಮವಾದ ವಿಚಾರ. ಇವತ್ತು ಧ್ವಜಾರೋಹಣ ಮಾಡುವುದು ಬೇಡ ಎಂದು ಮನವಿ ಮಾಡಿದರೂ ಅವರು ಕಿವಿಗೊಡಲಿಲ್ಲ. ಈ ರೀತಿ ಆಗಬಾರದಿತ್ತು ಆಗಿದೆ. ನಾಳೆ ಏನಾಗುತ್ತದೆ ಎಂದು ನಮಗೂ ಭಯ ಆಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.</p>.<p>ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಹಿಬೂಬು ಬಾಷಾ, ‘ನನಗೆ ಧ್ವಜದ ಬಗ್ಗೆ ಗೊತ್ತಾಗಿಲ್ಲ. ನಮ್ಮ ಬ್ಯಾಂಕಿನಲ್ಲಿ ಸಿಬ್ಬಂದಿ ಧ್ವಜಾರೋಹಣ ಮಾಡುವರು ಯಾರು ಇಲ್ಲದ ಕಾರಣ ಗುರುವಾರ ಸಂಜೆ 6ರ ಹಾರಿಸಿ, ಮತ್ತೆ 7ಕ್ಕೆ ಇಳಿಸಲಾಗಿದೆ. ನನ್ನಿಂದ ತಪ್ಪಾಗಿದೆ’ ಎಂದು ಅಲವತ್ತುಕೊಂಡರು.</p>.<p>ತಹಶೀಲ್ದಾರ್ ಸಿದ್ದಾರೂಢ ಬನ್ನಿಕೊಪ್ಪ ಅವರನ್ನು ಸಂಪರ್ಕಿಸಿದಾಗ, ‘ನನಗೂ ದೂರವಾಣಿ ಮೂಲಕ ಮಾಹಿತಿ ಬಂದಿದೆ. ಒಂದಿಷ್ಟೂ ಜವಾಬ್ದಾರಿ ಇಲ್ಲದ ಅಧಿಕಾರಿಯಿಂದ ಹೀಗಾಗಿದೆ. ಈ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತೇವೆ’ ಎಂದು ಬೇಸರದಿಂದ ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪ್ರಜಾವಾಣಿ ವಾರ್ತೆ</p>.<p><strong>ಶಹಾಪುರ:</strong> ತಾಲ್ಲೂಕಿನ ಗೋಗಿ ಗ್ರಾಮದ ಕೆನರಾ ಬ್ಯಾಂಕ್ ಶಾಖೆಯ ಕಚೇರಿಯ ಮೇಲೆ ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ದಿನವಾದ ಗುರುವಾರವೇ ಧ್ವಜಾರೋಹಣ ಮಾಡಲಾಗಿದೆ.</p>.<p>ಸಂಜೆ 6ರ ಸುಮಾರಿಗೆ ಬ್ಯಾಂಕ್ ಮೇಲೆ ತ್ರಿವರ್ಣ ಧ್ವಜ ಹಾರಾಡುವುದನ್ನು ನೋಡಿದ ಗ್ರಾಮಸ್ಥರು ಅಚ್ಚರಿ ಮತ್ತು ಬೇಸರ ವ್ಯಕ್ತಪಡಿಸಿದ್ದಾರೆ. ‘ಬ್ಯಾಂಕ್ ಅಧಿಕಾರಿಗಳಿಗೆ ರಾಷ್ಟ್ರಧ್ವಜ, ಸ್ವಾತಂತ್ರ್ಯ ದಿನಾಚರಣೆಯ ಬೆಲೆ ಗೊತ್ತಿಲ್ಲವೆ’ ಎಂದು ಕಿಡಿಕಾರಿದರು. ತಕ್ಷಣವೇ ಸ್ಥಳೀಯ ಅಧಿಕಾರಿಗಳ ಗಮನಕ್ಕೆ ತಂದರು. </p>.<p>‘ಬ್ಯಾಂಕಿನ ವ್ಯವಸ್ಥಾಪಕರಾಗಿ ಮಹಿಬೂಬು ಬಾಷಾ ಅವರು ಹೊಸದಾಗಿ ಬಂದಿದ್ದಾರೆ. ಆಗಸ್ಟ್ 15ರಂದು ತಮ್ಮ ಕೆಲಸದ ನಿಮಿತ್ತ ಬ್ಯಾಂಕ್ಗೆ ಬರಲು ಆಗುವುದಿಲ್ಲವೆಂದು ಗುರುವಾರ ಸಂಜೆಯೇ ಧ್ವಜಾರೋಹಣ ಮಾಡಿಸಿದ್ದಾರೆ. ಧ್ವಜಾರೋಹಣದ ಫೋಟೊವನ್ನು ತೆಗೆದುಕೊಂಡು ರಾಯಚೂರಿಗೆ ತೆರಳಿದರು’ ಎಂದು ಬ್ಯಾಂಕ್ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ರಾಷ್ಟ್ರಧ್ವಜಾರೋಹಣ ಬಹು ಸೂಕ್ಷ್ಮವಾದ ವಿಚಾರ. ಇವತ್ತು ಧ್ವಜಾರೋಹಣ ಮಾಡುವುದು ಬೇಡ ಎಂದು ಮನವಿ ಮಾಡಿದರೂ ಅವರು ಕಿವಿಗೊಡಲಿಲ್ಲ. ಈ ರೀತಿ ಆಗಬಾರದಿತ್ತು ಆಗಿದೆ. ನಾಳೆ ಏನಾಗುತ್ತದೆ ಎಂದು ನಮಗೂ ಭಯ ಆಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.</p>.<p>ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಹಿಬೂಬು ಬಾಷಾ, ‘ನನಗೆ ಧ್ವಜದ ಬಗ್ಗೆ ಗೊತ್ತಾಗಿಲ್ಲ. ನಮ್ಮ ಬ್ಯಾಂಕಿನಲ್ಲಿ ಸಿಬ್ಬಂದಿ ಧ್ವಜಾರೋಹಣ ಮಾಡುವರು ಯಾರು ಇಲ್ಲದ ಕಾರಣ ಗುರುವಾರ ಸಂಜೆ 6ರ ಹಾರಿಸಿ, ಮತ್ತೆ 7ಕ್ಕೆ ಇಳಿಸಲಾಗಿದೆ. ನನ್ನಿಂದ ತಪ್ಪಾಗಿದೆ’ ಎಂದು ಅಲವತ್ತುಕೊಂಡರು.</p>.<p>ತಹಶೀಲ್ದಾರ್ ಸಿದ್ದಾರೂಢ ಬನ್ನಿಕೊಪ್ಪ ಅವರನ್ನು ಸಂಪರ್ಕಿಸಿದಾಗ, ‘ನನಗೂ ದೂರವಾಣಿ ಮೂಲಕ ಮಾಹಿತಿ ಬಂದಿದೆ. ಒಂದಿಷ್ಟೂ ಜವಾಬ್ದಾರಿ ಇಲ್ಲದ ಅಧಿಕಾರಿಯಿಂದ ಹೀಗಾಗಿದೆ. ಈ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತೇವೆ’ ಎಂದು ಬೇಸರದಿಂದ ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>