<p><strong>ಕಕ್ಕೇರಾ</strong>: ‘ಪ್ರಸ್ತುತ ತಿಂಥಣಿ ಸುಕ್ಷೇತ್ರ ಮೌನೇಶ್ವರ ದೇಗುಲದಲ್ಲಿ ಮೂಲಸೌಕರ್ಯಗಳು ಇಲ್ಲ. ಬಂದಂತಹ ಭಕ್ತರಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲದಿರುವುದು ಸರಕಾದ ಕುತಂತ್ರವಾಗಿದೆ’ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಕೆಪಿ ನಂಜುಡಿ ಆಕ್ರೋಶ ವ್ಯಕ್ತಪಡಿಸಿದರು.</p>.<p>ತಾಲ್ಲೂಕಿನ ತಿಂಥಣಿ ಜಗದ್ಗುರು ಮೌನೇಶ್ವರ ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ದೇಗುಲ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ತಿಂಥಣಿ ಮೌನೇಶ್ವರ ಕ್ಷೇತ್ರ ಸಮರ್ಪಕವಾಗಿ ಅಭಿವೃದ್ಧಿ ಆಗಬೇಕಾದರೆ ತಿಂಥಣಿ, ವರವಿ, ಗೋನಾಳ, ಲಿಂಗನಬಂಡಿ ಈ ನಾಲ್ಕು ಕ್ಷೇತ್ರಗಳನ್ನು ಸೇರಿಸಿ ಒಂದು ಪ್ರಾಧಿಕಾರ ಸ್ಥಾಪಿಸಬೇಕು. ಸಿಎಂ ಸಿದ್ದರಾಮಯ್ಯನವರಿಗೆ 15 ವರ್ಷದ ಹಿಂದೆಯೇ ಬೇಡಿಕೆಯ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದರು.</p>.<p>‘ರಾಜ್ಯದಲ್ಲಿ ಪ್ರಸ್ತುತ ವಿಶ್ವಕರ್ಮ ಸಮಾಜದವರು 40 ಲಕ್ಷ ಜನರು ವಾಸವಾಗಿದ್ದಾರೆ. ಆದರೆ ಜನಗಣತಿಯಲ್ಲಿ ವಿಶ್ವಕರ್ಮ ಸಮಾಜ ಕೇವಲ 8 ಲಕ್ಷ ಜನರು ರಾಜ್ಯದಲ್ಲಿದ್ದಾರೆ ಎಂಬುದಾಗಿ ಗಣತಿಯಲ್ಲಿ ತೋರಿಸಲಾಗಿದೆ. ಬೆಂಗಳೂರಿನಲ್ಲಿಯೇ 4 ಲಕ್ಷ ಜನ ವಿಶ್ವಕರ್ಮ ಸಮುದಾಯದವರು ವಾಸಿಸುತ್ತಿದ್ದಾರೆ. ಸರಕಾರ ಈ ರೀತಿಯ ಕುತಂತ್ರ ನಡೆಸಿ ನಮ್ಮ ವಿಶ್ವಕರ್ಮ ಸಮುದಾಯವನ್ನು ಮೂಲೆ ಗುಂಪು ಮಾಡುತ್ತಿದೆ. ಬರೀ 8 ಲಕ್ಷ ಮಾತ್ರ ಸಮುದಾಯ ಜನ ಸಂಖ್ಯೆ ತೋರಿಸಿದರೆ ಇನ್ನುಳಿದ 32 ಲಕ್ಷ ಸಮುದಾಯದವರು ಬಾಂಗ್ಲಾದೇಶದಿಂದ ಬಂದಿದ್ದಾರೆಯೇ’ ಎಂದು ಸರಕಾರವನ್ನು ಪ್ರಶ್ನಿಸಿದರು.</p>.<p>‘ನಮ್ಮ ಸಮುದಾಯದಲ್ಲಿ ಮತ ಹಾಕುವ ಜನಸಂಖ್ಯೆ ಕಡಿಮೆ ಇದೆ ಎಂದು ಹೇಳಲಿ ಆದರೆ ಸಂಪೂರ್ಣ ಸಮುದಾಯದ ಜನಸಂಖ್ಯೆ ಕಡಿಮೆ ಇದೆ ಎಂದು ಹೇಳಿದರೆ ನಾವು ಒಪ್ಪುವದಿಲ್ಲ. ಕುಲಶಾಸ್ತ್ರ ಅಧ್ಯಯನವನ್ನು ನಾವು ತಿರಸ್ಕರಿಸುತ್ತೇವೆ’ ಎಂದು ನೇರವಾಗಿ ಕುಟುಕಿದರು.</p>.<p>‘40 ಲಕ್ಷ ಜನಸಂಖ್ಯೆ ಇರುವ ನಾವು ಮೂಲತಃವಾಗಿ ಕಾಡು ಮೇಡುಗಳಿಂದ ಬಂದವರು. ಆದರೆ ನಮ್ಮ ಸಮಾಜವು ಪರಿಶಿಷ್ಟ ಪಂಗಡಕ್ಕೆ ಸೇರುವ ಅರ್ಹತೆ ಇಲ್ಲವೆಂದು ಕುತಂತ್ರ ಮಾಡಿ ಕುಲಶಾಸ್ತ್ರದ ವರದಿಯಲ್ಲಿ ಪ್ರೊ. ನಂಜುಂಡಸ್ವಾಮಿ ಅವರು ವರದಿ ನೀಡಿದ್ದಾರೆ. ಅದಕ್ಕೆ ಈ ಎಲ್ಲಾ ವಿಷಯಗಳ ಕುರಿತು ಮುಂಬರುವ ಮಾರ್ಚ್ ತಿಂಗಳಿನಲ್ಲಿ ಸುಮಾರು ಎರಡು ಲಕ್ಷ ಸಮುದಾಯದ ಜನರು ಸೇರಿ ಸಮಾವೇಶದ ಮೂಲಕ ಪ್ರಾಧಿಕಾರ ಹಾಗೂ ಕುಲಶಾಸ್ತ್ರದ ವರದಿ ಮರುಪರಿಶೀಲಿಸಲು ಒತ್ತಾಯಿಸಲಾಗುವುದು’ ಎಂದು ತಿಳಿಸಿದರು.</p>.<p><strong>ಕಕ್ಕೇರಾ:</strong> ಪ್ಟಣದ ಸಮೀಪದ ತಿಂಥಣಿ ಮೌನೇಶ್ವರ ದೇಗುಲಕ್ಕೆ ಭೇಟಿ ನೀಡಿದ ಮಾಜಿ ವಿಧಾನ ಪರಿಷತ್ ಸದಸ್ಯ ಕೆಪಿ ನಂಜುಡಿ ಸುದ್ದಿಗಾರರೊಂದಿಗೆ ಮಾತನಾಡಿದರು.</p>.<div><blockquote>ಜಗದ್ಗುರು ಮೌನೇಶ್ವರನಿಗೆ ಯಾವುದೇ ಜಾತಿ ಧರ್ಮವಿಲ್ಲ ಸರ್ವ ಧರ್ಮಗಳ ಸಂಕೇತವೆ ಮೌನೇಶ್ವರ. ಇಂತಹ ಮಹಾ ಪುರುಷನ ಸಂತತಿಯವರು ವಿಶ್ವಕರ್ಮದವರು ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ. </blockquote><span class="attribution">ಕೆಪಿ ನಂಜುಡಿ, ಮಾಜಿ ವಿಧಾನ ಪರಿಷತ್ ಸದಸ್ಯ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಕ್ಕೇರಾ</strong>: ‘ಪ್ರಸ್ತುತ ತಿಂಥಣಿ ಸುಕ್ಷೇತ್ರ ಮೌನೇಶ್ವರ ದೇಗುಲದಲ್ಲಿ ಮೂಲಸೌಕರ್ಯಗಳು ಇಲ್ಲ. ಬಂದಂತಹ ಭಕ್ತರಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲದಿರುವುದು ಸರಕಾದ ಕುತಂತ್ರವಾಗಿದೆ’ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಕೆಪಿ ನಂಜುಡಿ ಆಕ್ರೋಶ ವ್ಯಕ್ತಪಡಿಸಿದರು.</p>.<p>ತಾಲ್ಲೂಕಿನ ತಿಂಥಣಿ ಜಗದ್ಗುರು ಮೌನೇಶ್ವರ ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ದೇಗುಲ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ತಿಂಥಣಿ ಮೌನೇಶ್ವರ ಕ್ಷೇತ್ರ ಸಮರ್ಪಕವಾಗಿ ಅಭಿವೃದ್ಧಿ ಆಗಬೇಕಾದರೆ ತಿಂಥಣಿ, ವರವಿ, ಗೋನಾಳ, ಲಿಂಗನಬಂಡಿ ಈ ನಾಲ್ಕು ಕ್ಷೇತ್ರಗಳನ್ನು ಸೇರಿಸಿ ಒಂದು ಪ್ರಾಧಿಕಾರ ಸ್ಥಾಪಿಸಬೇಕು. ಸಿಎಂ ಸಿದ್ದರಾಮಯ್ಯನವರಿಗೆ 15 ವರ್ಷದ ಹಿಂದೆಯೇ ಬೇಡಿಕೆಯ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದರು.</p>.