<p><strong>ಹುಣಸಗಿ: </strong>ಎಲ್ಲ ಸಮುದಾಯದವರನ್ನು ತನ್ನವರು ಎಂಬ ಸಾಮಾಜಿಕ ಕಳಕಳಿ ಹೊಂದಿದ್ದ ದಿ.ಸಂಗನಗೌಡ ಪಾಟೀಲ ಅವರು ನೇರ, ನಿಷ್ಠುರ ನುಡಿಯ ಮೃದು ಮನಸ್ಸಿನ ಸಹೃದಯಿ ಆಗಿದ್ದರು ಎಂದು ಸುರಪುರ ಶಾಸಕ ರಾಜೂಗೌಡ ಅಭಿಪ್ರಾಯಪಟ್ಟರು.</p>.<p>ತಾಲ್ಲೂಕಿನ ವಜ್ಜಲ ಗ್ರಾಮದಲ್ಲಿ ರೈತ ಮುಖಂಡ ದಿ.ಸಂಗನಗೌಡ ಪಾಟೀಲ ವಜ್ಜಲ್ ಅವರ ಮೂರ್ತಿ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಶಹಾಪುರ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಮಾತನಾಡಿ, ಸಂಗನಗೌಡ ಪಾಟೀಲರದ್ದು ಜನಸಾಮಾನ್ಯರ ಜತೆ ಬೆರೆಯುವ ಸರಳ ವ್ಯಕ್ತಿತ್ವ. ರೈತಪರ ನಿಲುವುಳ್ಳ ಉತ್ತಮ ಹೋರಾಟಗಾರ. ರೈತರಿಗೆ ಯಾವುದೇ ಸಮಸ್ಯೆಗಳು ಎದುರಾದಲ್ಲಿ ತಮ್ಮದೇ ಶೈಲಿಯಲ್ಲಿ ಹೋರಾಟ ನಡೆಸುತ್ತಿದ್ದರು ಎಂದು ಸ್ಮರಿಸಿದರು.</p>.<p>ಸಾನಿಧ್ಯ ವಹಿಸಿದ್ದ ದೇವಪುರ ಸಂಸ್ಥಾನ ಹಿರೇಮಠದ ಶಿವಮೂರ್ತಿ ಶಿವಾಚಾರ್ಯ ಹಾಗೂ ಕುಂಟೋಜಿಯ ಚನ್ನವೀರ ದೇವರು ಮಾತನಾಡಿ, ಕುಟುಂಬಕ್ಕಾಗಿ ಬದುಕುವದು ಸಹಜ. ಆದರೆ, ಸಮಾಜ ಹಾಗೂ ತುಳಿತಕ್ಕೆ ಒಳಗಾದವರ ಹಿತಕ್ಕಾಗಿ ಬದುಕುವ ಮೂಲಕ ಸಂಗನಗೌಡ ಅವರು ಸಾರ್ಥಕ ಜೀವನ ನಡೆಸಿದ್ದರು ಎಂದು ಹೇಳಿದರು.</p>.<p>ಕೊಡೇಕಲ್ಲ ದುರದುಂಡೇಶ್ವರ ಮಠದ ಶಿವಕುಮಾರ ದೇವರು, ಮುದ ನೂರಿನ ಕಂಠಿಮಠದ ಚನ್ನ ಮಲ್ಲಿಕಾರ್ಜುನ ಪಂಡಿತಾರಾಧ್ಯ ಸ್ವಾಮೀಜಿ, ರುಕ್ಮಾಪುರದ ಗುರುರಶಾಂತ ಮೂರ್ತಿ ಶಿವಾಚಾರ್ಯರು, ಕೂಡಲಗಿಯ ಗಜಾನನ ಮಹಾರಾಜರು, ಶರಣ ಸಣ್ಣಕೆಪ್ಪ ಮುತ್ಯಾ ಬಂಡೆಪ್ಪನಹಳ್ಳಿ, ಇಂಗಳಗೇರಿಯ ಅಡವೆಯ್ಯ ಸ್ವಾಮೀಜಿ ಇದ್ದರು.</p>.<p>ಜಿ.ಪಂ ಮಾಜಿ ಅಧ್ಯಕ್ಷ ರಾಜ ಶೇಖರಗೌಡ ಪಾಟೀಲ ವಜ್ಜಲ್ ಅಧ್ಯ ಕ್ಷತೆ ವಹಿಸಿದ್ದರು. ಉದ್ಯಮಿ ಎಸ್.ಪಿ. ದಯಾನಂದ ರಾಜಾ ಹನು ಮಪ್ಪ ನಾಯಕ ತಾತಾ, ಜಿ.ಪಂ ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ ಯಡಿ ಯಾಪುರ,ಜಿ.ಪಂ ಮಾಜಿ ವಿಪಕ್ಷ ನಾಯಕ ಎಚ್.ಸಿ ಪಾಟೀಲ್, ಸುರೇಶ ಸಜ್ಜನ್, ವಕೀಲ ಬಸವಲಿಂಗಪ್ಪ ಪಾಟೀಲ, ಬಾಬುಗೌಡ ಪಾಟೀಲ, ಬಸನ ಗೌಡ ಮಾಡಗಿ ಇದ್ದರು. ಸಂಜು ಗೌಡ ಪಾಟೀಲ ಸ್ವಾಗತಿಸಿ ದರು. ಅಮರಯ್ಯಸ್ವಾಮಿ ಜಾಲಿಬೆಂಚಿ ನಿರೂ ಪಿಸಿದರು, ಸಂಗನ ಗೌಡ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸಗಿ: </strong>ಎಲ್ಲ ಸಮುದಾಯದವರನ್ನು ತನ್ನವರು ಎಂಬ ಸಾಮಾಜಿಕ ಕಳಕಳಿ ಹೊಂದಿದ್ದ ದಿ.