ಯಾದಗಿರಿ: ಕಳೆದ ವಾರದಿಂದ ಈ ವಾರಕ್ಕೆ ತರಕಾರಿ ದರ ಹೋಲಿಕೆ ಮಾಡಿದರೆ ಕೆಲ ತರಕಾರಿಗಳ ಬೆಲೆ ₹20ರಿಂದ 40 ಏರಿಕೆಯಾಗಿದೆ.
ಬದನೆಕಾಯಿ, ಚವಳೆಕಾಯಿ, ಟೊಮೆಟೊ, ದೊಣ್ಣೆಮೆಣಸಿನಕಾಯಿ, ತೊಂಡೆಕಾಯಿ, ಬೆಂಡೆಕಾಯಿ, ಗೋಬಿ ದರ ಏರಿಕೆಯಾಗಿದೆ. ಕಳೆದ ವಾರದಂತೆ ಈ ವಾರವೂ ಆಲೂಗಡ್ಡೆ, ಬೀನ್ಸ್, ಈರುಳ್ಳಿ, ಕ್ಯಾಬೇಜ್, ಮೆಣಸಿನಕಾಯಿ, ಸೋರೆಕಾಯಿ, ಬೀಟ್ರೂಟ್, ಹೀರೆಕಾಯಿ, ಹಾಗಲಕಾಯಿ ದರ ಯಥಾಸ್ಥಿತಿ ಇದೆ.
ಗಜ್ಜರಿ ಕಳೆದ ವಾರ ₹100 ಕೇ.ಜಿ. ಇತ್ತು. ಈ ವಾರ ₹80 ಕೇ.ಜಿ. ಆಗಿದೆ. ಮೂಲಂಗಿ ಕಳೆದ ವಾರ ₹60 ಕೇ.ಜಿ. ಇತ್ತು. ಈ ವಾರ ₹20 ಕಡಿಮೆಯಾಗಿ ₹40 ಆಗಿದೆ.
ದರ ಇಳಿಕೆಯಾಗಬೇಕಿತ್ತು: ‘ಮುಂಗಾರು ಉತ್ತಮವಾಗಿ ಸುರಿದಿದ್ದು, ತೋಟಗಾರಿಕೆಗೆ ಬೆಳೆಗಳು ಚೆನ್ನಾಗಿ ಬಂದಿದ್ದವು. ಆದರೆ, ಭಾರಿ ಮಳೆಯಿಂದ ಎಲ್ಲ ಬೆಳೆಗಳು ನೆಲಕಚ್ಚಿದ್ದು, ದರ ಹೆಚ್ಚಳವಾಗಿದೆ. ಆದರೆ, ಈ ಸಮಯಕ್ಕೆ ಎಲ್ಲ ತರಕಾರಿಗಳ ದರ ಕಡಿಮೆಯಾಗಿ ₹10ಗೆ ಕೇ.ಜಿ. ಆಗಬೇಕಿತ್ತು. ಆದರೆ, ಈಗ ನೋಡಿದರೆ ತರಕಾರಿ ಅಭಾವವಾಗಿದೆ ಎನ್ನುತ್ತಾರೆ ತರಕಾರಿ ವ್ಯಾಪಾರಿ ಪ್ರಕಾಶ ಸುರಪುರ ಅವರು.
‘ಮುಳ್ಳು ಬದನೆಕಾಯಿ15 ಕೇ.ಜಿ.ಯ ಒಂದು ಪೆಟ್ಟಿಗೆಗೆ ₹500 ಇದೆ.ಹೈಬ್ರೀಡ್ 15 ಕೇ.ಜಿ.ಪೆಟ್ಟಿಗೆಗೆ ₹400 ಬೆಲೆ ಇದೆ.25 ಕೇ.ಜಿ.ಗೆ ₹400 ಟೊಮೆಟೊ ದರವಿದೆ.ಈರುಳ್ಳಿ ಹಳೆದು ₹3,600 ಕ್ವಿಂಟಲ್,ಹೊಸಈರುಳ್ಳಿ (ಹಸಿ)₹2,000 ಕ್ವಿಂಟಲ್ ಇದೆ.ಆಲೂಗಡ್ಡೆ₹3,300 ಕ್ವಿಂಟಲ್ ಇದೆ’ ಎಂದು ವ್ಯಾಪಾರಿ ಮಲ್ಲಯ್ಯ ದಾಸನ್ ಹೇಳುತ್ತಾರೆ.
ಸೊಪ್ಪುಗಳ ದರ: ಮಾರುಕಟ್ಟೆಯಲ್ಲಿ ಸೊಪ್ಪುಗಳ ದರ ಯಥಾಸ್ಥಿತಿ ಇದೆ.ಪಾಲಕ್ ₹20ಗೆ ಮೂರು ಕಟ್ಟು,ಸಬ್ಬಸಿಗೆ ₹10ಗೆ ಒಂದು ಕಟ್ಟು, ಮೆಂತೆ ₹25ಗೇ ಒಂದು ಕಟ್ಟು,ರಾಜಗಿರಿ ಸೊಪ್ಪು ₹20ಗೆ ಮೂರು ಕಟ್ಟು,ಪುಂಡಿ ಪಲ್ಯೆ ₹20ಗೆ4 ಕಟ್ಟು, ಕೊತ್ತಂಬರಿ,ಪುದೀನಾ ₹40ಗೆ 1 ಕಟ್ಟು ಇದೆ.
***
ಯಾದಗಿರಿಯ ಸ್ಟೇಷನ್ ರಸ್ತೆಯ ಮಾರುಕಟ್ಟೆಗೆ ತರಕಾರಿ ಬರುತ್ತಿಲ್ಲ. ಕಲಬುರ್ಗಿ, ಶಹಾಪುರದಿಂದ ತರಕಾರಿ ತರಿಸುತ್ತೇವೆ
ಪ್ರಕಾಶ ಸುರಪುರ, ತರಕಾರಿ ವ್ಯಾಪಾರಿ
***
ಯಾವ ತರಕಾರಿ ದರವೂ ಕಡಿಮೆ ಇಲ್ಲ. ಇದು ಗ್ರಾಹಕರಿಗೆ ಹೊರೆಯಾಗಿದೆ. ಮಳೆ ಹೆಚ್ಚಳವಾಗಿರುವುದು ತೊಂದರೆಯಾಗಿದೆ