<p><strong>ಯಾದಗಿರಿ</strong>: ಯಾದಗಿರಿ ಗಂಜ್ ರಸ್ತೆಯಿಂದ ಮೈಲಾಪುರ ಸಂಪರ್ಕಿಸುವ ರಸ್ತೆ ಕಾಮಗಾರಿಗೆ ₹4.18 ಕೋಟಿ ಮಂಜೂರು ಆಗಿ ಡಾಂಬರೀಕರಣವಾಗಿದ್ದರೂ ಪ್ರಯಾಣಿಕರ ಗೋಳು ಮಾತ್ರ ತಪ್ಪಿಲ್ಲ.</p>.<p>ರಸ್ತೆ ಡಾಂಬರೀಕರಣವಾಗಿದ್ದರೂ ಅಲ್ಲಲ್ಲಿ ಕಿರು ಸೇತುವೆಗಾಗಿ ನಿರ್ಮಿಸಲು ಬಿಟ್ಟ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಇದರಿಂದ ಬೈಕ್, ಆಟೊ, ಟಂಟಂ, ಕಾರುಗಳ ಸವಾರರು ತೀವ್ರ ತೊಂದರೆ ಪಡುತ್ತಿದ್ದಾರೆ.</p>.<p><strong>ಮಳೆಗಾಲದಲ್ಲಿ ಮತ್ತಷ್ಟು ಹದಗೆಟ್ಟ ರಸ್ತೆ</strong></p>.<p>ಈಗ ಮಳೆಗಾಲವಾಗಿದ್ದರಿಂದ ಆಗಾಗ ತುಂತುರು ಮಳೆ ಸಿಂಚನವಾಗುತ್ತಿದ್ದು, ರಸ್ತೆಯೂಕೆಸರಿನಿಂದ ತುಂಬಿದೆ. ತಗ್ಗು ದಿನ್ನೆಗಳು ಬಿದ್ದು, ವಾಹನ ಸವಾರರು ಹತ್ತಿ ಇಳಿಯಬೇಕಾಗಿದೆ.</p>.<p>ವರ್ಕನಳ್ಳಿವರೆಗೆ ಮಾತ್ರ ಡಾಂಬರು ಹಾಕಲಾಗಿದ್ದು, ವರ್ಕನಳ್ಳಿಯಿಂದ ಮೈಲಾಪುರಕ್ಕೆ ತೆರಳುವ ಮಾರ್ಗ ಸಂಪೂರ್ಣ ಹಾಳಾಗಿದೆ. ಪ್ರತಿನಿತ್ಯ ನೂರಾರು ಜನರು ತಮ್ಮ ಹೊಲ, ಗದ್ದೆಗಳಿಗೆ ಇದೇ ಮಾರ್ಗದಲ್ಲಿ ತೆರಳುತ್ತಾರೆ. ಸರ್ಕಾರಕ್ಕೆ ಹಿಡಿ ಶಾಪ ಹಾಕಿಕೊಂಡು ಹೋಗುತ್ತಾರೆ.</p>.<p><strong>4 ಕಿ.ಮೀ ರಸ್ತೆ ಮಾತ್ರ ಪೂರ್ಣ</strong></p>.<p>ಯಾದಗಿರಿಯ ಗಂಜ್ ವೃತ್ತದಿಂದ 4 ಕಿ.ಮೀ ಅಂತರವಿರುವ ವರ್ಕನಳ್ಳಿಗೆ ಮಾತ್ರ ರಸ್ತೆ ಡಾಂಬರೀಕರವಾಗಿದ್ದು, ವರ್ಕನಳ್ಳಿಯಿಂದ ಮೈಲಾಪುರವರೆಗೆ ತಗ್ಗು ದಿನ್ನೆಗಳ ಮೇಲಾಟ ನಡೆದಿದೆ.</p>.<p>ಯಾದಗಿರಿಯಿಂದ ಮೈಲಾಪುರಕ್ಕೆ ತೆರಳಲು ವರ್ಕನಳ್ಳಿ ಅಡ್ಡರಸ್ತೆಯಾಗಿದ್ದು, ದುರಸ್ತಿ ಕಾಣದೇ ಸಂಪೂರ್ಣ ಹಾಳಾಗಿದೆ. ಇದರಿಂದ ಸವಾರರು ಒಂದು ಬಾರಿ ಬಂದರೆ ತಿರುಗಿ ದೂರವಾದರೂ ರಾಮಸಮುದ್ರ ಮಾರ್ಗವಾಗಿ ಯಾದಗಿರಿಗೆ ತೆರಳುತ್ತಾರೆ.</p>.<p><strong>ಭಾರಿ ವಾಹನಗಳ ಸಂಚಾರ</strong></p>.<p>ರಸ್ತೆ ಹದಗೆಟ್ಟಲು ಭಾರಿ ವಾಹನಗಳ ಸಂಚಾರವೂ ಕಾರಣವಾಗಿದೆ ಎನ್ನುತ್ತಾರೆ ವರ್ಕನಳ್ಳಿ ಗ್ರಾಮಸ್ಥರು.</p>.<p>ಯಾದಗಿರಿಯಿಂದ ಮೈಲಾಪುರ ವರೆಗೆ ತೆರಳುವ ಮಾರ್ಗದಲ್ಲಿ ಅನೇಕ ಕಂಕರ್ ಯಂತ್ರಗಳಿದ್ದು, ಪುಡಿಯನ್ನು ಸಾಗಿಸಲು ಭಾರಿ ವಾಹನಗಳು ಸಂಚಾರ ಮಾಡುತ್ತವೆ. ಇದರಿಂದ ಎಷ್ಟು ಗುಣಮಟ್ಟದ ರಸ್ತೆ ನಿರ್ಮಿಸಿದರೂ ಕೇವಲ ಒಂದು ವರ್ಷದಲ್ಲಿ ಡಾಂಬರು ಕಿತ್ತಿ ಹೋಗುತ್ತದೆ. ಈ ರಸ್ತೆಗೆ ಅನುದಾನ ಭರಪೂರ ಬಂದಿದೆ. ಆದರೆ, ಮತ್ತೆ ಮತ್ತೆ ದುರಸ್ತಿಯಾಗುತ್ತದೆಎನ್ನುವುದುಗ್ರಾಮಸ್ಥರ ದೂರಾಗಿದೆ.</p>.<p>‘ಕಳೆದ ಮೂರು ವರ್ಷದಲ್ಲಿ ಈ ರಸ್ತೆಯನ್ನು ಹಲವಾರು ಬಾರಿ ದುರಸ್ತಿ ಮಾಡಲಾಗಿದೆ. ಕೆಲವು ತಿಂಗಳು ಕಳೆದರೆ ಮತ್ತೆ ದುರಸ್ತಿಗೆ ಬರುತ್ತದೆ. ಗುತ್ತಿಗೆದಾರರಿಗೆ ಇದೊಂದು ಜೂಜಾಗಿದೆ. ರಸ್ತೆ ಹದಗೆಡುವುದು, ದುರಸ್ತಿ ಮಾಡುವುದು ಕೆಲಸವಾಗಿದೆ’ ಎಂದು ಗ್ರಾಮಸ್ಥರಾದ ಮೆಹಬೂಬ್, ಬಸವರಾಜ, ಮಲ್ಲಯ್ಯ ಹೇಳುತ್ತಾರೆ.</p>.<p>***</p>.<p><strong>ಒಂದೂವರೆ ವರ್ಷದಿಂದ ಬಾರದ ಬಸ್</strong></p>.<p>ಜಿಲ್ಲಾ ಕೇಂದ್ರದಿಂದ ವರ್ಕನಳ್ಳಿ ಕೇವಲ 4 ಕಿ.