<p><strong>ವಡಗೇರಾ</strong>: ವಡಗೇರಾ ಪಟ್ಟಣದಲ್ಲಿ ಇರುವ ಪೊಲೀಸ್ ಠಾಣೆಯ ವ್ಯಾಪ್ತಿ ವಿಶಾಲವಾಗಿರುವುದರಿಂದ ಅದನ್ನು ವಿಭಜಿಸಿ ಖಾನಾಪೂರ ಗ್ರಾಮದಲ್ಲಿ ಪೊಲೀಸ್ ಠಾಣೆ ಆರಂಭಿಸಬೇಕು ಎಂಬ ಸಾರ್ವಜನಿಕರ ಕೂಗು ಕಳೆದ ಹದಿನೈದು ವರ್ಷಗಳಿಂದ ಇದೆ. ಆದರೆ ಅದು ಇದುವರೆಗೂ ಈಡೇರಿಲ್ಲ ಎಂಬ ಕೊರಗು ಜನರಲ್ಲಿ ಮನೆಮಾಡಿದೆ.</p>.<p>ಯಾದಗಿರಿ ಜಿಲ್ಲೆಯಲ್ಲಿಯೇ ದೊಡ್ಡ ವ್ಯಾಪ್ತಿಯನ್ನು ಹೊಂದಿರುವ ಪೊಲೀಸ ಠಾಣೆ ಎಂದರೆ ವಡಗೇರಾ ಪೊಲೀಸ್ ಠಾಣೆ.</p>.<p><strong> ಸಿಬ್ಬಂದಿ: </strong>ಈ ಠಾಣೆಯಲ್ಲಿ ಇಬ್ಬರು ಪಿಎಸ್ಐ, 5 ಜನ ಎಎಸ್ಐ, 12 ಜನ ಹೆಡ್ ಕಾನ್ಸ್ಟೆಬಲ್, 22 ಜನ ಪೊಲೀಸ್ ಇದ್ದಾರೆ.</p>.<p><strong>ವ್ಯಾಪ್ತಿ:</strong> ವಡಗೇರಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 56 ಹಳ್ಳಿಗಳು, 6 ತಾಂಡಾಗಳು ಹಾಗೂ 2 ಬೀನ್ ಚಿರಾಗ್ (ಜನ ವಸತಿ ಇರದ ಪ್ರದೇಶಕ್ಕೆ ಪೊಲೀಸ್ ಇಲಾಖೆಯ ಭಾಷೆ) ಗ್ರಾಮಗಳು ಬರುತ್ತವೆ.</p>.<p><strong> ವಿಸ್ತೀರ್ಣ:</strong> ಈ ಪೊಲೀಸ್ ಠಾಣೆಯ ಸರಹದ್ದು ಸಂಗಮದಿಂದ ಗುಂಡಳ್ಳಿ ತಾಂಡಾದ ಹತ್ತಿರವಿರುವ ಗಾಳಿ ಮರೆಮ್ಮ ದೇವಿ ದೇವಸ್ಥಾನದವರೆಗೆ ಇದೆ. ಈ ಠಾಣೆ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳು ಸುಮಾರು 2 ಕಿ.ಮೀ.ನಿಂದ 35 ಕಿ.ಮೀ.ವರೆಗೆ ಇದೆ.</p>.<p><strong>ಸಕಾಲದಲ್ಲಿ ತಲುಪಲು ಆಗಲ್ಲ:</strong> ವಡಗೇರಾ ಪಟ್ಟಣದಲ್ಲಿ ಇರುವ ಪೊಲೀಸರಿಗೆ ತಮ್ಮ ಸರಹದ್ದಿನಲ್ಲಿ ನಡೆದ ಅಪರಾಧ ಪ್ರಕರಣ ಇಲ್ಲವೇ ಅಪಘಾತ ಅಥವಾ ಗಲಭೆ ನಡೆದ ಸ್ಥಳಕ್ಕೆ ತಲುಪಬೇಕಾದರೆ ಸುಮಾರು 40 ರಿಂದ 60 ನಿಮಿಷ ಬೇಕು. ಇದರಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಬಹಳ ತೊಂದರೆಯಾಗುತ್ತಿದೆ. ಅದಕ್ಕಾಗಿ ಈ ಪೊಲೀಸ್ ಠಾಣೆಯ ಸರಹದ್ದನ್ನು ವಿಭಜಿಸಿ ಖಾನಾಪೂರದಲ್ಲಿ ನೂತನ ಪೊಲೀಸ್ ಠಾಣೆ ಆರಂಭಿಸಿದರೆ ಕಾನೂನು ಸುವ್ಯವಸ್ಥೆ ಕಾಪಾಡುವುದರ ಜತೆಗೆ ಸಕಾಲದಲ್ಲಿ ಘಟನೆ ನಡೆದ ಸ್ದಳಕ್ಕೆ ಪೊಲೀಸರು ತಲುಪಲು ಸಾಧ್ಯವಾಗುತ್ತದೆ ಎಂಬುದು ತಾಲ್ಲೂಕಿನ ವ್ಯಾಪ್ತಿಯ ಸಾರ್ವಜನಿಕರ ಅನಿಸಿಕೆಯಾಗಿದೆ.</p>.<p><strong> ಹಿನ್ನೆಲೆ: </strong>ಸ್ವಾತಂತ್ರ್ಯಪೂರ್ವ ನಿಜಾಮರ ಆಳ್ವಿಕೆಯಲ್ಲಿ ಪಟ್ಟಣದ ಹನುಮಾನ ದೇವಸ್ಥಾನದ ಪಕ್ಕದಲ್ಲಿಯೆ ಇದ್ದ ಸೊಸೈಟಿಯಲ್ಲಿ ಪೊಲೀಸ್ ಠಾಣೆ ಆರಂಭಿಸಲಾಯಿತು. ಸ್ಥಳದ ಅಭಾವದಿಂದ ಅದನ್ನು ಖಾನಾಪೂರಕ್ಕೆ ಸ್ಥಳಾಂತರಿಸಲಾಯಿತು. ಅಲ್ಲಿ ಏಳೆಂಟು ವರ್ಷ ಕಾರ್ಯನಿರ್ವಹಿಸಿದ ನಂತರ 1964-65 ರಲ್ಲಿ ಸ್ವಂತ ಕಟ್ಟಡಕ್ಕೆ (ಈಗಿರುವ ಹಳೆಯ ಕಟ್ಟಡ) ಸ್ಥಳಾಂತರಿಸಲಾಯಿತು. ಹಳೆಯ ಕಟ್ಟಡ ಶಿಥಿಲಾವಸ್ಥೆ ತಲುಪಿರುವುದರಿಂದ ಹೊಸದಾಗಿ ಕಟ್ಟಿರುವ ಕಟ್ಟಡದಲ್ಲಿ ಕಾರ್ಯ ನಿರ್ವಸುತ್ತಿದೆ. </p>.<div><blockquote>ವಡಗೇರಾ ಪೊಲೀಸ್ ಠಾಣೆಯ ಸರಹದ್ದನ್ನು ವಿಭಜಿಸುವ ಬಗ್ಗೆ ಗೃಹ ಮಂತ್ರಿಗಳ ಜತೆ ಚರ್ಚಿಸಲಾಗಿದೆ. ಖಾನಾಪೂರದಲ್ಲಿ ಪೊಲೀಸ್ ಠಾಣೆ ಸ್ಥಾಪನೆ ಮಾಡುವ ಕಾರ್ಯ ಪ್ರಗತಿಯಲ್ಲಿ ಇದೆ </blockquote><span class="attribution">ಚನ್ನಾರಡ್ಡಿ ಪಾಟೀಲ್ ತುನ್ನೂರ ಶಾಸಕ</span></div>.<div><blockquote>ವಡಗೇರಾ ಪೊಲೀಸ್ ಠಾಣೆಯ ಸರಹದ್ದನ್ನು ವಿಭಜಿಸುವ ಅವಶ್ಯಕತೆ ಇದೆ. ಆದಷ್ಟು ಬೇಗ ಈ ಕಾರ್ಯ ನಡೆಯಬೇಕು. ಇದರಿಂದ ಪೊಲೀಸರಿಗೆ ಕಾನೂನು ಸುವ್ಯವಸ್ಥೆ ಕಾಪಾಡಲು ಅನುಕೂಲವಾಗುತ್ತದೆ</blockquote><span class="attribution"> ಗುರು ನಾಟೇಕಾರ ತಾಲ್ಲೂಕು ಅಧ್ಯಕ್ಷ ಅಂಬೇಡ್ಕರ್ ವಾದ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಡಗೇರಾ</strong>: ವಡಗೇರಾ ಪಟ್ಟಣದಲ್ಲಿ ಇರುವ ಪೊಲೀಸ್ ಠಾಣೆಯ ವ್ಯಾಪ್ತಿ ವಿಶಾಲವಾಗಿರುವುದರಿಂದ ಅದನ್ನು ವಿಭಜಿಸಿ ಖಾನಾಪೂರ ಗ್ರಾಮದಲ್ಲಿ ಪೊಲೀಸ್ ಠಾಣೆ ಆರಂಭಿಸಬೇಕು ಎಂಬ ಸಾರ್ವಜನಿಕರ ಕೂಗು ಕಳೆದ ಹದಿನೈದು ವರ್ಷಗಳಿಂದ ಇದೆ. ಆದರೆ ಅದು ಇದುವರೆಗೂ ಈಡೇರಿಲ್ಲ ಎಂಬ ಕೊರಗು ಜನರಲ್ಲಿ ಮನೆಮಾಡಿದೆ.</p>.<p>ಯಾದಗಿರಿ ಜಿಲ್ಲೆಯಲ್ಲಿಯೇ ದೊಡ್ಡ ವ್ಯಾಪ್ತಿಯನ್ನು ಹೊಂದಿರುವ ಪೊಲೀಸ ಠಾಣೆ ಎಂದರೆ ವಡಗೇರಾ ಪೊಲೀಸ್ ಠಾಣೆ.</p>.<p><strong> ಸಿಬ್ಬಂದಿ: </strong>ಈ ಠಾಣೆಯಲ್ಲಿ ಇಬ್ಬರು ಪಿಎಸ್ಐ, 5 ಜನ ಎಎಸ್ಐ, 12 ಜನ ಹೆಡ್ ಕಾನ್ಸ್ಟೆಬಲ್, 22 ಜನ ಪೊಲೀಸ್ ಇದ್ದಾರೆ.</p>.<p><strong>ವ್ಯಾಪ್ತಿ:</strong> ವಡಗೇರಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 56 ಹಳ್ಳಿಗಳು, 6 ತಾಂಡಾಗಳು ಹಾಗೂ 2 ಬೀನ್ ಚಿರಾಗ್ (ಜನ ವಸತಿ ಇರದ ಪ್ರದೇಶಕ್ಕೆ ಪೊಲೀಸ್ ಇಲಾಖೆಯ ಭಾಷೆ) ಗ್ರಾಮಗಳು ಬರುತ್ತವೆ.</p>.<p><strong> ವಿಸ್ತೀರ್ಣ:</strong> ಈ ಪೊಲೀಸ್ ಠಾಣೆಯ ಸರಹದ್ದು ಸಂಗಮದಿಂದ ಗುಂಡಳ್ಳಿ ತಾಂಡಾದ ಹತ್ತಿರವಿರುವ ಗಾಳಿ ಮರೆಮ್ಮ ದೇವಿ ದೇವಸ್ಥಾನದವರೆಗೆ ಇದೆ. ಈ ಠಾಣೆ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳು ಸುಮಾರು 2 ಕಿ.ಮೀ.ನಿಂದ 35 ಕಿ.ಮೀ.ವರೆಗೆ ಇದೆ.</p>.<p><strong>ಸಕಾಲದಲ್ಲಿ ತಲುಪಲು ಆಗಲ್ಲ:</strong> ವಡಗೇರಾ ಪಟ್ಟಣದಲ್ಲಿ ಇರುವ ಪೊಲೀಸರಿಗೆ ತಮ್ಮ ಸರಹದ್ದಿನಲ್ಲಿ ನಡೆದ ಅಪರಾಧ ಪ್ರಕರಣ ಇಲ್ಲವೇ ಅಪಘಾತ ಅಥವಾ ಗಲಭೆ ನಡೆದ ಸ್ಥಳಕ್ಕೆ ತಲುಪಬೇಕಾದರೆ ಸುಮಾರು 40 ರಿಂದ 60 ನಿಮಿಷ ಬೇಕು. ಇದರಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಬಹಳ ತೊಂದರೆಯಾಗುತ್ತಿದೆ. ಅದಕ್ಕಾಗಿ ಈ ಪೊಲೀಸ್ ಠಾಣೆಯ ಸರಹದ್ದನ್ನು ವಿಭಜಿಸಿ ಖಾನಾಪೂರದಲ್ಲಿ ನೂತನ ಪೊಲೀಸ್ ಠಾಣೆ ಆರಂಭಿಸಿದರೆ ಕಾನೂನು ಸುವ್ಯವಸ್ಥೆ ಕಾಪಾಡುವುದರ ಜತೆಗೆ ಸಕಾಲದಲ್ಲಿ ಘಟನೆ ನಡೆದ ಸ್ದಳಕ್ಕೆ ಪೊಲೀಸರು ತಲುಪಲು ಸಾಧ್ಯವಾಗುತ್ತದೆ ಎಂಬುದು ತಾಲ್ಲೂಕಿನ ವ್ಯಾಪ್ತಿಯ ಸಾರ್ವಜನಿಕರ ಅನಿಸಿಕೆಯಾಗಿದೆ.</p>.<p><strong> ಹಿನ್ನೆಲೆ: </strong>ಸ್ವಾತಂತ್ರ್ಯಪೂರ್ವ ನಿಜಾಮರ ಆಳ್ವಿಕೆಯಲ್ಲಿ ಪಟ್ಟಣದ ಹನುಮಾನ ದೇವಸ್ಥಾನದ ಪಕ್ಕದಲ್ಲಿಯೆ ಇದ್ದ ಸೊಸೈಟಿಯಲ್ಲಿ ಪೊಲೀಸ್ ಠಾಣೆ ಆರಂಭಿಸಲಾಯಿತು. ಸ್ಥಳದ ಅಭಾವದಿಂದ ಅದನ್ನು ಖಾನಾಪೂರಕ್ಕೆ ಸ್ಥಳಾಂತರಿಸಲಾಯಿತು. ಅಲ್ಲಿ ಏಳೆಂಟು ವರ್ಷ ಕಾರ್ಯನಿರ್ವಹಿಸಿದ ನಂತರ 1964-65 ರಲ್ಲಿ ಸ್ವಂತ ಕಟ್ಟಡಕ್ಕೆ (ಈಗಿರುವ ಹಳೆಯ ಕಟ್ಟಡ) ಸ್ಥಳಾಂತರಿಸಲಾಯಿತು. ಹಳೆಯ ಕಟ್ಟಡ ಶಿಥಿಲಾವಸ್ಥೆ ತಲುಪಿರುವುದರಿಂದ ಹೊಸದಾಗಿ ಕಟ್ಟಿರುವ ಕಟ್ಟಡದಲ್ಲಿ ಕಾರ್ಯ ನಿರ್ವಸುತ್ತಿದೆ. </p>.<div><blockquote>ವಡಗೇರಾ ಪೊಲೀಸ್ ಠಾಣೆಯ ಸರಹದ್ದನ್ನು ವಿಭಜಿಸುವ ಬಗ್ಗೆ ಗೃಹ ಮಂತ್ರಿಗಳ ಜತೆ ಚರ್ಚಿಸಲಾಗಿದೆ. ಖಾನಾಪೂರದಲ್ಲಿ ಪೊಲೀಸ್ ಠಾಣೆ ಸ್ಥಾಪನೆ ಮಾಡುವ ಕಾರ್ಯ ಪ್ರಗತಿಯಲ್ಲಿ ಇದೆ </blockquote><span class="attribution">ಚನ್ನಾರಡ್ಡಿ ಪಾಟೀಲ್ ತುನ್ನೂರ ಶಾಸಕ</span></div>.<div><blockquote>ವಡಗೇರಾ ಪೊಲೀಸ್ ಠಾಣೆಯ ಸರಹದ್ದನ್ನು ವಿಭಜಿಸುವ ಅವಶ್ಯಕತೆ ಇದೆ. ಆದಷ್ಟು ಬೇಗ ಈ ಕಾರ್ಯ ನಡೆಯಬೇಕು. ಇದರಿಂದ ಪೊಲೀಸರಿಗೆ ಕಾನೂನು ಸುವ್ಯವಸ್ಥೆ ಕಾಪಾಡಲು ಅನುಕೂಲವಾಗುತ್ತದೆ</blockquote><span class="attribution"> ಗುರು ನಾಟೇಕಾರ ತಾಲ್ಲೂಕು ಅಧ್ಯಕ್ಷ ಅಂಬೇಡ್ಕರ್ ವಾದ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>