ಸಂಗನಗೌಡ ಪಾಟೀಲ ಅವರು ನೇರ, ನಿಷ್ಠುರ ನುಡಿಯ ಮೃದು ಮನಸ್ಸಿನ ಸಹೃದಯಿ ಆಗಿದ್ದರು ಎಂದು ಸುರಪುರ ಶಾಸಕ ರಾಜೂಗೌಡ ಅಭಿಪ್ರಾಯಪಟ್ಟರು.</p>.<p>ತಾಲ್ಲೂಕಿನ ವಜ್ಜಲ ಗ್ರಾಮದಲ್ಲಿ ರೈತ ಮುಖಂಡ ದಿ.ಸಂಗನಗೌಡ ಪಾಟೀಲ ವಜ್ಜಲ್ ಅವರ ಮೂರ್ತಿ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಶಹಾಪುರ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಮಾತನಾಡಿ, ಸಂಗನಗೌಡ ಪಾಟೀಲರದ್ದು ಜನಸಾಮಾನ್ಯರ ಜತೆ ಬೆರೆಯುವ ಸರಳ ವ್ಯಕ್ತಿತ್ವ. ರೈತಪರ ನಿಲುವುಳ್ಳ ಉತ್ತಮ ಹೋರಾಟಗಾರ. ರೈತರಿಗೆ ಯಾವುದೇ ಸಮಸ್ಯೆಗಳು ಎದುರಾದಲ್ಲಿ ತಮ್ಮದೇ ಶೈಲಿಯಲ್ಲಿ ಹೋರಾಟ ನಡೆಸುತ್ತಿದ್ದರು ಎಂದು ಸ್ಮರಿಸಿದರು.</p>.<p>ಸಾನಿಧ್ಯ ವಹಿಸಿದ್ದ ದೇವಪುರ ಸಂಸ್ಥಾನ ಹಿರೇಮಠದ ಶಿವಮೂರ್ತಿ ಶಿವಾಚಾರ್ಯ ಹಾಗೂ ಕುಂಟೋಜಿಯ ಚನ್ನವೀರ ದೇವರು ಮಾತನಾಡಿ, ಕುಟುಂಬಕ್ಕಾಗಿ ಬದುಕುವದು ಸಹಜ. ಆದರೆ, ಸಮಾಜ ಹಾಗೂ ತುಳಿತಕ್ಕೆ ಒಳಗಾದವರ ಹಿತಕ್ಕಾಗಿ ಬದುಕುವ ಮೂಲಕ ಸಂಗನಗೌಡ ಅವರು ಸಾರ್ಥಕ ಜೀವನ ನಡೆಸಿದ್ದರು ಎಂದು ಹೇಳಿದರು.</p>.<p>ಕೊಡೇಕಲ್ಲ ದುರದುಂಡೇಶ್ವರ ಮಠದ ಶಿವಕುಮಾರ ದೇವರು, ಮುದ ನೂರಿನ ಕಂಠಿಮಠದ ಚನ್ನ ಮಲ್ಲಿಕಾರ್ಜುನ ಪಂಡಿತಾರಾಧ್ಯ ಸ್ವಾಮೀಜಿ, ರುಕ್ಮಾಪುರದ ಗುರುರಶಾಂತ ಮೂರ್ತಿ ಶಿವಾಚಾರ್ಯರು, ಕೂಡಲಗಿಯ ಗಜಾನನ ಮಹಾರಾಜರು, ಶರಣ ಸಣ್ಣಕೆಪ್ಪ ಮುತ್ಯಾ ಬಂಡೆಪ್ಪನಹಳ್ಳಿ, ಇಂಗಳಗೇರಿಯ ಅಡವೆಯ್ಯ ಸ್ವಾಮೀಜಿ ಇದ್ದರು.</p>.<p>ಜಿ.ಪಂ ಮಾಜಿ ಅಧ್ಯಕ್ಷ ರಾಜ ಶೇಖರಗೌಡ ಪಾಟೀಲ ವಜ್ಜಲ್ ಅಧ್ಯ ಕ್ಷತೆ ವಹಿಸಿದ್ದರು. ಉದ್ಯಮಿ ಎಸ್.ಪಿ. ದಯಾನಂದ ರಾಜಾ ಹನು ಮಪ್ಪ ನಾಯಕ ತಾತಾ, ಜಿ.ಪಂ ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ ಯಡಿ ಯಾಪುರ,ಜಿ.ಪಂ ಮಾಜಿ ವಿಪಕ್ಷ ನಾಯಕ ಎಚ್.ಸಿ ಪಾಟೀಲ್, ಸುರೇಶ ಸಜ್ಜನ್, ವಕೀಲ ಬಸವಲಿಂಗಪ್ಪ ಪಾಟೀಲ, ಬಾಬುಗೌಡ ಪಾಟೀಲ, ಬಸನ ಗೌಡ ಮಾಡಗಿ ಇದ್ದರು. ಸಂಜು ಗೌಡ ಪಾಟೀಲ ಸ್ವಾಗತಿಸಿ ದರು. ಅಮರಯ್ಯಸ್ವಾಮಿ ಜಾಲಿಬೆಂಚಿ ನಿರೂ ಪಿಸಿದರು, ಸಂಗನ ಗೌಡ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>