<p><strong>ಗುರುಮಠಕಲ್:</strong> ಸುತ್ತಲೂ ವನಸಿರಿಯ ಸೊಬಗು, ಜುಳು ಜುಳು ಎನ್ನುವ ನೀರಿನ ತೊರೆ, ಜಗಮಗಿಸುವ ವಿದ್ಯುತ್ ದೀಪಾಲಂಕಾರಗಳ ನಡುವೆ ಗವಿಸಿದ್ದಲಿಂಗೇಶ್ವರ ಮಹರಾಜ್ ಕೀ ಜೈ ಎನ್ನುವ ಜಯಘೋಷಗಳೊಂದಿಗೆ ಮೈ ಜುಮ್ ಎನ್ನಿಸುವಂತೆ ಭಾನುವಾರ ರಾತ್ರಿ ಹತ್ತಿರದ ಚಿಂತನಹಳ್ಳಿಯ ಗವಿಸಿದ್ದಲಿಂಗೇಶ್ವರರ ರಥೋತ್ಸವವು ಸಂಭ್ರಮದಿಂದ ಸಂಪನ್ನಗೊಂಡಿತು.</p>.<p>ಚಿಂತನಹಳ್ಳಿ, ಹಿಮಾಲಪುರ, ಹಿಮಾಲಪುರ ತಾಂಡಾಗಳ ನಡುವೆ ಕಾಡಿನ ಮಧ್ಯಭಾಗದಲ್ಲಿರುವ ಗವಿಸಿದ್ದಲಿಂಗೇಶ್ವರ ದೇವಸ್ಥಾನವೂ ಭಾನುವಾರ ಬೆಳಗ್ಗೆಯಿಂದಲೆ ಭಕ್ತ ಸಮೂಹ ದೇವಸ್ಥಾನದತ್ತ ಜಮಾವಣೆಗೊಳ್ಳಲಾರಂಭಿರಾತ್ರಿಯ ರಥೋತ್ಸವದವರೆಗೂ ದೇವಸ್ಥಾನದ ಆವರಣ ಜನಸಮೂಹದಿಂದ ಕಿಕ್ಕಿರಿದ ದೃಶ್ಯ ಕಂಡುಬಂದಿತು.</p>.<p>ಶಿವಶರಣ ಸಿದ್ದಲಿಂಗೇಶ್ವರರು ನೆಲೆಸಿದ್ದರೆನ್ನಲಾಗುವ ಗವಿಯಲ್ಲಿನ (ಗುಹೆ) ಸಿದ್ದಲಿಂಗೇಶ್ವರರ ಪುತ್ಥಳಿಗೆ ಜಾತ್ರೆಯ ಅಂಗವಾಗಿ ಬೆಳಗ್ಗೆ ವಿಶೇಷ ಅಭಿಷೇಕ, ಅಲಂಕಾರ, ಪೂಜೆ, ಆರತಿ ನಡೆಯಿತು.</p>.<p>ಚಿಂತನಹಳ್ಳಿಯಿಂದ ಪಲ್ಲಕ್ಕಿಹಾಗೂ ನಂದಿಕೋಲಗಳನ್ನು ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ತಂದ ನಂತರ ಜಾತ್ರೆಯು ಕಳೆಗಟ್ಟಿದ್ದು, ಭಜನೆ, ಕೀರ್ತನೆ, ಪ್ರಸಾದ ವಿತರಣೆ, ವಿಶೇಷ ಪೂಜೆಗಳು, ರಥಕ್ಕೆ ಅಲಂಕಾರ ನಡೆಯಿತು.</p>.<p>ಭಕ್ತರಿಗೆ ಗುಹೆಯಲ್ಲಿನ ಸಿದ್ದಲಿಂಗೇಶ್ವರರ ದರ್ಶನಕ್ಕೆ ಅನುಕೂಲವಾಗುವಂತೆ ದೇವಸ್ಥಾನ ಮಂಡಳಿ ಕಲ್ಪಿಸಿತ್ತು. ವಾಹನ ದಟ್ಟಣೆ ನಿಯಂತ್ರಣಕ್ಕೆಪೊಲೀಸ್ಇಲಾಖೆಯ ಕಾರ್ಯವೈಖರಿಯು ಭಕ್ತರಲ್ಲಿ ಸಂತಸವನ್ನುಂಟು ಮಾಡಿತ್ತು.</p>.<p><strong>ಸಿಹಿ ತಿನಿಸುಗಳ ಖರೀದಿ</strong></p>.<p>ಜಾತ್ರೆಯಲ್ಲಿ ಮಕ್ಕಳಿಗೆ ಆಟಿಕೆಗಳ ಖರೀದಿ ಹಾಗೂ ಸಿಹಿ ತಿನಿಸುಗಳನ್ನು ಖರೀದಿ ಮಾಡುವ ದೃಶ್ಯಗಳು ಕಂಡುಬಂದವು. ಮೈಸೂರ್ ಪಾಕ್, ಬತ್ತಾಸು, ಚುರುಮುರಿ, ಬಿಸಿ ಬಿಸಿ ಜಿಲೇಬಿ, ಪೇಡಾ, ಲಾಡು ಹಾಗೂ ಮಂಡಕ್ಕಿ ಖರೀದಿ ಜೋರಾಗಿ ನಡೆದದ್ದು ಕಂಡುಬಂದಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುರುಮಠಕಲ್:</strong> ಸುತ್ತಲೂ ವನಸಿರಿಯ ಸೊಬಗು, ಜುಳು ಜುಳು ಎನ್ನುವ ನೀರಿನ ತೊರೆ, ಜಗಮಗಿಸುವ ವಿದ್ಯುತ್ ದೀಪಾಲಂಕಾರಗಳ ನಡುವೆ ಗವಿಸಿದ್ದಲಿಂಗೇಶ್ವರ ಮಹರಾಜ್ ಕೀ ಜೈ ಎನ್ನುವ ಜಯಘೋಷಗಳೊಂದಿಗೆ ಮೈ ಜುಮ್ ಎನ್ನಿಸುವಂತೆ ಭಾನುವಾರ ರಾತ್ರಿ ಹತ್ತಿರದ ಚಿಂತನಹಳ್ಳಿಯ ಗವಿಸಿದ್ದಲಿಂಗೇಶ್ವರರ ರಥೋತ್ಸವವು ಸಂಭ್ರಮದಿಂದ ಸಂಪನ್ನಗೊಂಡಿತು.</p>.<p>ಚಿಂತನಹಳ್ಳಿ, ಹಿಮಾಲಪುರ, ಹಿಮಾಲಪುರ ತಾಂಡಾಗಳ ನಡುವೆ ಕಾಡಿನ ಮಧ್ಯಭಾಗದಲ್ಲಿರುವ ಗವಿಸಿದ್ದಲಿಂಗೇಶ್ವರ ದೇವಸ್ಥಾನವೂ ಭಾನುವಾರ ಬೆಳಗ್ಗೆಯಿಂದಲೆ ಭಕ್ತ ಸಮೂಹ ದೇವಸ್ಥಾನದತ್ತ ಜಮಾವಣೆಗೊಳ್ಳಲಾರಂಭಿರಾತ್ರಿಯ ರಥೋತ್ಸವದವರೆಗೂ ದೇವಸ್ಥಾನದ ಆವರಣ ಜನಸಮೂಹದಿಂದ ಕಿಕ್ಕಿರಿದ ದೃಶ್ಯ ಕಂಡುಬಂದಿತು.</p>.<p>ಶಿವಶರಣ ಸಿದ್ದಲಿಂಗೇಶ್ವರರು ನೆಲೆಸಿದ್ದರೆನ್ನಲಾಗುವ ಗವಿಯಲ್ಲಿನ (ಗುಹೆ) ಸಿದ್ದಲಿಂಗೇಶ್ವರರ ಪುತ್ಥಳಿಗೆ ಜಾತ್ರೆಯ ಅಂಗವಾಗಿ ಬೆಳಗ್ಗೆ ವಿಶೇಷ ಅಭಿಷೇಕ, ಅಲಂಕಾರ, ಪೂಜೆ, ಆರತಿ ನಡೆಯಿತು.</p>.<p>ಚಿಂತನಹಳ್ಳಿಯಿಂದ ಪಲ್ಲಕ್ಕಿಹಾಗೂ ನಂದಿಕೋಲಗಳನ್ನು ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ತಂದ ನಂತರ ಜಾತ್ರೆಯು ಕಳೆಗಟ್ಟಿದ್ದು, ಭಜನೆ, ಕೀರ್ತನೆ, ಪ್ರಸಾದ ವಿತರಣೆ, ವಿಶೇಷ ಪೂಜೆಗಳು, ರಥಕ್ಕೆ ಅಲಂಕಾರ ನಡೆಯಿತು.</p>.<p>ಭಕ್ತರಿಗೆ ಗುಹೆಯಲ್ಲಿನ ಸಿದ್ದಲಿಂಗೇಶ್ವರರ ದರ್ಶನಕ್ಕೆ ಅನುಕೂಲವಾಗುವಂತೆ ದೇವಸ್ಥಾನ ಮಂಡಳಿ ಕಲ್ಪಿಸಿತ್ತು. ವಾಹನ ದಟ್ಟಣೆ ನಿಯಂತ್ರಣಕ್ಕೆಪೊಲೀಸ್ಇಲಾಖೆಯ ಕಾರ್ಯವೈಖರಿಯು ಭಕ್ತರಲ್ಲಿ ಸಂತಸವನ್ನುಂಟು ಮಾಡಿತ್ತು.</p>.<p><strong>ಸಿಹಿ ತಿನಿಸುಗಳ ಖರೀದಿ</strong></p>.<p>ಜಾತ್ರೆಯಲ್ಲಿ ಮಕ್ಕಳಿಗೆ ಆಟಿಕೆಗಳ ಖರೀದಿ ಹಾಗೂ ಸಿಹಿ ತಿನಿಸುಗಳನ್ನು ಖರೀದಿ ಮಾಡುವ ದೃಶ್ಯಗಳು ಕಂಡುಬಂದವು. ಮೈಸೂರ್ ಪಾಕ್, ಬತ್ತಾಸು, ಚುರುಮುರಿ, ಬಿಸಿ ಬಿಸಿ ಜಿಲೇಬಿ, ಪೇಡಾ, ಲಾಡು ಹಾಗೂ ಮಂಡಕ್ಕಿ ಖರೀದಿ ಜೋರಾಗಿ ನಡೆದದ್ದು ಕಂಡುಬಂದಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>