<p>‘ರಾಜ್ಯದಲ್ಲಿ ಪ್ರಸ್ತುತ ವಿಶ್ವಕರ್ಮ ಸಮಾಜದವರು 40 ಲಕ್ಷ ಜನರು ವಾಸವಾಗಿದ್ದಾರೆ. ಆದರೆ ಜನಗಣತಿಯಲ್ಲಿ ವಿಶ್ವಕರ್ಮ ಸಮಾಜ ಕೇವಲ 8 ಲಕ್ಷ ಜನರು ರಾಜ್ಯದಲ್ಲಿದ್ದಾರೆ ಎಂಬುದಾಗಿ ಗಣತಿಯಲ್ಲಿ ತೋರಿಸಲಾಗಿದೆ. ಬೆಂಗಳೂರಿನಲ್ಲಿಯೇ 4 ಲಕ್ಷ ಜನ ವಿಶ್ವಕರ್ಮ ಸಮುದಾಯದವರು ವಾಸಿಸುತ್ತಿದ್ದಾರೆ. ಸರಕಾರ ಈ ರೀತಿಯ ಕುತಂತ್ರ ನಡೆಸಿ ನಮ್ಮ ವಿಶ್ವಕರ್ಮ ಸಮುದಾಯವನ್ನು ಮೂಲೆ ಗುಂಪು ಮಾಡುತ್ತಿದೆ. ಬರೀ 8 ಲಕ್ಷ ಮಾತ್ರ ಸಮುದಾಯ ಜನ ಸಂಖ್ಯೆ ತೋರಿಸಿದರೆ ಇನ್ನುಳಿದ 32 ಲಕ್ಷ ಸಮುದಾಯದವರು ಬಾಂಗ್ಲಾದೇಶದಿಂದ ಬಂದಿದ್ದಾರೆಯೇ’ ಎಂದು ಸರಕಾರವನ್ನು ಪ್ರಶ್ನಿಸಿದರು.</p>.<p>‘ನಮ್ಮ ಸಮುದಾಯದಲ್ಲಿ ಮತ ಹಾಕುವ ಜನಸಂಖ್ಯೆ ಕಡಿಮೆ ಇದೆ ಎಂದು ಹೇಳಲಿ ಆದರೆ ಸಂಪೂರ್ಣ ಸಮುದಾಯದ ಜನಸಂಖ್ಯೆ ಕಡಿಮೆ ಇದೆ ಎಂದು ಹೇಳಿದರೆ ನಾವು ಒಪ್ಪುವದಿಲ್ಲ. ಕುಲಶಾಸ್ತ್ರ ಅಧ್ಯಯನವನ್ನು ನಾವು ತಿರಸ್ಕರಿಸುತ್ತೇವೆ’ ಎಂದು ನೇರವಾಗಿ ಕುಟುಕಿದರು.</p>.<p>‘40 ಲಕ್ಷ ಜನಸಂಖ್ಯೆ ಇರುವ ನಾವು ಮೂಲತಃವಾಗಿ ಕಾಡು ಮೇಡುಗಳಿಂದ ಬಂದವರು. ಆದರೆ ನಮ್ಮ ಸಮಾಜವು ಪರಿಶಿಷ್ಟ ಪಂಗಡಕ್ಕೆ ಸೇರುವ ಅರ್ಹತೆ ಇಲ್ಲವೆಂದು ಕುತಂತ್ರ ಮಾಡಿ ಕುಲಶಾಸ್ತ್ರದ ವರದಿಯಲ್ಲಿ ಪ್ರೊ. ನಂಜುಂಡಸ್ವಾಮಿ ಅವರು ವರದಿ ನೀಡಿದ್ದಾರೆ. ಅದಕ್ಕೆ ಈ ಎಲ್ಲಾ ವಿಷಯಗಳ ಕುರಿತು ಮುಂಬರುವ ಮಾರ್ಚ್ ತಿಂಗಳಿನಲ್ಲಿ ಸುಮಾರು ಎರಡು ಲಕ್ಷ ಸಮುದಾಯದ ಜನರು ಸೇರಿ ಸಮಾವೇಶದ ಮೂಲಕ ಪ್ರಾಧಿಕಾರ ಹಾಗೂ ಕುಲಶಾಸ್ತ್ರದ ವರದಿ ಮರುಪರಿಶೀಲಿಸಲು ಒತ್ತಾಯಿಸಲಾಗುವುದು’ ಎಂದು ತಿಳಿಸಿದರು.</p>.<p><strong>ಕಕ್ಕೇರಾ:</strong> ಪ್ಟಣದ ಸಮೀಪದ ತಿಂಥಣಿ ಮೌನೇಶ್ವರ ದೇಗುಲಕ್ಕೆ ಭೇಟಿ ನೀಡಿದ ಮಾಜಿ ವಿಧಾನ ಪರಿಷತ್ ಸದಸ್ಯ ಕೆಪಿ ನಂಜುಡಿ ಸುದ್ದಿಗಾರರೊಂದಿಗೆ ಮಾತನಾಡಿದರು.</p>.<div><blockquote>ಜಗದ್ಗುರು ಮೌನೇಶ್ವರನಿಗೆ ಯಾವುದೇ ಜಾತಿ ಧರ್ಮವಿಲ್ಲ ಸರ್ವ ಧರ್ಮಗಳ ಸಂಕೇತವೆ ಮೌನೇಶ್ವರ. ಇಂತಹ ಮಹಾ ಪುರುಷನ ಸಂತತಿಯವರು ವಿಶ್ವಕರ್ಮದವರು ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ. </blockquote><span class="attribution">ಕೆಪಿ ನಂಜುಡಿ, ಮಾಜಿ ವಿಧಾನ ಪರಿಷತ್ ಸದಸ್ಯ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>