<p><strong>ಯಾದಗಿರಿ: </strong>ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಕಳೆದ ಒಂದು ವಾರದಲ್ಲಿ ಆಗಾಗ ಜಿಟಿ ಜಿಟಿ ಮಳೆಯಾಗುತ್ತಿದ್ದು, ತರಕಾರಿ ಮಾರುಕಟ್ಟೆಗಳಲ್ಲಿ ಆವಕ ಕಡಿಮೆಯಾಗಿದೆ. ಇದರಿಂದ ತರಕಾರಿ ದರ ಏರಿಕೆಯಾಗಿದೆ.</p>.<p>ಕಳೆದ ವಾರ ತರಕಾರಿ ದರದಲ್ಲಿ ಏರಿಳಿಕೆಯಾಗಿದ್ದು, ಗ್ರಾಹಕರಿಗೆ ಹೊರೆಯಾಗಿರಲಿಲ್ಲ. ಈಗ ದರ ಏರಿಕೆಯಾಗಿದ್ದು, ಶ್ರಾವಣ ಮಾಸದ ಮುನ್ನವೇ ದರ ಸಮರ ನಡೆದಿದೆ.</p>.<p>ಜಿಟಿಜಿಟಿ ಮಳೆ ಪ್ರಭಾವದಿಂದ ತರಕಾರಿ ಬಿಡಿಸಲು ಆಗುತ್ತಿಲ್ಲ. ಇದರಿಂದ ಹಳ್ಳಿಗಳಿಂದ ಮಾರುಕಟ್ಟೆಗೆ ತರಕಾರಿ ಬರುತ್ತಿಲ್ಲ. ಇದು ಆವಕ ಕಡಿಮೆಯಾಗಲು ಕಾರಣವಾಗಿದೆ.</p>.<p>ಟೊಮೆಟೊ, ಆಲೂಗಡ್ಡೆ, ಎಲೆಕೋಸು, ಸೋರೆಕಾಯಿ ಬಿಟ್ಟು, ಉಳಿದೆಲ್ಲ ತರಕಾರಿ ದರ ಏರಿಕೆಯಾಗಿದೆ. ಇದರಿಂದ ಗ್ರಾಹಕರ ಬೇಬಿಗೆ ಕತ್ತರಿ ಹಾಕಿದಂತೆ ಆಗಲಿದೆ. ಶುಂಠಿ ಕೆಜಿಗೆ ₹60 ಇದ್ದು, ಬೆಳ್ಳೋಳ್ಳಿ ಕೆಜಿಗೆ ₹100 ಇದೆ.</p>.<p>ಮುಂದಿನ ವಾರದಿಂದ ಶ್ರಾವಣ ಮಾಸ ಆರಂಭವಾಗಲಿದ್ದು, ತರಕಾರಿಗಳ ದರ ಮತ್ತೆ ಏರಿಕೆಯಾಗುವ ಸಾಧ್ಯತೆ ಇದೆ. ಮಾಂಸಹಾರ ಸೇವನೆ ಬಹುತೇಕ ಕಡಿಮೆಯಾಗಲಿದ್ದು, ಸಸ್ಯಹಾರ ಹೆಚ್ಚು ಸೇವನೆ ಮಾಡಲಿದ್ದಾರೆ. ಇದು ಕೂಡ ದರ ಏರಿಕೆಗೆ ಕಾರಣವಾಗಲಿದೆ ಎಂದು ವ್ಯಾಪಾರಿಗಳು ಹೇಳುವ ಮಾತು.</p>.<p>‘ಜಿಲ್ಲೆಯಲ್ಲಿ ತರಕಾರಿ ಬೆಳೆಯುವ ತಾಲ್ಲೂಕುಗಳಲ್ಲಿ ಹೆಚ್ಚಿನ ಮಳೆಯಾಗಿದೆ. ಜೊತೆಗೆ ಜಿಟಿ ಜಿಟಿ ಮಳೆಯಾಗಿದ್ದರಿಂದಲೂ ತರಕಾರಿ ತರಲು ಸಮಸ್ಯೆ ಆಗಿದೆ. ಇದರಿಂದ ಆವಕ ಕಡಿಮೆಯಾಗಿದ್ದು, ದರ ಹೆಚ್ಚಳಕ್ಕೆ ಕಾರಣವಾಗಿದೆ’ ಎನ್ನುತ್ತಾರೆ ತಕರಾರಿ ವ್ಯಾಪಾರಿ ಮಹ್ಮದ್ ಇಮ್ರಾನ್.</p>.<p class="Subhead"><strong>ಸೊಪ್ಪುಗಳ ದರ: </strong>ತರಕಾರಿಗಳ ಜೊತೆಗೆ ಸೊಪ್ಪುಗಳ ಬೆಲೆಯೂ ಏರಿಕೆಯಾಗಿದೆ. ಪಾಲಕ್ ಸೊಪ್ಪು ₹20ಗೆ ಮೂರು ಕಟ್ಟು, ಪುದೀನಾ ₹30, ಕೋಂತಬರಿ ₹30 ಒಂದು ಕಟ್ಟು, ಸಬ್ಬಸಗಿ ₹30ಗೆ 2 ಕಟ್ಟು, ರಾಜಗಿರಿ ಸೊಪ್ಪು ₹20ಗೆ 3 ಕಟ್ಟು, ಮೆಂತ್ಯೆ ₹50ಗೆ 2 ಕಟ್ಟು, ಪುಂಡಿ ಪಲ್ಯೆ ಮಾತ್ರ ₹20ಗೆ 4 ಕಟ್ಟು ಮಾರುಕಟ್ಟೆಯಲ್ಲಿ ಸಿಗುತ್ತಿದೆ. ಸೊಪ್ಪುಗಳಲ್ಲಿ ಮೆಂತ್ಯೆಗೆ ಹೆಚ್ಚಿನ ಬೇಡಿಕೆ ಇದೆ. ಇದರಿಂದ ದರವೂ ಜಾಸ್ತಿ ಇದೆ.