ಗ್ರಾಮದಲ್ಲಿ ಶುಕ್ರವಾರ ರಾತ್ರಿ ಹಾಗೂ ಶನಿವಾರ ನಸುಕಿನ ಜಾವ ಸುರಿದ ಧಾರಾಕಾರ ಮಳೆಗೆ ಅಂಬೇಡ್ಕರ್ ನಗರದ ಸಮೀಪ ಇರುವ ಸಣ್ಣ ಕೆರೆ ಭರ್ತಿಯಾಗಿ ದಲಿತರ ಸುಮಾರು 60ಕ್ಕೂ ಮನೆಗಳಿಗೆ ನೀರು ನುಗ್ಗಿವೆ. ಆಶ್ರಯ ಕಾಲೊನಿಯ 5 ಮನೆಗಳು, ಮೆಥೋಡಿಸ್ಟ್ ಚರ್ಚ್ ಬಳಿಯ ಸುತ್ತಮುತ್ತಲಿನ 15 ಮನೆಗಳು, ನವಗ್ರಾಮದ 6 ಮನೆಗಳು, ವಡ್ಡರ ಓಣಿಯ 10 ಮನೆಗಳು ಹೀಗೆ ಗ್ರಾಮದ ಸುಮಾರು 100ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ.