<p><strong>ಯಾದಗಿರಿ:</strong> ನಗರದಲ್ಲಿ ಸೋಮವಾರ ವ್ಯಾಪಾರ ವಹಿವಾಟು ನಡೆಯಿತು. ಭಾನುವಾರ ಬೆಳಿಗ್ಗೆಯಿಂದ ಸಂಜೆವರೆಗೆ ಜನತಾ ಕರ್ಫ್ಯೂ ವಿಧಿಸಿಕೊಂಡ ಜನತೆ ಸೋಮವಾರ ಯಥಾರೀತಿ ವ್ಯಾಪಾರ ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದರು.</p>.<p>ಭಾನುವಾರ ಭಣಗುಡುತ್ತಿದ್ದ ರಸ್ತೆ, ಬಡಾವಣೆಗಳು ಸೋಮವಾರ ಯಥಾ ರೀತಿ ಎಲ್ಲೆಡೆ ವಾಹನ ಓಡಾಟ ಸಾಮಾನ್ಯವಾಗಿತ್ತು.</p>.<p class="Subhead"><strong>ಬೇಕರಿಗಳು ಬಂದ್:</strong>ನಗರದಲ್ಲಿ ಎಲ್ಲೆಡೆ ಬೇಕರಿಗಳು ಬಂದ್ ಆಗಿವೆ. ಮಕ್ಕಳು ಬೇಕರಿ ಪದಾರ್ಥಗಳಿಗೆ ಬೇಡಿಕೆ ಇಡುವುದು ಕಂಡು ಬಂದಿತು.</p>.<p class="Subhead"><strong>ಬಸ್ ಬಂದ್:</strong> ನಗರದ ಬಸ್ ನಿಲ್ದಾಣದಲ್ಲಿ ಬಸ್ಗಳನ್ನು ಸಾಲಾಗಿ ನಿಲ್ಲಿಸಲಾಗಿದೆ. ಅಲ್ಲೊಬ್ಬರು ಇಲ್ಲೊಬ್ಬರು ಬಸ್ ನಿಲ್ದಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಸ್ ನಿಲ್ದಾಣದ ಎಲ್ಲ ಅಂಗಡಿಗಳನ್ನು ಬಂದ್ ಮಾಡಲಾಗಿದೆ. ಉದ್ಯೋಗದಲ್ಲಿ ಇರುವವರು ಬೇರೆ ಪ್ರದೇಶಕ್ಕೆ ತೆರಳಲು ಖಾಸಗಿ ವಾಹನಗಳತ್ತ ಮುಖ ಮಾಡಿದರು.</p>.<p>ಕೆಲವೆಡೆ ಹೋಟೆಲ್ ಬಂದ್ ಆಗಿದ್ದರಿಂದ ಊಟಕ್ಕೂ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನುಳಿದಂತೆ ಆಸ್ಪತ್ರೆ, ಮೆಡಿಕಲ್ ತೆಗೆದಿವೆ.</p>.<p class="Subhead">ಬೆಳಿಗ್ಗೆಯಿಂದ ಫರ್ನಿಚರ್, ಬಣ್ಣದ ಅಂಗಡಿಗಳು ತೆಗೆದಿದ್ದವು. ಸಂಜೆಯಾಗುತ್ತಲೇ ಬಂದ್ ಮಾಡಿದರು. ಇನ್ನು ಕಿರಾಣಿ ಅಂಗಡಿಗಳಲ್ಲಿ ವ್ಯಾಪಾರ ಎಂದಿನಂತೆ ಇತ್ತು.</p>.<p><strong>ಯುಗಾದಿ ಖರೀದಿ:</strong>ನಗರದ ಸುಭಾಷ ವೃತ್ತದ ಬಳಿ ಯುಗಾದಿ ಹಬ್ಬಕ್ಕಾಗಿ ವಿವಿಧ ಸಿಹಿ ಪದಾರ್ಥಗಳನ್ನು ಮಾರಾಟ ಮಾಡುವುದು ಸೋಮವಾರ ಕಂಡು ಬಂತು. ₹20ರಿಂದ ₹100 ಪೊಟ್ಟಣ, ಬಿಡಿಬಿಡಿಯಾಗಿ ಸಿಹಿ ಪದಾರ್ಥ ಮಾರಾಟ ಮಾಡಲಾಗುತ್ತಿತ್ತು.</p>.<p class="Subhead"><strong>ಬಟ್ಟೆ ಖರೀದಿಯೂ ಜೋರು:</strong>ನಗರದ ವಿವಿಧ ಅಂಗಡಿಗಳಲ್ಲಿ ಬಟ್ಟೆ ವ್ಯಾಪಾರ ಜೋರಾಗಿ ನಡೆಯಿತು. ಭಾನುವಾರ ಬಂದ್ ಆಗಿದ್ದರಿಂದ ಸೋಮವಾರ ಅಂಗಡಿಗಳು ತೆಗೆದಿದ್ದರಿಂದ ಗ್ರಾಮೀಣ ಪ್ರದೇಶದಿಂದ ಬಂದ ರೈತರು ಬಟ್ಟೆ ಖರೀದಿಯಲ್ಲಿ ತೊಡಗಿಸಿಕೊಂಡಿದ್ದರು.</p>.<p>ಹಣ್ಣುಗಳ ಖರೀದಿಯೂ ಕಂಡು ಬಂತು. ಮನೆ ಕಟ್ಟುವ ಕಾರ್ಮಿಕರು ಮನೆ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ:</strong> ನಗರದಲ್ಲಿ ಸೋಮವಾರ ವ್ಯಾಪಾರ ವಹಿವಾಟು ನಡೆಯಿತು. ಭಾನುವಾರ ಬೆಳಿಗ್ಗೆಯಿಂದ ಸಂಜೆವರೆಗೆ ಜನತಾ ಕರ್ಫ್ಯೂ ವಿಧಿಸಿಕೊಂಡ ಜನತೆ ಸೋಮವಾರ ಯಥಾರೀತಿ ವ್ಯಾಪಾರ ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದರು.</p>.<p>ಭಾನುವಾರ ಭಣಗುಡುತ್ತಿದ್ದ ರಸ್ತೆ, ಬಡಾವಣೆಗಳು ಸೋಮವಾರ ಯಥಾ ರೀತಿ ಎಲ್ಲೆಡೆ ವಾಹನ ಓಡಾಟ ಸಾಮಾನ್ಯವಾಗಿತ್ತು.</p>.<p class="Subhead"><strong>ಬೇಕರಿಗಳು ಬಂದ್:</strong>ನಗರದಲ್ಲಿ ಎಲ್ಲೆಡೆ ಬೇಕರಿಗಳು ಬಂದ್ ಆಗಿವೆ. ಮಕ್ಕಳು ಬೇಕರಿ ಪದಾರ್ಥಗಳಿಗೆ ಬೇಡಿಕೆ ಇಡುವುದು ಕಂಡು ಬಂದಿತು.</p>.<p class="Subhead"><strong>ಬಸ್ ಬಂದ್:</strong> ನಗರದ ಬಸ್ ನಿಲ್ದಾಣದಲ್ಲಿ ಬಸ್ಗಳನ್ನು ಸಾಲಾಗಿ ನಿಲ್ಲಿಸಲಾಗಿದೆ. ಅಲ್ಲೊಬ್ಬರು ಇಲ್ಲೊಬ್ಬರು ಬಸ್ ನಿಲ್ದಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಸ್ ನಿಲ್ದಾಣದ ಎಲ್ಲ ಅಂಗಡಿಗಳನ್ನು ಬಂದ್ ಮಾಡಲಾಗಿದೆ. ಉದ್ಯೋಗದಲ್ಲಿ ಇರುವವರು ಬೇರೆ ಪ್ರದೇಶಕ್ಕೆ ತೆರಳಲು ಖಾಸಗಿ ವಾಹನಗಳತ್ತ ಮುಖ ಮಾಡಿದರು.</p>.<p>ಕೆಲವೆಡೆ ಹೋಟೆಲ್ ಬಂದ್ ಆಗಿದ್ದರಿಂದ ಊಟಕ್ಕೂ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನುಳಿದಂತೆ ಆಸ್ಪತ್ರೆ, ಮೆಡಿಕಲ್ ತೆಗೆದಿವೆ.</p>.<p class="Subhead">ಬೆಳಿಗ್ಗೆಯಿಂದ ಫರ್ನಿಚರ್, ಬಣ್ಣದ ಅಂಗಡಿಗಳು ತೆಗೆದಿದ್ದವು. ಸಂಜೆಯಾಗುತ್ತಲೇ ಬಂದ್ ಮಾಡಿದರು. ಇನ್ನು ಕಿರಾಣಿ ಅಂಗಡಿಗಳಲ್ಲಿ ವ್ಯಾಪಾರ ಎಂದಿನಂತೆ ಇತ್ತು.</p>.<p><strong>ಯುಗಾದಿ ಖರೀದಿ:</strong>ನಗರದ ಸುಭಾಷ ವೃತ್ತದ ಬಳಿ ಯುಗಾದಿ ಹಬ್ಬಕ್ಕಾಗಿ ವಿವಿಧ ಸಿಹಿ ಪದಾರ್ಥಗಳನ್ನು ಮಾರಾಟ ಮಾಡುವುದು ಸೋಮವಾರ ಕಂಡು ಬಂತು. ₹20ರಿಂದ ₹100 ಪೊಟ್ಟಣ, ಬಿಡಿಬಿಡಿಯಾಗಿ ಸಿಹಿ ಪದಾರ್ಥ ಮಾರಾಟ ಮಾಡಲಾಗುತ್ತಿತ್ತು.</p>.<p class="Subhead"><strong>ಬಟ್ಟೆ ಖರೀದಿಯೂ ಜೋರು:</strong>ನಗರದ ವಿವಿಧ ಅಂಗಡಿಗಳಲ್ಲಿ ಬಟ್ಟೆ ವ್ಯಾಪಾರ ಜೋರಾಗಿ ನಡೆಯಿತು. ಭಾನುವಾರ ಬಂದ್ ಆಗಿದ್ದರಿಂದ ಸೋಮವಾರ ಅಂಗಡಿಗಳು ತೆಗೆದಿದ್ದರಿಂದ ಗ್ರಾಮೀಣ ಪ್ರದೇಶದಿಂದ ಬಂದ ರೈತರು ಬಟ್ಟೆ ಖರೀದಿಯಲ್ಲಿ ತೊಡಗಿಸಿಕೊಂಡಿದ್ದರು.</p>.<p>ಹಣ್ಣುಗಳ ಖರೀದಿಯೂ ಕಂಡು ಬಂತು. ಮನೆ ಕಟ್ಟುವ ಕಾರ್ಮಿಕರು ಮನೆ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>