</p>.<p class="Subhead">ಹಣ್ಣುಗಳ ದರ: ಒಂದು ಸೇಬು ಹಣ್ಣು ದೊಡ್ಡ ಗಾತ್ರದು ₹20, ಸಣ್ಣಗಾತ್ರದ್ದು ₹15 ಇದೆ. ಒಂದು ಮೊಸಂಬಿ ₹10–15, ದಾಳಿಂಬೆ ಹಣ್ಣು ಕೆ.ಜಿಗೆ ₹150–180ರ ತನಕ ದರ ಇದೆ. ದ್ರಾಕ್ಷಿ ₹80 ಕೆ.ಜಿ ಇದೆ. ಪಚ್ಚೆ ಬಾಳೆ ಹಣ್ಣು ಒಂದು ಡಜನ್ ₹40 ಬೆಲೆ ಇದೆ.ಡ್ರ್ಯಾಗನ್ ಹಣ್ಣು ₹150 ಕೆಜಿ, ಪೇರಲ ₹40 ಕೆಜಿ ಇದೆ.</p>.<p class="Subhead">***</p>.<p><strong>ತರಕಾರಿ ದರ</strong>(ಪ್ರತಿ ಕೆ.ಜಿಗೆ ₹ಗಳಲ್ಲಿ)</p>.<p><strong>ಟೊಮೆಟೊ</strong>; 20-30</p>.<p><strong>ಬದನೆಕಾಯಿ</strong>; 55–60</p>.<p><strong>ಬೆಂಡೆಕಾಯಿ</strong>; 35–40</p>.<p><strong>ದೊಣ್ಣೆಮೆಣಸಿನಕಾಯಿ</strong>; 55–60</p>.<p><strong>ಆಲೂಗಡ್ಡೆ</strong>; 25-30</p>.<p><strong>ಈರುಳ್ಳಿ</strong>; 35–40</p>.<p><strong>ಎಲೆಕೋಸು</strong>; 25–30</p>.<p><strong>ಹೂಕೋಸು</strong>; 35–40</p>.<p><strong>ಚವಳೆಕಾಯಿ</strong>; 55–60</p>.<p><strong>ಬೀನ್ಸ್</strong>; 55–60</p>.<p><strong>ಗಜ್ಜರಿ</strong>; 60-70</p>.<p><strong>ಸೌತೆಕಾಯಿ</strong>; 35–40</p>.<p><strong>ಮೂಲಂಗಿ</strong>; 30-35</p>.<p><strong>ಮೆಣಸಿನಕಾಯಿ</strong>; 55-60</p>.<p><strong>ಸೋರೆಕಾಯಿ</strong>; 25–30</p>.<p><strong>ಬಿಟ್ರೂಟ್</strong>; 40-45</p>.<p><strong>ಹೀರೆಕಾಯಿ</strong>; 55-60</p>.<p><strong>ಹಾಗಲಕಾಯಿ</strong>; 55-60</p>.<p><strong>ತೊಂಡೆಕಾಯಿ</strong>; 35-40</p>.<p><strong>ಅವರೆಕಾಯಿ</strong>; 55–60</p>.