ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಸಣ್ಣ ಕೆರೆ ಭರ್ತಿ; ಮನೆಗಳಿಗೆ ನುಗ್ಗಿದ ನೀರು

ಕಾಳಜಿ ಕೇಂದ್ರ ಸ್ಥಾಪನೆ, ಜನಪ್ರತಿನಿಧಿಗಳು, ಅಧಿಕಾರಿಗಳ ಭೇಟಿ
Last Updated 5 ಸೆಪ್ಟೆಂಬರ್ 2021, 7:20 IST
ಅಕ್ಷರ ಗಾತ್ರ

ನಾಯ್ಕಲ್ (ಯಾದಗಿರಿ): ಜಿಲ್ಲೆಯ ವಡಗೇರಾ ತಾಲ್ಲೂಕಿನ ನಾಯ್ಕಲ್‌ ಗ್ರಾಮದ ಸಣ್ಣ ಕೆರೆ ಭರ್ತಿಯಾಗಿ ದಲಿತ ಕೇರಿಗೆ ನೀರು ನುಗ್ಗಿದು, ಇದರಿಂದ ಸುಮಾರು 250ಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ.

ಗ್ರಾಮದಲ್ಲಿ ಶುಕ್ರವಾರ ರಾತ್ರಿ ಹಾಗೂ ಶನಿವಾರ ನಸುಕಿನ ಜಾವ ಸುರಿದ ಧಾರಾಕಾರ ಮಳೆಗೆ ಅಂಬೇಡ್ಕರ್ ನಗರದ ಸಮೀಪ ಇರುವ ಸಣ್ಣ ಕೆರೆ ಭರ್ತಿಯಾಗಿ ದಲಿತರ ಸುಮಾರು 60ಕ್ಕೂ ಮನೆಗಳಿಗೆ ನೀರು ನುಗ್ಗಿವೆ. ಆಶ್ರಯ ಕಾಲೊನಿಯ 5 ಮನೆಗಳು, ಮೆಥೋಡಿಸ್ಟ್ ಚರ್ಚ್‌ ಬಳಿಯ ಸುತ್ತಮುತ್ತಲಿನ 15 ಮನೆಗಳು, ನವಗ್ರಾಮದ 6 ಮನೆಗಳು, ವಡ್ಡರ ಓಣಿಯ 10 ಮನೆಗಳು ಹೀಗೆ ಗ್ರಾಮದ ಸುಮಾರು 100ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ.

ಮನೆಯಲ್ಲಿದ್ದ ದವಸ– ಧಾನ್ಯ, ಬಟ್ಟೆ ನೀರು ಪಾಲಾಗಿವೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಛಾಯಾ ಮಲ್ಲಿಕಾರ್ಜುನ ಅನಸುಗೂರ, ಕಂದಾಯ ನಿರೀಕ್ಷಕ ಸಿದ್ದನಗೌಡ, ಗ್ರಾಮ ಲೆಕ್ಕಿಗ ಸಿದ್ದಿಲಿಂಗಪ್ಪ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ನಿರಾಶ್ರಿತರಿಗೆ ಅಂಬೇಡ್ಕರ್ ನಗರದ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆದು ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT