<p><strong>ಸುರಪುರ:</strong> ನಗರದಿಂದ 7 ಕಿ.ಮೀ ಅಂತರದಲ್ಲಿರುವ ದೇವಿಕೇರಿ ಗ್ರಾಮದಲ್ಲಿ ಐದು ವೀರಗಲ್ಲುಗಳನ್ನು ಸಂಶೋಧಕ ರಾಜಗೋಪಾಲ ವಿಭೂತಿ ಪತ್ತೆ ಹಚ್ಚಿದ್ದಾರೆ.</p><p>ದೇವಿಕೇರಿ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ನೆಲಮನೆ ತಿಮ್ಮಪ್ಪ ಮತ್ತು ಕಾಳಿಕಾದೇವಿ ದೇಗುಲಗಳಿವೆ. ಅಂತೆಯೆ ಈ ಗ್ರಾಮಕ್ಕೆ ದೇವಿಕೇರಿ ಎಂಬ ಹೆಸರು ಬಂದಿದೆ. ಸುರಪುರದ ಗೋಸಲ ಅರಸರ ಆರಾಧ್ಯ ದೈವ ತಿರುಪತಿ ತಿಮ್ಮಪ್ಪ. ದೇವಿಕೇರಿ ಗ್ರಾಮದಲ್ಲಿ ತಿಮ್ಮಪ್ಪನ ದೇಗುಲ ನಿರ್ಮಿಸಿ ನಿರ್ವಹಣೆಗೆ ರಾಜರು ಉಂಬಳಿ ನೀಡಿದರು. ಅದೇ ರೀತಿ ಕಾಳಿಕಾದೇವಿ ದೇವಸ್ಥಾನವೂ ನಿರ್ಮಾಣವಾಗಿದೆ ಎಂಬ ಉಲ್ಲೇಖಗಳಿವೆ.</p><p>ದೇವಿಕೇರಿ ಗ್ರಾಮ ಸುರಪುರ ಸಂಸ್ಥಾನದ ಪ್ರಮುಖ ಗ್ರಾಮವೆಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. </p><p>ಸುರಪುರ ಸಂಸ್ಥಾನಕ್ಕೆ ಸಂಬಂಧಿಸಿದಂತೆ ಇದುವರೆಗೆ 4 ಪ್ರಮುಖ ಶಾಸನಗಳನ್ನು ಸಂಶೋಧಕಿ ಹನುಮಾಕ್ಷಿ ಗೋಗಿ ಈ ಹಿಂದೆಯೇ ಪತ್ತಿಹಚ್ಚಿದ್ದರು. ಅವುಗಳಲ್ಲಿ 2 ದೇವಿಕೇರಿ ಗ್ರಾಮದಲ್ಲಿದ್ದು, ಇನ್ನು 2 ಶಾಸನಗಳು ಖಾಸಗಿ ವ್ಯಕ್ತಿಗಳ ಹೊಲದಲ್ಲಿವೆ. ಅವು ಅವಸಾನದ ಅಂಚಿನಲ್ಲಿವೆ.</p><p>ಪತ್ತೆಯಾಗಿರುವ ಐದು ವೀರಗಲ್ಲುಗಳೂ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಖಾಸಗಿ ವ್ಯಕ್ತಿಗೆ ಸೇರಿದ ಹೊಲದಲ್ಲಿ ಒಕ್ಕೈ ಮಾಸ್ತಿಗಲ್ಲಿದೆ. ಇದು ಮಹಿಳೆ ತನ್ನ ಗಂಡನ ವೀರಮರಣದ ನಂತರ ಆತನ ನೆನಪಿಗಾಗಿ ಸತಿ ಹೋಗಿರುವ ಸ್ಮರಣಾರ್ಥವಾಗಿ ಕೆತ್ತಿರುವ ಕಲ್ಲು ಎಂಬುದು ರಾಜಗೋಪಾಲ ಅವರ ಅಂದಾಜು.</p><p>17ನೇ ಶತಮಾನದ ಈ ಮಹಾಸತಿ ಕಲ್ಲು ಕೆಂಪುಕಣ ಶಿಲೆಯಲ್ಲಿದೆ. ಮೂರು ಅಡಿ ಅಗಲ ಐದು ಅಡಿ ಉದ್ದದ ಈ ಕಲ್ಲಿನಲ್ಲಿ ಮೊದಲ ಹಂತದಲ್ಲಿ ಕುದುರೆಯ ಮೇಲೆ ಇಬ್ಬರು ಕುಳಿತಿದ್ದು, ಎರಡನೆಯ ಹಂತದಲ್ಲಿ<br>ಬಲಗೈ ಬಾಚಿಗೊಂಡಿದ್ದು ಕೈಗೆ ಬಳೆಗಳು ಇವೆ ಎಂದು ರಾಜಗೋಪಾಲ ತಿಳಿಸುತ್ತಾರೆ.</p><p>ಹಾಲಿಡ ಭಂಗಿಯಲ್ಲಿ ವೀರನೊಬ್ಬ ಧನಸ್ಸನ್ನು ಹಿಡಿದು ನಿಂತಿರುವ ಕಪ್ಪು ಗ್ರಾನೈಟ್ ಶಿಲೆಯ ವೀರಗಲ್ಲಿನಲ್ಲಿ ಆ ಸೈನಿಕ ಯಾವುದೋ ಘನ ಕಾರ್ಯಕ್ಕೆ ಪ್ರಾಣವನ್ನು ತ್ಯಾಗ ಮಾಡಿದ್ದು, ಆತನ ಸ್ಮರಣಾರ್ಥವಾಗಿ ನಿಲ್ಲಿಸಿರಬಹುದು ಎಂದು ಅಂದಾಜಿಸಿದ್ದಾರೆ.</p><p>ಊರಿನ ಹನುಮಂತ ದೇವರಗುಡಿ ಮುಂದೆ 10 ರಿಂದ 12 ಮೂರ್ತಿಗಳನ್ನು ನಿಲ್ಲಿಸಲಾಗಿದೆ. ಅವುಗಳಲ್ಲಿ ಮೂರು ಮೂರ್ತಿಗಳು ಪ್ರಮುಖವಾಗಿವೆ. ಒಂದು ಶಿಲೆಯಲ್ಲಿ ವೀರನು ಧನುಸ್ಸನ್ನು ಹಿಡಿದು ಎದುರಿಗಿರುವ ವೈರಿಯ ಮೇಲೆ ದಾಳಿ ಮಾಡುವ ಭಂಗಿಯಲ್ಲಿದೆ ಎಂದು ತಿಳಿಸಿದ್ದಾರೆ.</p><p>ಎರಡನೆಯ ಕಲ್ಲಿನಲ್ಲಿ ವೀರಮರಣ ಅಪ್ಪಿದ ಯೋಧ ಸುರಂಗನೆಯ ಜೊತೆಗೆ ಸ್ವರ್ಗಕ್ಕೆ ಹೋಗುತ್ತಿರುವ ಭಂಗಿಯಲ್ಲಿದೆ. ಇನ್ನೊಂದು ಕಲ್ಲಿನಲ್ಲಿ ವೀರನು ಶಿವಲಿಂಗದ ಮುಂದೆ ವಜ್ರಾಸನದಲ್ಲಿ ಕುಳಿತು ಧ್ಯಾನ ಮಾಡುತ್ತಿರುವಂತೆ ಕೆತ್ತಲಾಗಿದೆ.ಶಿವಲಿಂಗದ ಹಿಂದೆ ವಿಷ್ಣುವಿನ ಮೂರ್ತಿ ಇದೆ. ಇದು ಸಾಮರಸ್ಯದ ಪ್ರತೀಕವಾಗಿದೆ ಎಂದು ರಾಜಗೋಪಾಲ ವಿವರಿಸಿದ್ದಾರೆ.</p><p>ಕೆಲವು ವೀರಗಲ್ಲುಗಳಿಗೆ ಗ್ರಾಮಸ್ಥರು ಪೂಜೆ ಸಲ್ಲಿಸುತ್ತಿದ್ದಾರೆ. ಎಣ್ಣೆ ಹಾಕಿ, ಕುಂಕುಮ ಹಚ್ಚುತ್ತಾರೆ. ಹೀಗಾಗಿ ಅವೂ ಅಳಿವಿನ ಅಂಚಿನಲ್ಲಿವೆ. ಶಾಸನಗಳು, ವೀರಗಲ್ಲು, ಮಾಸ್ತಿಗಲ್ಲುಗಳು ಇತಿಹಾಸದ ಕುರುಹಾಗಿವೆ. ಅವುಗಳನ್ನು ರಕ್ಷಿಸದಿದ್ದರೆ ನಾವೆಲ್ಲ ನಮ್ಮ ಭವ್ಯ ಇತಿಹಾಸದಿಂದ ವಂಚಿತರಾದಂತೆ ಎಂದು ರಾಜಗೋಪಾಲ ಅವರು ಕಳವಳ ವ್ಯಕ್ತಪಡಿಸಿದ್ದಾರೆ.</p>.<div><blockquote>ಸುರಪುರ ಇತಿಹಾಸಕ್ಕೆ ಸಂಬಂಧಿಸಿದಂತೆ ಎರಡು ಅಪರೂಪದ ಶಾಸನಗಳು ದೇವಿಕೇರಿಯಲ್ಲಿವೆ. ಸಂಶೋಧಿಸಿದಷ್ಟು ಮಾಹಿತಿ ಸಿಗುವ ವಿಪುಲ ಅವಕಾಶಗಳು ಇವೆ.</blockquote><span class="attribution">ಹನುಮಾಕ್ಷಿ ಗೋಗಿ, ಶಾಸನ ತಜ್ಞೆ</span></div>.<div><blockquote>ಅಪರೂಪದ ಶಾಸನ, ವೀರಗಲ್ಲುಗಳನ್ನು ಪುರಾತತ್ವ ಇಲಾಖೆ ಸಂರಕ್ಷಿಸಬೇಕು. ಅಲ್ಲಿಯವರೆಗೆ ಸಂಬಂಧಿಸಿದ ಗ್ರಾಮ ಪಂಚಾಯಿತಿ ಇವುಗಳನ್ನು ಪಂಚಾಯಿತಿ ಕಚೇರಿಯಲ್ಲಿ ರಕ್ಷಿಸಿ ಇಡಬೇಕು</blockquote><span class="attribution">ರಾಜಗೋಪಾಲ ವಿಭೂತಿ, ಸಂಶೋಧಕ ಮತ್ತು ಉಪನ್ಯಾಸಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುರಪುರ:</strong> ನಗರದಿಂದ 7 ಕಿ.ಮೀ ಅಂತರದಲ್ಲಿರುವ ದೇವಿಕೇರಿ ಗ್ರಾಮದಲ್ಲಿ ಐದು ವೀರಗಲ್ಲುಗಳನ್ನು ಸಂಶೋಧಕ ರಾಜಗೋಪಾಲ ವಿಭೂತಿ ಪತ್ತೆ ಹಚ್ಚಿದ್ದಾರೆ.</p><p>ದೇವಿಕೇರಿ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ನೆಲಮನೆ ತಿಮ್ಮಪ್ಪ ಮತ್ತು ಕಾಳಿಕಾದೇವಿ ದೇಗುಲಗಳಿವೆ. ಅಂತೆಯೆ ಈ ಗ್ರಾಮಕ್ಕೆ ದೇವಿಕೇರಿ ಎಂಬ ಹೆಸರು ಬಂದಿದೆ. ಸುರಪುರದ ಗೋಸಲ ಅರಸರ ಆರಾಧ್ಯ ದೈವ ತಿರುಪತಿ ತಿಮ್ಮಪ್ಪ. ದೇವಿಕೇರಿ ಗ್ರಾಮದಲ್ಲಿ ತಿಮ್ಮಪ್ಪನ ದೇಗುಲ ನಿರ್ಮಿಸಿ ನಿರ್ವಹಣೆಗೆ ರಾಜರು ಉಂಬಳಿ ನೀಡಿದರು. ಅದೇ ರೀತಿ ಕಾಳಿಕಾದೇವಿ ದೇವಸ್ಥಾನವೂ ನಿರ್ಮಾಣವಾಗಿದೆ ಎಂಬ ಉಲ್ಲೇಖಗಳಿವೆ.</p><p>ದೇವಿಕೇರಿ ಗ್ರಾಮ ಸುರಪುರ ಸಂಸ್ಥಾನದ ಪ್ರಮುಖ ಗ್ರಾಮವೆಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. </p><p>ಸುರಪುರ ಸಂಸ್ಥಾನಕ್ಕೆ ಸಂಬಂಧಿಸಿದಂತೆ ಇದುವರೆಗೆ 4 ಪ್ರಮುಖ ಶಾಸನಗಳನ್ನು ಸಂಶೋಧಕಿ ಹನುಮಾಕ್ಷಿ ಗೋಗಿ ಈ ಹಿಂದೆಯೇ ಪತ್ತಿಹಚ್ಚಿದ್ದರು. ಅವುಗಳಲ್ಲಿ 2 ದೇವಿಕೇರಿ ಗ್ರಾಮದಲ್ಲಿದ್ದು, ಇನ್ನು 2 ಶಾಸನಗಳು ಖಾಸಗಿ ವ್ಯಕ್ತಿಗಳ ಹೊಲದಲ್ಲಿವೆ. ಅವು ಅವಸಾನದ ಅಂಚಿನಲ್ಲಿವೆ.</p><p>ಪತ್ತೆಯಾಗಿರುವ ಐದು ವೀರಗಲ್ಲುಗಳೂ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಖಾಸಗಿ ವ್ಯಕ್ತಿಗೆ ಸೇರಿದ ಹೊಲದಲ್ಲಿ ಒಕ್ಕೈ ಮಾಸ್ತಿಗಲ್ಲಿದೆ. ಇದು ಮಹಿಳೆ ತನ್ನ ಗಂಡನ ವೀರಮರಣದ ನಂತರ ಆತನ ನೆನಪಿಗಾಗಿ ಸತಿ ಹೋಗಿರುವ ಸ್ಮರಣಾರ್ಥವಾಗಿ ಕೆತ್ತಿರುವ ಕಲ್ಲು ಎಂಬುದು ರಾಜಗೋಪಾಲ ಅವರ ಅಂದಾಜು.</p><p>17ನೇ ಶತಮಾನದ ಈ ಮಹಾಸತಿ ಕಲ್ಲು ಕೆಂಪುಕಣ ಶಿಲೆಯಲ್ಲಿದೆ. ಮೂರು ಅಡಿ ಅಗಲ ಐದು ಅಡಿ ಉದ್ದದ ಈ ಕಲ್ಲಿನಲ್ಲಿ ಮೊದಲ ಹಂತದಲ್ಲಿ ಕುದುರೆಯ ಮೇಲೆ ಇಬ್ಬರು ಕುಳಿತಿದ್ದು, ಎರಡನೆಯ ಹಂತದಲ್ಲಿ<br>ಬಲಗೈ ಬಾಚಿಗೊಂಡಿದ್ದು ಕೈಗೆ ಬಳೆಗಳು ಇವೆ ಎಂದು ರಾಜಗೋಪಾಲ ತಿಳಿಸುತ್ತಾರೆ.</p><p>ಹಾಲಿಡ ಭಂಗಿಯಲ್ಲಿ ವೀರನೊಬ್ಬ ಧನಸ್ಸನ್ನು ಹಿಡಿದು ನಿಂತಿರುವ ಕಪ್ಪು ಗ್ರಾನೈಟ್ ಶಿಲೆಯ ವೀರಗಲ್ಲಿನಲ್ಲಿ ಆ ಸೈನಿಕ ಯಾವುದೋ ಘನ ಕಾರ್ಯಕ್ಕೆ ಪ್ರಾಣವನ್ನು ತ್ಯಾಗ ಮಾಡಿದ್ದು, ಆತನ ಸ್ಮರಣಾರ್ಥವಾಗಿ ನಿಲ್ಲಿಸಿರಬಹುದು ಎಂದು ಅಂದಾಜಿಸಿದ್ದಾರೆ.</p><p>ಊರಿನ ಹನುಮಂತ ದೇವರಗುಡಿ ಮುಂದೆ 10 ರಿಂದ 12 ಮೂರ್ತಿಗಳನ್ನು ನಿಲ್ಲಿಸಲಾಗಿದೆ. ಅವುಗಳಲ್ಲಿ ಮೂರು ಮೂರ್ತಿಗಳು ಪ್ರಮುಖವಾಗಿವೆ. ಒಂದು ಶಿಲೆಯಲ್ಲಿ ವೀರನು ಧನುಸ್ಸನ್ನು ಹಿಡಿದು ಎದುರಿಗಿರುವ ವೈರಿಯ ಮೇಲೆ ದಾಳಿ ಮಾಡುವ ಭಂಗಿಯಲ್ಲಿದೆ ಎಂದು ತಿಳಿಸಿದ್ದಾರೆ.