<p>***</p>.<p>ತರಕಾರಿ ದರ ಏರಿಕೆಯಾಗಿದ್ದರಿಂದ ಗ್ರಾಹಕರು ಚೌಕಾಶಿ ಮಾಡುತ್ತಿದ್ದಾರೆ. ಆದರೆ, ತರಕಾರಿಯೇ ಮಾರುಕಟ್ಟೆಗೆ ಬರುತ್ತಿಲ್ಲ. ಇದರಿಂದ ಸಮಸ್ಯೆ ಆಗುತ್ತಿದೆ.<br /><em><strong>-ಪೂಜಾ ಗೋವಿಂದ, ತರಕಾರಿ ವ್ಯಾಪಾರಿ</strong></em></p>.<p>***</p>.<p>ಮಳೆ ಕಾರಣದಿಂದ ಹಣ್ಣುಗಳು ಕೊಳೆತು ಹೋಗುತ್ತಿವೆ. ಇದರಿಂದ ಕೆಜಿ ಲೆಕ್ಕದಲ್ಲಿ ದರ ಏರಿಕೆಯಾಗುತ್ತಿದೆ. ಮಾವಿನ ಸಿಸನ್ ಬಹುತೇಕ ಮುಗಿದಿದೆ.<br /><em><strong>-ಮೆಹಬೂಬ್, ಹಣ್ಣುಗಳ ವ್ಯಾಪಾರಿ</strong></em></p>.<p>***</p>.<p>ತರಕಾರಿ ದರ ಏರಿಕೆಯಿಂದ ಹೊರೆ ಆಗಲಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ದರ ಏರಿಕೆಯಾಗಲಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.<br /><em><strong>-ಜಗದೀಶ ಕಲ್ಯಾಣಿ, ಗ್ರಾಹಕ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ: </strong>ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಕಳೆದ ಒಂದು ವಾರದಲ್ಲಿ ಆಗಾಗ ಜಿಟಿ ಜಿಟಿ ಮಳೆಯಾಗುತ್ತಿದ್ದು, ತರಕಾರಿ ಮಾರುಕಟ್ಟೆಗಳಲ್ಲಿ ಆವಕ ಕಡಿಮೆಯಾಗಿದೆ. ಇದರಿಂದ ತರಕಾರಿ ದರ ಏರಿಕೆಯಾಗಿದೆ.</p>.<p>ಕಳೆದ ವಾರ ತರಕಾರಿ ದರದಲ್ಲಿ ಏರಿಳಿಕೆಯಾಗಿದ್ದು, ಗ್ರಾಹಕರಿಗೆ ಹೊರೆಯಾಗಿರಲಿಲ್ಲ. ಈಗ ದರ ಏರಿಕೆಯಾಗಿದ್ದು, ಶ್ರಾವಣ ಮಾಸದ ಮುನ್ನವೇ ದರ ಸಮರ ನಡೆದಿದೆ.</p>.<p>ಜಿಟಿಜಿಟಿ ಮಳೆ ಪ್ರಭಾವದಿಂದ ತರಕಾರಿ ಬಿಡಿಸಲು ಆಗುತ್ತಿಲ್ಲ. ಇದರಿಂದ ಹಳ್ಳಿಗಳಿಂದ ಮಾರುಕಟ್ಟೆಗೆ ತರಕಾರಿ ಬರುತ್ತಿಲ್ಲ. ಇದು ಆವಕ ಕಡಿಮೆಯಾಗಲು ಕಾರಣವಾಗಿದೆ.</p>.<p>ಟೊಮೆಟೊ, ಆಲೂಗಡ್ಡೆ, ಎಲೆಕೋಸು, ಸೋರೆಕಾಯಿ ಬಿಟ್ಟು, ಉಳಿದೆಲ್ಲ ತರಕಾರಿ ದರ ಏರಿಕೆಯಾಗಿದೆ. ಇದರಿಂದ ಗ್ರಾಹಕರ ಬೇಬಿಗೆ ಕತ್ತರಿ ಹಾಕಿದಂತೆ ಆಗಲಿದೆ. ಶುಂಠಿ ಕೆಜಿಗೆ ₹60 ಇದ್ದು, ಬೆಳ್ಳೋಳ್ಳಿ ಕೆಜಿಗೆ ₹100 ಇದೆ.</p>.