ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಜನರಿಗೆ ವಿವೇಕಾನಂದರು ಆದರ್ಶ: ಭೀಮಣ್ಣ ಮಡಿವಾಳಕರ್

Published 12 ಜನವರಿ 2024, 14:21 IST
Last Updated 12 ಜನವರಿ 2024, 14:21 IST
ಅಕ್ಷರ ಗಾತ್ರ

ಸೈದಾಪುರ: ವಿಶಾಲ ಅಧ್ಯಾತ್ಮಿಕ ಚಿಂತನೆ ಮತ್ತು ದೃಢ ಸಂಕಲ್ಪ ಶಕ್ತಿಯ ಸಂಕೇತವಾಗಿ ನಿಂತ ಸ್ವಾಮಿ ವಿವೇಕಾನಂದರು ಯುವಜನತೆಗೆ ಆದರ್ಶಪ್ರಾಯವಾಗಿದ್ದಾರೆ ಎಂದು ಸ್ವಾಮಿ ವಿವೇಕಾನಂದ ತರುಣ ಸಂಘದ ಅಧ್ಯಕ್ಷ ಭೀಮಣ್ಣ ಮಡಿವಾಳಕರ್ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಸ್ವಾಮಿ ವಿವೇಕಾನಂದ ತರುಣ ಸಂಘದಿಂದ ಆಯೋಜಿಸಿದ ಸ್ವಾಮಿ ವಿವೇಕಾನಂದರ ಜಯಂತಿಯಲ್ಲಿ ಅವರು ಮಾತನಾಡಿದರು.

ವಿವೇಕಾನಂದರು ಕೇವಲ 39 ವರ್ಷ ವಯಸ್ಸಿನಲ್ಲಿ ಮಡಿದರು ಅವರು ದೇಶದ ಜನತೆಯ ಉನ್ನತಿಗಾಗಿ ಅವರು ಸಾಧಿಸಿದ್ದನ್ನು ಇಂದಿನ ಯುವ ಶಕ್ತಿಯಷ್ಟೇ ಅಲ್ಲದೆ ಇಡೀ ಜಗತ್ತು ಅವರನ್ನು ಗೌರವಪೂರ್ವಕವಾಗಿ ನೆನೆಯುತ್ತದೆ’ ಎಂದರು.

ಹಿರಿಯ ಮುಖಂಡ ಚಂದ್ರಶೇಖರ್ ವಾರದ್, ವಿಶ್ವನಾಥ ನೀಲಹಳ್ಳಿ, ಯುವ ಮುಖಂಡ ಗುರುನಾಥರೆಡ್ಡಿ ರೊಟ್ನಡಗಿ, ನಿತಿನ್ ತಿವಾರಿ, ಮಲ್ಲರೆಡ್ಡಿ ಖಾನಾಪುರ, ಸಿದ್ದು ಪೂಜಾರಿ, ಪ್ರಧಾನ ಕಾರ್ಯದರ್ಶಿ ರಾಜೇಶ ದೇವರಶೆಟ್ಟಿ, ಬನದೇಶ ಕಾಳೆಬೆಳಗುಂದಿ, ಕೆಪಿ ವಸಂತಕುಮಾರ, ಮಹಾಲಕ್ಷ್ಮೀ ಸಂಗವಾರ, ರಾಘವೇಂದ್ರ ಕಲಾಲ್, ಕುಮಾರ ಚವ್ಹಾಣ, ಬನಶಂಕರ ಕಣೇಕಲ್ ಸೇರಿದಂತೆ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT