ಕೃಷಿ ಇಲಾಖೆ ಸನ್ನದ್ದ: ರೈತರ ಬೇಡಿಕೆಗೆ ತಕ್ಕಂತೆ ಬಿತ್ತನೆ ಬೀಜ ಹಂಚಿಕೆ ಮಾಡುತ್ತಿದ್ದು, ಹಂತ-ಹಂತವಾಗಿ ಇಲಾಖೆಯಿಂದ ಬೀಜದ ದಾಸ್ತಾನು ಪೂರೈಕೆ ಮಾಡುತ್ತಿದೆ. ಅವಶ್ಯವಿದ್ದಲ್ಲಿ ಹೆಚ್ಚುವರಿ ದಾಸ್ತಾನು ವ್ಯವಸ್ಥೆ ಮಾಡಿ ರೈತರ ಬೇಡಿಕೆಯನ್ನು ಪೂರೈಸಲು ಯತ್ನಿಸುವುದಾಗಿ ಗುರುಮಠಕಲ್ ಹಾಗೂ ಕೊಂಕಲ್ ರೈತ ಸಂಪರ್ಕ ಕೇಂದ್ರಗಳ ಸಿಬ್ಬಂದಿ ಭರವಸೆ ನೀಡಿದರು.