<p>ಮುಂದಿನ ವಾರದಿಂದ ಶ್ರಾವಣ ಮಾಸ ಆರಂಭವಾಗಲಿದ್ದು, ತರಕಾರಿಗಳ ದರ ಮತ್ತೆ ಏರಿಕೆಯಾಗುವ ಸಾಧ್ಯತೆ ಇದೆ. ಮಾಂಸಹಾರ ಸೇವನೆ ಬಹುತೇಕ ಕಡಿಮೆಯಾಗಲಿದ್ದು, ಸಸ್ಯಹಾರ ಹೆಚ್ಚು ಸೇವನೆ ಮಾಡಲಿದ್ದಾರೆ. ಇದು ಕೂಡ ದರ ಏರಿಕೆಗೆ ಕಾರಣವಾಗಲಿದೆ ಎಂದು ವ್ಯಾಪಾರಿಗಳು ಹೇಳುವ ಮಾತು.</p>.<p>‘ಜಿಲ್ಲೆಯಲ್ಲಿ ತರಕಾರಿ ಬೆಳೆಯುವ ತಾಲ್ಲೂಕುಗಳಲ್ಲಿ ಹೆಚ್ಚಿನ ಮಳೆಯಾಗಿದೆ. ಜೊತೆಗೆ ಜಿಟಿ ಜಿಟಿ ಮಳೆಯಾಗಿದ್ದರಿಂದಲೂ ತರಕಾರಿ ತರಲು ಸಮಸ್ಯೆ ಆಗಿದೆ. ಇದರಿಂದ ಆವಕ ಕಡಿಮೆಯಾಗಿದ್ದು, ದರ ಹೆಚ್ಚಳಕ್ಕೆ ಕಾರಣವಾಗಿದೆ’ ಎನ್ನುತ್ತಾರೆ ತಕರಾರಿ ವ್ಯಾಪಾರಿ ಮಹ್ಮದ್ ಇಮ್ರಾನ್.</p>.<p class="Subhead"><strong>ಸೊಪ್ಪುಗಳ ದರ: </strong>ತರಕಾರಿಗಳ ಜೊತೆಗೆ ಸೊಪ್ಪುಗಳ ಬೆಲೆಯೂ ಏರಿಕೆಯಾಗಿದೆ. ಪಾಲಕ್ ಸೊಪ್ಪು ₹20ಗೆ ಮೂರು ಕಟ್ಟು, ಪುದೀನಾ ₹30, ಕೋಂತಬರಿ ₹30 ಒಂದು ಕಟ್ಟು, ಸಬ್ಬಸಗಿ ₹30ಗೆ 2 ಕಟ್ಟು, ರಾಜಗಿರಿ ಸೊಪ್ಪು ₹20ಗೆ 3 ಕಟ್ಟು, ಮೆಂತ್ಯೆ ₹50ಗೆ 2 ಕಟ್ಟು, ಪುಂಡಿ ಪಲ್ಯೆ ಮಾತ್ರ ₹20ಗೆ 4 ಕಟ್ಟು ಮಾರುಕಟ್ಟೆಯಲ್ಲಿ ಸಿಗುತ್ತಿದೆ. ಸೊಪ್ಪುಗಳಲ್ಲಿ ಮೆಂತ್ಯೆಗೆ ಹೆಚ್ಚಿನ ಬೇಡಿಕೆ ಇದೆ. ಇದರಿಂದ ದರವೂ ಜಾಸ್ತಿ ಇದೆ.</p>.<p class="Subhead">ಹಣ್ಣುಗಳ ದರ: ಒಂದು ಸೇಬು ಹಣ್ಣು ದೊಡ್ಡ ಗಾತ್ರದು ₹20, ಸಣ್ಣಗಾತ್ರದ್ದು ₹15 ಇದೆ. ಒಂದು ಮೊಸಂಬಿ ₹10–15, ದಾಳಿಂಬೆ ಹಣ್ಣು ಕೆ.ಜಿಗೆ ₹150–180ರ ತನಕ ದರ ಇದೆ. ದ್ರಾಕ್ಷಿ ₹80 ಕೆ.ಜಿ ಇದೆ. ಪಚ್ಚೆ ಬಾಳೆ ಹಣ್ಣು ಒಂದು ಡಜನ್ ₹40 ಬೆಲೆ ಇದೆ.ಡ್ರ್ಯಾಗನ್ ಹಣ್ಣು ₹150 ಕೆಜಿ, ಪೇರಲ ₹40 ಕೆಜಿ ಇದೆ.</p>.<p class="Subhead">***</p>.<p><strong>ತರಕಾರಿ ದರ</strong>(ಪ್ರತಿ ಕೆ.ಜಿಗೆ ₹ಗಳಲ್ಲಿ)</p>.<p><strong>ಟೊಮೆಟೊ</strong>; 20-30</p>.<p><strong>ಬದನೆಕಾಯಿ</strong>; 55–60</p>.<p><strong>ಬೆಂಡೆಕಾಯಿ</strong>; 35–40</p>.<p><strong>ದೊಣ್ಣೆಮೆಣಸಿನಕಾಯಿ</strong>; 55–60</p>.<p><strong>ಆಲೂಗಡ್ಡೆ</strong>; 25-30</p>.<p><strong>ಈರುಳ್ಳಿ</strong>; 35–40</p>.<p><strong>ಎಲೆಕೋಸು</strong>; 25–30</p>.<p><strong>ಹೂಕೋಸು</strong>; 35–40</p>.<p><strong>ಚವಳೆಕಾಯಿ</strong>; 55–60</p>.<p><strong>ಬೀನ್ಸ್</strong>; 55–60</p>.<p><strong>ಗಜ್ಜರಿ</strong>; 60-70</p>.<p><strong>ಸೌತೆಕಾಯಿ</strong>; 35–40</p>.<p><strong>ಮೂಲಂಗಿ</strong>; 30-35</p>.<p><strong>ಮೆಣಸಿನಕಾಯಿ</strong>; 55-60</p>.<p><strong>ಸೋರೆಕಾಯಿ</strong>; 25–30</p>.<p><strong>ಬಿಟ್ರೂಟ್</strong>; 40-45</p>.<p><strong>ಹೀರೆಕಾಯಿ</strong>; 55-60</p>.<p><strong>ಹಾಗಲಕಾಯಿ</strong>; 55-60</p>.<p><strong>ತೊಂಡೆಕಾಯಿ</strong>; 35-40</p>.<p><strong>ಅವರೆಕಾಯಿ</strong>; 55–60</p>.<p>***</p>.<p>ತರಕಾರಿ ದರ ಏರಿಕೆಯಾಗಿದ್ದರಿಂದ ಗ್ರಾಹಕರು ಚೌಕಾಶಿ ಮಾಡುತ್ತಿದ್ದಾರೆ. ಆದರೆ, ತರಕಾರಿಯೇ ಮಾರುಕಟ್ಟೆಗೆ ಬರುತ್ತಿಲ್ಲ. ಇದರಿಂದ ಸಮಸ್ಯೆ ಆಗುತ್ತಿದೆ.<br /><em><strong>-ಪೂಜಾ ಗೋವಿಂದ, ತರಕಾರಿ ವ್ಯಾಪಾರಿ</strong></em></p>.<p>***</p>.<p>ಮಳೆ ಕಾರಣದಿಂದ ಹಣ್ಣುಗಳು ಕೊಳೆತು ಹೋಗುತ್ತಿವೆ. ಇದರಿಂದ ಕೆಜಿ ಲೆಕ್ಕದಲ್ಲಿ ದರ ಏರಿಕೆಯಾಗುತ್ತಿದೆ. ಮಾವಿನ ಸಿಸನ್ ಬಹುತೇಕ ಮುಗಿದಿದೆ.<br /><em><strong>-ಮೆಹಬೂಬ್, ಹಣ್ಣುಗಳ ವ್ಯಾಪಾರಿ</strong></em></p>.<p>***</p>.<p>ತರಕಾರಿ ದರ ಏರಿಕೆಯಿಂದ ಹೊರೆ ಆಗಲಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ದರ ಏರಿಕೆಯಾಗಲಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.<br /><em><strong>-ಜಗದೀಶ ಕಲ್ಯಾಣಿ, ಗ್ರಾಹಕ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>