<p><strong>ಹುಣಸಗಿ:</strong> ತಾಲ್ಲೂಕಿನ ತೆಗ್ಗೇಳ್ಳಿ ಗ್ರಾಮದ ಗ್ರಾಮಸ್ಥರು ತಾವೇ ಹಣ ಸಂಗ್ರಹಿಸಿ ಗ್ರಾಮದ ರಸ್ತೆಯನ್ನು ದುರಸ್ತಿಗೊಳಿಸಿದ್ದಾರೆ.</p>.<p>ಕೆಲ ವರ್ಷಗಳ ಹಿಂದೆ ಈ ಗ್ರಾಮದ ರಸ್ತೆಯನ್ನು ನಿರ್ಮಿಸಲಾಗಿತ್ತು. ಆ ಬಳಿಕ ಯಾವುದೇ ದುರಸ್ತಿ ಕಾರ್ಯ ಕೈಗೊಂಡಿರಲಿಲ್ಲ. ಇದರಿಂದಾಗಿ ನಿತ್ಯ ಸಂಚಾರಕ್ಕೆ ಸಾಕಷ್ಟು ಪರದಾಡುವಂತಾಗಿತ್ತು. ಸುಮಾರು ಮೂರು ಕಿ.ಮೀಟರ್ ರಸ್ತೆಯನ್ನು ಕ್ರಮಿಸಲು ಹರಸಾಹಸ ಪಡುವಂತಾಗಿತ್ತು.</p>.<p>ಹದೆಗೆಟ್ಟ ರಸ್ತೆಯಲ್ಲಿ ಒಂದು ಬಾರಿ ಹೆರಿಗೆ ಕೂಡಾ ಆಗಿತ್ತು. ಆದ್ದರಿಂದ ಗ್ರಾಮಸ್ಥರು ಕೂಡಿಕೊಂಡು ಮನೆಗೆ ಐದು ಸಾವಿರದಂತೆ ಸಂಗ್ರಹಿಸಿ ಸುಮಾರು ₹1.50 ಲಕ್ಷ ವೆಚ್ಚದಲ್ಲಿ ರಸ್ತೆಯ ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಶಿವಪುತ್ರಪ್ಪ ಮುಕ್ಕಣ್ಣರ, ಬಸನಗೌಡ ಮೇಟಿ, ಅಮರೇಶ ಮುಕ್ಕಣ್ಣರ, ಭೀಮರಾಯ ದೊಡ್ಡಮನಿ ತಿಳಿಸಿದರು.</p>.<p>ಗ್ರಾಮದ ಭಗಿರಥ ವೃತ್ತದಿಂದ ಬೈಚಬಾಳ ಗ್ರಾಮದವರೆಗೆ ಅಗತೀರ್ಥ ಬೈಚಬಾಳ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯನ್ನು ದುರಸ್ತಿ ಮಾಡಿ ಮುರಮ್ ಹಾಕಲಾಗಿದೆ ಎಂದು ಭೀಮರಾಯ ಸಾಧೂ, ಮಹಾದೇವಪ್ಪ ಕಾಚಾಪುರ, ಹಳ್ಳೇಪ್ಪ ಹಾಗೂ ಗ್ರಾಮಸ್ಥರು ಹೇಳಿದರು.</p>.<p>ಇನ್ನಾದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಮ್ಮ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮುಂದಾಗಲಿ ಎಂದು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸಗಿ:</strong> ತಾಲ್ಲೂಕಿನ ತೆಗ್ಗೇಳ್ಳಿ ಗ್ರಾಮದ ಗ್ರಾಮಸ್ಥರು ತಾವೇ ಹಣ ಸಂಗ್ರಹಿಸಿ ಗ್ರಾಮದ ರಸ್ತೆಯನ್ನು ದುರಸ್ತಿಗೊಳಿಸಿದ್ದಾರೆ.</p>.<p>ಕೆಲ ವರ್ಷಗಳ ಹಿಂದೆ ಈ ಗ್ರಾಮದ ರಸ್ತೆಯನ್ನು ನಿರ್ಮಿಸಲಾಗಿತ್ತು. ಆ ಬಳಿಕ ಯಾವುದೇ ದುರಸ್ತಿ ಕಾರ್ಯ ಕೈಗೊಂಡಿರಲಿಲ್ಲ. ಇದರಿಂದಾಗಿ ನಿತ್ಯ ಸಂಚಾರಕ್ಕೆ ಸಾಕಷ್ಟು ಪರದಾಡುವಂತಾಗಿತ್ತು. ಸುಮಾರು ಮೂರು ಕಿ.ಮೀಟರ್ ರಸ್ತೆಯನ್ನು ಕ್ರಮಿಸಲು ಹರಸಾಹಸ ಪಡುವಂತಾಗಿತ್ತು.</p>.<p>ಹದೆಗೆಟ್ಟ ರಸ್ತೆಯಲ್ಲಿ ಒಂದು ಬಾರಿ ಹೆರಿಗೆ ಕೂಡಾ ಆಗಿತ್ತು. ಆದ್ದರಿಂದ ಗ್ರಾಮಸ್ಥರು ಕೂಡಿಕೊಂಡು ಮನೆಗೆ ಐದು ಸಾವಿರದಂತೆ ಸಂಗ್ರಹಿಸಿ ಸುಮಾರು ₹1.50 ಲಕ್ಷ ವೆಚ್ಚದಲ್ಲಿ ರಸ್ತೆಯ ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಶಿವಪುತ್ರಪ್ಪ ಮುಕ್ಕಣ್ಣರ, ಬಸನಗೌಡ ಮೇಟಿ, ಅಮರೇಶ ಮುಕ್ಕಣ್ಣರ, ಭೀಮರಾಯ ದೊಡ್ಡಮನಿ ತಿಳಿಸಿದರು.</p>.<p>ಗ್ರಾಮದ ಭಗಿರಥ ವೃತ್ತದಿಂದ ಬೈಚಬಾಳ ಗ್ರಾಮದವರೆಗೆ ಅಗತೀರ್ಥ ಬೈಚಬಾಳ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯನ್ನು ದುರಸ್ತಿ ಮಾಡಿ ಮುರಮ್ ಹಾಕಲಾಗಿದೆ ಎಂದು ಭೀಮರಾಯ ಸಾಧೂ, ಮಹಾದೇವಪ್ಪ ಕಾಚಾಪುರ, ಹಳ್ಳೇಪ್ಪ ಹಾಗೂ ಗ್ರಾಮಸ್ಥರು ಹೇಳಿದರು.</p>.<p>ಇನ್ನಾದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಮ್ಮ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮುಂದಾಗಲಿ ಎಂದು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>