ಮೀ ಅಂತರವಿದ್ದರೂ ಇಲ್ಲಿಗೆ ಬಸ್ ಸಂಚಾರವಿಲ್ಲ. ಖಾಸಗಿ ವಾಹನ, ಬೈಕ್, ಟಂಟಂ, ಆಟೊಗಳಿಗೆ ಜನರಿಗೆ ಗತಿಯಾಗಿದೆ. ಆರೋಗ್ಯ ಸಮಸ್ಯೆಯಾದರೆ ಅಂಬುಲೆನ್ಸ್ ಬರಲು ಕೂಡ ರಸ್ತೆ ಹದಗೆಟ್ಟಿದ್ದರಿಂದ ಬರಲು ಸಾಕಷ್ಟು ಸಮಯ ತೆಗೆದುಕೊಳ್ಳಲಾಗುತ್ತಿದೆ.</p>.<p>‘ಈ ಹಿಂದೆ ಬಸ್ ಕಾರ್ಯಾಚರಣೆ ಮಾಡುತ್ತಿತ್ತು. ಆದರೆ, ಪ್ರಯಾಣಿಕರೇ ಬಸ್ಗೆ ಬರದ್ದರಿಂದ ಬಸ್ ನಿಲ್ಲಿಸಲಾಗಿದೆ. ಆದಾಯವೂ ಇಲ್ಲದಿದ್ದರಿಂದ ಬಸ್ ನಿಲ್ಲಿಸಲಾಗಿದೆ’ ಎಂದು ಸಾರಿಗೆ ಅಧಿಕಾರಿಗಳು ಹೇಳುತ್ತಾರೆ.</p>.<p>***</p>.<p>ವರ್ಕನಳ್ಳಿ–ಮೈಲಾಪುರ ರಸ್ತೆ ಕೆಲ ಭಾಗದಲ್ಲಿ ನ್ಯಾಯಾಲಯದಲ್ಲಿ ದಾವೆ ಇದೆ. ಇದರಿಂದ ರಸ್ತೆ ದುರಸ್ತಿಗೆ ಸಮಸ್ಯೆ ಆಗಿದೆ<br /><strong>ವೆಂಕಟರೆಡ್ಡಿ ಮುದ್ನಾಳ, ಯಾದಗಿರಿ ಶಾಸಕ</strong></p>.<p>***</p>.<p>ವರ್ಕನಳ್ಳಿ–ಮೈಲಾಪುರ ರಸ್ತೆ ಹಾಳಾಗಿರುವ ಬಗ್ಗೆ ಪರಿಶೀಲಿಸಿ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು<br /><strong>ಅಮೀನ್ ಮುಕ್ತಾರ, ಪಿಡಬ್ಲ್ಯೂಡಿ ಎಇ</strong></p>.<p>***</p>.<p>ಯಾದಗಿರಿಯ ಮೈಲಾಪುರ ಅಗಸಿಯಿಂದ ಮಸ್ಕನಳ್ಳಿವರೆಗೆ ಬಸ್ ಕಾರ್ಯಾಚರಣೆ ಮಾಡಲಾಗುತ್ತಿತ್ತು. ಆದರೆ, ಪ್ರಯಾಣಿಕರು ಬಾರದ ಬಸ್ ನಿಲ್ಲಿಸಲಾಗಿದೆ<br /><strong>ಶಿವಶಂಕರ ಬಿರಾದಾರ್, ಟ್ರಾಫಿಕ್ ಇನ್ಸ್ಪೆಕ್ಟರ್</strong></p>.<p>***</p>.<p>ಅಧಿಕಾರಿಗಳು, ಜನಪ್ರತಿನಿಧಿಗಳು ತಗ್ಗು ಬಿದ್ದ ರಸ್ತೆಯನ್ನು ದುರಸ್ತಿಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು<br /><strong>ಮಹಮ್ಮದ್ ಇಸ್ಮಾಯಿಲ್, ಗ್ರಾಮಸ್ಥ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ</strong>: ಯಾದಗಿರಿ ಗಂಜ್ ರಸ್ತೆಯಿಂದ ಮೈಲಾಪುರ ಸಂಪರ್ಕಿಸುವ ರಸ್ತೆ ಕಾಮಗಾರಿಗೆ ₹4.18 ಕೋಟಿ ಮಂಜೂರು ಆಗಿ ಡಾಂಬರೀಕರಣವಾಗಿದ್ದರೂ ಪ್ರಯಾಣಿಕರ ಗೋಳು ಮಾತ್ರ ತಪ್ಪಿಲ್ಲ.</p>.<p>ರಸ್ತೆ ಡಾಂಬರೀಕರಣವಾಗಿದ್ದರೂ ಅಲ್ಲಲ್ಲಿ ಕಿರು ಸೇತುವೆಗಾಗಿ ನಿರ್ಮಿಸಲು ಬಿಟ್ಟ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಇದರಿಂದ ಬೈಕ್, ಆಟೊ, ಟಂಟಂ, ಕಾರುಗಳ ಸವಾರರು ತೀವ್ರ ತೊಂದರೆ ಪಡುತ್ತಿದ್ದಾರೆ.</p>.<p><strong>ಮಳೆಗಾಲದಲ್ಲಿ ಮತ್ತಷ್ಟು ಹದಗೆಟ್ಟ ರಸ್ತೆ</strong></p>.<p>ಈಗ ಮಳೆಗಾಲವಾಗಿದ್ದರಿಂದ ಆಗಾಗ ತುಂತುರು ಮಳೆ ಸಿಂಚನವಾಗುತ್ತಿದ್ದು, ರಸ್ತೆಯೂಕೆಸರಿನಿಂದ ತುಂಬಿದೆ. ತಗ್ಗು ದಿನ್ನೆಗಳು ಬಿದ್ದು, ವಾಹನ ಸವಾರರು ಹತ್ತಿ ಇಳಿಯಬೇಕಾಗಿದೆ.</p>.<p>ವರ್ಕನಳ್ಳಿವರೆಗೆ ಮಾತ್ರ ಡಾಂಬರು ಹಾಕಲಾಗಿದ್ದು, ವರ್ಕನಳ್ಳಿಯಿಂದ ಮೈಲಾಪುರಕ್ಕೆ ತೆರಳುವ ಮಾರ್ಗ ಸಂಪೂರ್ಣ ಹಾಳಾಗಿದೆ. ಪ್ರತಿನಿತ್ಯ ನೂರಾರು ಜನರು ತಮ್ಮ ಹೊಲ, ಗದ್ದೆಗಳಿಗೆ ಇದೇ ಮಾರ್ಗದಲ್ಲಿ ತೆರಳುತ್ತಾರೆ. ಸರ್ಕಾರಕ್ಕೆ ಹಿಡಿ ಶಾಪ ಹಾಕಿಕೊಂಡು ಹೋಗುತ್ತಾರೆ.</p>.<p><strong>4 ಕಿ.ಮೀ ರಸ್ತೆ ಮಾತ್ರ ಪೂರ್ಣ</strong></p>.<p>ಯಾದಗಿರಿಯ ಗಂಜ್ ವೃತ್ತದಿಂದ 4 ಕಿ.ಮೀ ಅಂತರವಿರುವ ವರ್ಕನಳ್ಳಿಗೆ ಮಾತ್ರ ರಸ್ತೆ ಡಾಂಬರೀಕರವಾಗಿದ್ದು, ವರ್ಕನಳ್ಳಿಯಿಂದ ಮೈಲಾಪುರವರೆಗೆ ತಗ್ಗು ದಿನ್ನೆಗಳ ಮೇಲಾಟ ನಡೆದಿದೆ.</p>.