‘ಮನೆಯ ಮುಂಭಾಗದಲ್ಲಿ ಕುಳಿತುಕೊಂಡಾಗ ಇದ್ದಕ್ಕಿದ್ದಂತೆ ಮೇಲ್ಚಾವಣಿ ಕುಸಿದು ಬಿತ್ತು. ಆಗ ಕುಟುಂಬದ ಸದಸ್ಯರೆಲ್ಲರೂ ಮನೆಯಿಂದ ಹೊರಗಡೆ ಓಡಿ ಬಂದು ಜೀವ ಉಳಿಸಿಕೊಂಡೆವು. ವಾಸಕ್ಕಾಗಿ ಒಂದೇ ಒಂದು ಮನೆ ಇತ್ತು. ಅದು ಕೂಡ ಈಗ ಸಂಪೂರ್ಣವಾಗಿ ಬಿದ್ದಿದೆ. ಜೀವನ ಸಾಗಿಸಲು ಬೇಕಾದ ಜೋಳ, ಅಕ್ಕಿ ಸೇರಿದಂತೆ ಏನೂ ಉಳಿದಿಲ್ಲ. ಎಲ್ಲವೂ ಮಣ್ಣು ಪಾಲಾಗಿವೆ. ಸರ್ಕಾರದಿಂದ ನಮಗೆ ತಕ್ಷಣಕ್ಕೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ನೀಡಿ, ಮನೆಯನ್ನು ನಿರ್ಮಿಸಿಕೊಟ್ಟರೆ ತುಂಬಾ ಸಹಾಯವಾಗುತ್ತದೆ’ ಎಂದು ಶಾಂತಮ್ಮ ಗೊಂದಡಗಿ ಅಲವತ್ತುಕೊಂಡರು.