</p><p>ಎರಡನೆಯ ಕಲ್ಲಿನಲ್ಲಿ ವೀರಮರಣ ಅಪ್ಪಿದ ಯೋಧ ಸುರಂಗನೆಯ ಜೊತೆಗೆ ಸ್ವರ್ಗಕ್ಕೆ ಹೋಗುತ್ತಿರುವ ಭಂಗಿಯಲ್ಲಿದೆ. ಇನ್ನೊಂದು ಕಲ್ಲಿನಲ್ಲಿ ವೀರನು ಶಿವಲಿಂಗದ ಮುಂದೆ ವಜ್ರಾಸನದಲ್ಲಿ ಕುಳಿತು ಧ್ಯಾನ ಮಾಡುತ್ತಿರುವಂತೆ ಕೆತ್ತಲಾಗಿದೆ.ಶಿವಲಿಂಗದ ಹಿಂದೆ ವಿಷ್ಣುವಿನ ಮೂರ್ತಿ ಇದೆ. ಇದು ಸಾಮರಸ್ಯದ ಪ್ರತೀಕವಾಗಿದೆ ಎಂದು ರಾಜಗೋಪಾಲ ವಿವರಿಸಿದ್ದಾರೆ.</p><p>ಕೆಲವು ವೀರಗಲ್ಲುಗಳಿಗೆ ಗ್ರಾಮಸ್ಥರು ಪೂಜೆ ಸಲ್ಲಿಸುತ್ತಿದ್ದಾರೆ. ಎಣ್ಣೆ ಹಾಕಿ, ಕುಂಕುಮ ಹಚ್ಚುತ್ತಾರೆ. ಹೀಗಾಗಿ ಅವೂ ಅಳಿವಿನ ಅಂಚಿನಲ್ಲಿವೆ. ಶಾಸನಗಳು, ವೀರಗಲ್ಲು, ಮಾಸ್ತಿಗಲ್ಲುಗಳು ಇತಿಹಾಸದ ಕುರುಹಾಗಿವೆ. ಅವುಗಳನ್ನು ರಕ್ಷಿಸದಿದ್ದರೆ ನಾವೆಲ್ಲ ನಮ್ಮ ಭವ್ಯ ಇತಿಹಾಸದಿಂದ ವಂಚಿತರಾದಂತೆ ಎಂದು ರಾಜಗೋಪಾಲ ಅವರು ಕಳವಳ ವ್ಯಕ್ತಪಡಿಸಿದ್ದಾರೆ.</p>.<div><blockquote>ಸುರಪುರ ಇತಿಹಾಸಕ್ಕೆ ಸಂಬಂಧಿಸಿದಂತೆ ಎರಡು ಅಪರೂಪದ ಶಾಸನಗಳು ದೇವಿಕೇರಿಯಲ್ಲಿವೆ. ಸಂಶೋಧಿಸಿದಷ್ಟು ಮಾಹಿತಿ ಸಿಗುವ ವಿಪುಲ ಅವಕಾಶಗಳು ಇವೆ.</blockquote><span class="attribution">ಹನುಮಾಕ್ಷಿ ಗೋಗಿ, ಶಾಸನ ತಜ್ಞೆ</span></div>.<div><blockquote>ಅಪರೂಪದ ಶಾಸನ, ವೀರಗಲ್ಲುಗಳನ್ನು ಪುರಾತತ್ವ ಇಲಾಖೆ ಸಂರಕ್ಷಿಸಬೇಕು. ಅಲ್ಲಿಯವರೆಗೆ ಸಂಬಂಧಿಸಿದ ಗ್ರಾಮ ಪಂಚಾಯಿತಿ ಇವುಗಳನ್ನು ಪಂಚಾಯಿತಿ ಕಚೇರಿಯಲ್ಲಿ ರಕ್ಷಿಸಿ ಇಡಬೇಕು</blockquote><span class="attribution">ರಾಜಗೋಪಾಲ ವಿಭೂತಿ, ಸಂಶೋಧಕ ಮತ್ತು ಉಪನ್ಯಾಸಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>