<p>ಸುರಪುರ: ‘ಸ್ವಾಮಿ ವಿವೇಕಾನಂದರು ಯುವ ಸಮುದಾಯಕ್ಕೆ ಇಂದಿಗೂ ಆಶಾಕಿರಣ. ನಿರ್ಭಯತೆ, ಆಶಾವಾದ ಮತ್ತು ಸಮಾಜದ ಬಗೆಗಿನ ವಿಶಾಲ ದೃಷ್ಟಿಕೋನದಿಂದ ತತ್ವಜ್ಞಾನಿ ಎನಿಸಿಕೊಂಡರು’ ಎಂದು ನ್ಯಾಯಾಧೀಶ ಚಿದಾನಂದ ಬಡಿಗೇರ್ ಹೇಳಿದರು.</p>.<p>ಇಲ್ಲಿಯ ಕೋರ್ಟ್ನಲ್ಲಿ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಯುವ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಭಾರತದ ಶಕ್ತಿ, ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸಿದ ಅವರ ದಿವ್ಯವಾಣಿ ಎಲ್ಲರಿಗೂ ಸ್ಫೂರ್ತಿದಾಯಕ. ಪರಿಶ್ರಮ, ತ್ಯಾಗ ಹಾಗೂ ಸಾಹಸದಿಂದ ಇಡೀ ಪ್ರಪಂಚವೇ ಭಾರತದ ಕಡೆ ತಿರುಗಿ ನೋಡುವಂತೆ ಮಾಡಿದ ಮಹಾನ್ ಚೇತನ ಅವರು’ ಎಂದು ಹೇಳಿದರು.</p>.<p>ಸ್ವಾಮಿ ವಿವೇಕಾನಂದರ ಕುರಿತು ವಕೀಲ ವಿ.ಎಸ್.ಬೈಚಬಾಳ ಮತ್ತು ತಂಬಾಕು, ಗುಟ್ಕಾ ನಿಷೇಧದ ಕುರಿತು ವಕೀಲ ಚನ್ನಪ್ಪ ಹೂಗಾರ ಉಪನ್ಯಾಸ ನೀಡಿದರು.</p>.<p>ವಕೀಲರ ಸಂಘದ ಅಧ್ಯಕ್ಷ ಬಿ.ಎಚ್. ಕಿಲ್ಲೇದಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಪಿಪಿಗಳಾದ ರಾಘವೇಂದ್ರ ಜಾಗೀರದಾರ್, ದಿವ್ಯಾರಾಣಿ ನಾಯಕ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಗೋಪಾಲ ತಳವಾರ ಇದ್ದರು. ಅಪ್ಪಣ್ಣ ಗಾಯಕವಾಡ ನಿರೂಪಿಸಿದರು. ಮಂಜುನಾಥ ಹುದ್ದಾರ ವಂದಿಸಿದರು.</p>.<p><strong>‘ವಿವೇಕಾನಂದರ ಆದರ್ಶ ಸಾರ್ವಕಾಲಿಕ’</strong></p>.<p>ಗುರುಮಠಕಲ್: ಸ್ವಾಮಿ ವಿವೇಕಾನಂದರ ಮಾರ್ಗ ಹಾಗೂ ಆದರ್ಶಗಳು ಸಾರ್ವಕಾಲಿಕ ಮಾನ್ಯತೆ ಪಡೆದಿವೆ ಎಂದು ಶಿಕ್ಷಕ ಅಶೋಕರೆಡ್ಡಿ ಶೆಕಲಾಸಪಲ್ಲಿ ಹೇಳಿದರು.</p>.<p>ಪಟ್ಟಣದ ಲಕ್ಷ್ಮಿನಗರ ಬಡಾವಣೆಯ ಉದ್ಯಾನದಲ್ಲಿ ಸ್ವಾಮಿ ವಿವೇಕಾನಂದ ಶಾಖೆಯ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಭಾರತೀಯ ಸಂಸ್ಕೃತಿಯಲ್ಲಿನ ಶ್ರೇಷ್ಠತೆಯನ್ನು ಜಗತ್ತಿಗೆ ತೋರಿಸಿ, ಬ್ರಿಟಿಷರು ದೇಶ ಹಾಗೂ ಧರ್ಮದ ಕುರಿತು ಹಬ್ಬಿಸಿದ್ದ ಸುಳ್ಳಿನ ಪರದೆಯನ್ನು ತೆಗೆದರು. ದೇಶದ ಭಾಗ್ಯವು ಮೇಲ್ವರ್ಗದ ಜನರಿಂದಲ್ಲ. ಅದು ಗುಡಿಸಲುಗಳಿಂದ ಬರುವ ಶೋಷಿತ ಸಮುದಾಯಗಳ ಕೈಯಲ್ಲಿದೆ ಎಂದು ಜಾಗೃತಿ ಮೂಡಿಸಿದ್ದರು ಎಂದರು.</p>.<p>ಈಗಿನ ಯುವ ಸಮುದಾಯ ಕ್ಷುಲ್ಲಕ, ಕ್ಷಣಿಕ ಆನಂದಕ್ಕೆ ದಾಸರಾಗುತ್ತಿದ್ದಾರೆ. ದುಶ್ಚಟಗಳಿಗೆ ಬಲಿಯಾಗುತ್ತಿರುವುದು ದೇಶದ ಹಿತದೃಷ್ಟಿಯಿಂದ ದೊಡ್ಡ ನಷ್ಟ ಎಂದು ಕಳವಳ ವ್ಯಕ್ತಪಡಿಸಿದರು.</p>.<p>ಜೀವನದಲ್ಲಿ ಸ್ವಾಮಿ ವಿವೇಕಾ ನಂದರ ಆದರ್ಶ ಅಳವಡಿಸಿಕೊಂಡರೆ ಸಾಮಾಜಿಕವಾಗಿ ಮೇಲ್ಮಟ್ಟದ ಸ್ಥಾನ ಪಡೆಯಲು ಸಾಧ್ಯ ಎಂದು ಹೇಳಿದರು.</p>.<p>ಸೂರ್ಯನಾರಾಯಣ, ಬಸಪ್ಪ ಸಂಜನೋಳ, ಶ್ರೀನಿವಾಸ ಯಾಧವ್, ಗುರುನಾಥ ತಲಾರಿ, ರವೀಂದ್ರರೆಡ್ಡಿ ಪೋತುಲ್, ನರೇಶ ಗೋಂಗ್ಲೆ, ಕಾರ್ತಿಕ್, ವಿಶಾಲ, ಲಕ್ಷಣ ಕುಂಬಾರ, ಮಂಜು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸುರಪುರ: ‘ಸ್ವಾಮಿ ವಿವೇಕಾನಂದರು ಯುವ ಸಮುದಾಯಕ್ಕೆ ಇಂದಿಗೂ ಆಶಾಕಿರಣ. ನಿರ್ಭಯತೆ, ಆಶಾವಾದ ಮತ್ತು ಸಮಾಜದ ಬಗೆಗಿನ ವಿಶಾಲ ದೃಷ್ಟಿಕೋನದಿಂದ ತತ್ವಜ್ಞಾನಿ ಎನಿಸಿಕೊಂಡರು’ ಎಂದು ನ್ಯಾಯಾಧೀಶ ಚಿದಾನಂದ ಬಡಿಗೇರ್ ಹೇಳಿದರು.</p>.<p>ಇಲ್ಲಿಯ ಕೋರ್ಟ್ನಲ್ಲಿ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಯುವ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಭಾರತದ ಶಕ್ತಿ, ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸಿದ ಅವರ ದಿವ್ಯವಾಣಿ ಎಲ್ಲರಿಗೂ ಸ್ಫೂರ್ತಿದಾಯಕ. ಪರಿಶ್ರಮ, ತ್ಯಾಗ ಹಾಗೂ ಸಾಹಸದಿಂದ ಇಡೀ ಪ್ರಪಂಚವೇ ಭಾರತದ ಕಡೆ ತಿರುಗಿ ನೋಡುವಂತೆ ಮಾಡಿದ ಮಹಾನ್ ಚೇತನ ಅವರು’ ಎಂದು ಹೇಳಿದರು.</p>.<p>ಸ್ವಾಮಿ ವಿವೇಕಾನಂದರ ಕುರಿತು ವಕೀಲ ವಿ.ಎಸ್.ಬೈಚಬಾಳ ಮತ್ತು ತಂಬಾಕು, ಗುಟ್ಕಾ ನಿಷೇಧದ ಕುರಿತು ವಕೀಲ ಚನ್ನಪ್ಪ ಹೂಗಾರ ಉಪನ್ಯಾಸ ನೀಡಿದರು.