ತಾಲ್ಲೂಕಿನ ಮೈಲಾಪುರದ ಮಲ್ಲಯ್ಯ ದೇವಸ್ಥಾನ, ಗುರುಮಠಕಲ್ ಗಡಿಭಾಗದ ಇಡ್ಲೂರು ಶಂಕರಲಿಂಗೇಶ್ವರ, ಕಾಳೆಬೆಳಗುಂದಿ ಬನದೇಶ್ವರ, ಗವಿಸಿದ್ಧಲಿಂಗೇಶ್ವರ ದೇವಸ್ಥಾನ ಮತ್ತು ಕೊಡೇಕಲ್ಲ ಬಸವಣ್ಣ, ಲಕ್ಷ್ಮಿಪುರದ ಮಲ್ಲಿಕಾರ್ಜುನ ಗುಡ್ಡ, ತಿಂಥಣಿ ಮೌನೇಶ್ವರ ದೇವಸ್ಥಾನ ಮುಂತಾದ ದೇವಾಲಯಗಳಲ್ಲಿ ಅಸಂಖ್ಯಾತ ಭಕ್ತರು ಜಮಾವಣೆಗೊಂಡು ದೇವರ ಪೂಜಾ ಕೈಂಕರ್ಯದಲ್ಲಿ ಭಾಗಿಯಾಗಿದ್ದು ಕಂಡುಬಂದಿತು. ಬೆಳ್ಳಂ ಬೆಳಿಗ್ಗೆ ವಿಜಯಪುರ–ಯಾದಗಿರಿ ರಾಜ್ಯ ಹೆದ್ದಾರಿಯ ಮೂಲಕ ಭಕ್ತರು ಪಾದಯಾತ್ರೆಯ ಮೂಲಕ ಮೈಲಾಪುರದ ಮಲ್ಲಯ್ಯನ ಕ್ಷೇತ್ರಕ್ಕೆ ತೆರಳುತ್ತಿರುವುದು ಕಂಡುಬಂದಿತು.