<p>ಯಾದಗಿರಿಯಿಂದ ಮೈಲಾಪುರಕ್ಕೆ ತೆರಳಲು ವರ್ಕನಳ್ಳಿ ಅಡ್ಡರಸ್ತೆಯಾಗಿದ್ದು, ದುರಸ್ತಿ ಕಾಣದೇ ಸಂಪೂರ್ಣ ಹಾಳಾಗಿದೆ. ಇದರಿಂದ ಸವಾರರು ಒಂದು ಬಾರಿ ಬಂದರೆ ತಿರುಗಿ ದೂರವಾದರೂ ರಾಮಸಮುದ್ರ ಮಾರ್ಗವಾಗಿ ಯಾದಗಿರಿಗೆ ತೆರಳುತ್ತಾರೆ.</p>.<p><strong>ಭಾರಿ ವಾಹನಗಳ ಸಂಚಾರ</strong></p>.<p>ರಸ್ತೆ ಹದಗೆಟ್ಟಲು ಭಾರಿ ವಾಹನಗಳ ಸಂಚಾರವೂ ಕಾರಣವಾಗಿದೆ ಎನ್ನುತ್ತಾರೆ ವರ್ಕನಳ್ಳಿ ಗ್ರಾಮಸ್ಥರು.</p>.<p>ಯಾದಗಿರಿಯಿಂದ ಮೈಲಾಪುರ ವರೆಗೆ ತೆರಳುವ ಮಾರ್ಗದಲ್ಲಿ ಅನೇಕ ಕಂಕರ್ ಯಂತ್ರಗಳಿದ್ದು, ಪುಡಿಯನ್ನು ಸಾಗಿಸಲು ಭಾರಿ ವಾಹನಗಳು ಸಂಚಾರ ಮಾಡುತ್ತವೆ. ಇದರಿಂದ ಎಷ್ಟು ಗುಣಮಟ್ಟದ ರಸ್ತೆ ನಿರ್ಮಿಸಿದರೂ ಕೇವಲ ಒಂದು ವರ್ಷದಲ್ಲಿ ಡಾಂಬರು ಕಿತ್ತಿ ಹೋಗುತ್ತದೆ. ಈ ರಸ್ತೆಗೆ ಅನುದಾನ ಭರಪೂರ ಬಂದಿದೆ. ಆದರೆ, ಮತ್ತೆ ಮತ್ತೆ ದುರಸ್ತಿಯಾಗುತ್ತದೆಎನ್ನುವುದುಗ್ರಾಮಸ್ಥರ ದೂರಾಗಿದೆ.</p>.<p>‘ಕಳೆದ ಮೂರು ವರ್ಷದಲ್ಲಿ ಈ ರಸ್ತೆಯನ್ನು ಹಲವಾರು ಬಾರಿ ದುರಸ್ತಿ ಮಾಡಲಾಗಿದೆ. ಕೆಲವು ತಿಂಗಳು ಕಳೆದರೆ ಮತ್ತೆ ದುರಸ್ತಿಗೆ ಬರುತ್ತದೆ. ಗುತ್ತಿಗೆದಾರರಿಗೆ ಇದೊಂದು ಜೂಜಾಗಿದೆ. ರಸ್ತೆ ಹದಗೆಡುವುದು, ದುರಸ್ತಿ ಮಾಡುವುದು ಕೆಲಸವಾಗಿದೆ’ ಎಂದು ಗ್ರಾಮಸ್ಥರಾದ ಮೆಹಬೂಬ್, ಬಸವರಾಜ, ಮಲ್ಲಯ್ಯ ಹೇಳುತ್ತಾರೆ.</p>.<p>***</p>.<p><strong>ಒಂದೂವರೆ ವರ್ಷದಿಂದ ಬಾರದ ಬಸ್</strong></p>.<p>ಜಿಲ್ಲಾ ಕೇಂದ್ರದಿಂದ ವರ್ಕನಳ್ಳಿ ಕೇವಲ 4 ಕಿ.ಮೀ ಅಂತರವಿದ್ದರೂ ಇಲ್ಲಿಗೆ ಬಸ್ ಸಂಚಾರವಿಲ್ಲ. ಖಾಸಗಿ ವಾಹನ, ಬೈಕ್, ಟಂಟಂ, ಆಟೊಗಳಿಗೆ ಜನರಿಗೆ ಗತಿಯಾಗಿದೆ. ಆರೋಗ್ಯ ಸಮಸ್ಯೆಯಾದರೆ ಅಂಬುಲೆನ್ಸ್ ಬರಲು ಕೂಡ ರಸ್ತೆ ಹದಗೆಟ್ಟಿದ್ದರಿಂದ ಬರಲು ಸಾಕಷ್ಟು ಸಮಯ ತೆಗೆದುಕೊಳ್ಳಲಾಗುತ್ತಿದೆ.</p>.<p>‘ಈ ಹಿಂದೆ ಬಸ್ ಕಾರ್ಯಾಚರಣೆ ಮಾಡುತ್ತಿತ್ತು. ಆದರೆ, ಪ್ರಯಾಣಿಕರೇ ಬಸ್ಗೆ ಬರದ್ದರಿಂದ ಬಸ್ ನಿಲ್ಲಿಸಲಾಗಿದೆ. ಆದಾಯವೂ ಇಲ್ಲದಿದ್ದರಿಂದ ಬಸ್ ನಿಲ್ಲಿಸಲಾಗಿದೆ’ ಎಂದು ಸಾರಿಗೆ ಅಧಿಕಾರಿಗಳು ಹೇಳುತ್ತಾರೆ.</p>.<p>***</p>.<p>ವರ್ಕನಳ್ಳಿ–ಮೈಲಾಪುರ ರಸ್ತೆ ಕೆಲ ಭಾಗದಲ್ಲಿ ನ್ಯಾಯಾಲಯದಲ್ಲಿ ದಾವೆ ಇದೆ. ಇದರಿಂದ ರಸ್ತೆ ದುರಸ್ತಿಗೆ ಸಮಸ್ಯೆ ಆಗಿದೆ<br /><strong>ವೆಂಕಟರೆಡ್ಡಿ ಮುದ್ನಾಳ, ಯಾದಗಿರಿ ಶಾಸಕ</strong></p>.<p>***</p>.<p>ವರ್ಕನಳ್ಳಿ–ಮೈಲಾಪುರ ರಸ್ತೆ ಹಾಳಾಗಿರುವ ಬಗ್ಗೆ ಪರಿಶೀಲಿಸಿ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು<br /><strong>ಅಮೀನ್ ಮುಕ್ತಾರ, ಪಿಡಬ್ಲ್ಯೂಡಿ ಎಇ</strong></p>.<p>***</p>.<p>ಯಾದಗಿರಿಯ ಮೈಲಾಪುರ ಅಗಸಿಯಿಂದ ಮಸ್ಕನಳ್ಳಿವರೆಗೆ ಬಸ್ ಕಾರ್ಯಾಚರಣೆ ಮಾಡಲಾಗುತ್ತಿತ್ತು. ಆದರೆ, ಪ್ರಯಾಣಿಕರು ಬಾರದ ಬಸ್ ನಿಲ್ಲಿಸಲಾಗಿದೆ<br /><strong>ಶಿವಶಂಕರ ಬಿರಾದಾರ್, ಟ್ರಾಫಿಕ್ ಇನ್ಸ್ಪೆಕ್ಟರ್</strong></p>.<p>***</p>.<p>ಅಧಿಕಾರಿಗಳು, ಜನಪ್ರತಿನಿಧಿಗಳು ತಗ್ಗು ಬಿದ್ದ ರಸ್ತೆಯನ್ನು ದುರಸ್ತಿಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು<br /><strong>ಮಹಮ್ಮದ್ ಇಸ್ಮಾಯಿಲ್, ಗ್ರಾಮಸ್ಥ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>