</p>.<p>ವಕೀಲರ ಸಂಘದ ಅಧ್ಯಕ್ಷ ಬಿ.ಎಚ್. ಕಿಲ್ಲೇದಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಪಿಪಿಗಳಾದ ರಾಘವೇಂದ್ರ ಜಾಗೀರದಾರ್, ದಿವ್ಯಾರಾಣಿ ನಾಯಕ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಗೋಪಾಲ ತಳವಾರ ಇದ್ದರು. ಅಪ್ಪಣ್ಣ ಗಾಯಕವಾಡ ನಿರೂಪಿಸಿದರು. ಮಂಜುನಾಥ ಹುದ್ದಾರ ವಂದಿಸಿದರು.</p>.<p><strong>‘ವಿವೇಕಾನಂದರ ಆದರ್ಶ ಸಾರ್ವಕಾಲಿಕ’</strong></p>.<p>ಗುರುಮಠಕಲ್: ಸ್ವಾಮಿ ವಿವೇಕಾನಂದರ ಮಾರ್ಗ ಹಾಗೂ ಆದರ್ಶಗಳು ಸಾರ್ವಕಾಲಿಕ ಮಾನ್ಯತೆ ಪಡೆದಿವೆ ಎಂದು ಶಿಕ್ಷಕ ಅಶೋಕರೆಡ್ಡಿ ಶೆಕಲಾಸಪಲ್ಲಿ ಹೇಳಿದರು.</p>.<p>ಪಟ್ಟಣದ ಲಕ್ಷ್ಮಿನಗರ ಬಡಾವಣೆಯ ಉದ್ಯಾನದಲ್ಲಿ ಸ್ವಾಮಿ ವಿವೇಕಾನಂದ ಶಾಖೆಯ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಭಾರತೀಯ ಸಂಸ್ಕೃತಿಯಲ್ಲಿನ ಶ್ರೇಷ್ಠತೆಯನ್ನು ಜಗತ್ತಿಗೆ ತೋರಿಸಿ, ಬ್ರಿಟಿಷರು ದೇಶ ಹಾಗೂ ಧರ್ಮದ ಕುರಿತು ಹಬ್ಬಿಸಿದ್ದ ಸುಳ್ಳಿನ ಪರದೆಯನ್ನು ತೆಗೆದರು. ದೇಶದ ಭಾಗ್ಯವು ಮೇಲ್ವರ್ಗದ ಜನರಿಂದಲ್ಲ. ಅದು ಗುಡಿಸಲುಗಳಿಂದ ಬರುವ ಶೋಷಿತ ಸಮುದಾಯಗಳ ಕೈಯಲ್ಲಿದೆ ಎಂದು ಜಾಗೃತಿ ಮೂಡಿಸಿದ್ದರು ಎಂದರು.</p>.<p>ಈಗಿನ ಯುವ ಸಮುದಾಯ ಕ್ಷುಲ್ಲಕ, ಕ್ಷಣಿಕ ಆನಂದಕ್ಕೆ ದಾಸರಾಗುತ್ತಿದ್ದಾರೆ. ದುಶ್ಚಟಗಳಿಗೆ ಬಲಿಯಾಗುತ್ತಿರುವುದು ದೇಶದ ಹಿತದೃಷ್ಟಿಯಿಂದ ದೊಡ್ಡ ನಷ್ಟ ಎಂದು ಕಳವಳ ವ್ಯಕ್ತಪಡಿಸಿದರು.</p>.<p>ಜೀವನದಲ್ಲಿ ಸ್ವಾಮಿ ವಿವೇಕಾ ನಂದರ ಆದರ್ಶ ಅಳವಡಿಸಿಕೊಂಡರೆ ಸಾಮಾಜಿಕವಾಗಿ ಮೇಲ್ಮಟ್ಟದ ಸ್ಥಾನ ಪಡೆಯಲು ಸಾಧ್ಯ ಎಂದು ಹೇಳಿದರು.</p>.<p>ಸೂರ್ಯನಾರಾಯಣ, ಬಸಪ್ಪ ಸಂಜನೋಳ, ಶ್ರೀನಿವಾಸ ಯಾಧವ್, ಗುರುನಾಥ ತಲಾರಿ, ರವೀಂದ್ರರೆಡ್ಡಿ ಪೋತುಲ್, ನರೇಶ ಗೋಂಗ್ಲೆ, ಕಾರ್ತಿಕ್, ವಿಶಾಲ, ಲಕ್ಷಣ ಕುಂಬಾರ, ಮಂಜು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>