<p><strong>ಯಾದಗಿರಿ</strong>: ನಗರ ಪೊಲೀಸ್ ಠಾಣೆಯನ್ನು ಕೆಡವಲು ಪೊಲೀಸ್ ಇಲಾಖೆ ಟೆಂಡರ್ ಕರೆಯಲಾಗಿದೆ ಎನ್ನುವ ವಿಷಯ ಜಿಲ್ಲೆಯಲ್ಲಿ ಈಗ ಚರ್ಚೆಯ ವಿಷಯವಾಗಿದೆ. ಈ ಬಗ್ಗೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.</p>.<p>ನಿವೃತ್ತ ಉಪನ್ಯಾಸಕ ಸಿ.ಎಂ. ಪಟ್ಟೇದಾರ್ ‘ನಗರ ಪೊಲೀಸ್ ಠಾಣೆ ಧಾರ್ಮಿಕ ಸ್ಥಳವಲ್ಲ. ಅದೊಂದು ಭಾವನಾತ್ಮಕ ಕಟ್ಟಡವೂ ಅಲ್ಲ. ಹೀಗಾಗಿ ಇದನ್ನು ಕೆಡವಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡುವುದು ನನಗೇನೂ ತಪ್ಪು ಅನಿಸುವುದಿಲ್ಲ’ ಎನ್ನುತ್ತಾರೆ.</p>.<p>‘ಮಂದಿರ, ಮಸೀದಿ, ಚರ್ಚ್ ಆಗಿದ್ದರೆ ಅದೊಂದು ಭಾವನಾತ್ಮಕ ವಿಷಯವಾಗುತ್ತಿತ್ತು. ಆದರೆ, ಇಂಥ ಸನ್ನಿವೇಶ ಇಲ್ಲಿಲ್ಲ. ಪೊಲೀಸ್ ಇಲಾಖೆ ಈ ಕಟ್ಟಡವನ್ನು ಕೆಡವಲು ಕೆಟ್ಟ ಉದ್ದೇಶಗಳೇನು ಇಲ್ಲ. ನೂತನ ಕಟ್ಟಡ ನಿರ್ಮಾಣಕ್ಕೆ ನಮ್ಮ ಸ್ವಾಗತವಿದೆ’ ಎಂದು ತಿಳಿಸುತ್ತಾರೆ.</p>.<p>ಸಾಹಿತಿ ಅಯ್ಯಣ್ಣ ಹುಂಡೇಕರ್ ‘ನಗರದ ಹೃದಯ ಭಾಗವಾಗ ಗಾಂಧಿ ವೃತ್ತದ ನಗರ ಪೊಲೀಸ್ ಠಾಣೆ ಕಳಸಪ್ರಾಯವಾಗಿದೆ. ಕೆಲ ಧಾರ್ಮಿಕ ಆಚರಣೆಗಳನ್ನೇ ಇಲ್ಲಿಂದಲೇ ಆರಂಭಿಸಲಾಗುತ್ತಿದೆ’ ಎಂದು ತಿಳಿಸುತ್ತಾರೆ.</p>.<p>‘ಹೋಳಿ ಹಬ್ಬವನ್ನು ಆಚರಿಸುವ ಮುನ್ನ ಪೊಲೀಸ್ ಠಾಣೆಗೆ ತೆರಳಿ ಅಲ್ಲಿಂದ ಮೈಲಾಪುರ ಅಗಸಿಗೆ ಬಣ್ಣ ತರಲು ತೆರಳಲಾಗುತ್ತಿತ್ತು. ಅಂಥ ಧಾರ್ಮಿಕ ಭಾವನಾತ್ಮಕ ವಿಷಯವನ್ನು ಈ ಕಟ್ಟಡ ಒಳಗೊಂಡಿದೆ’ ಎಂದು ಮಾಹಿತಿ ನೀಡುತ್ತಾರೆ.</p>.<p>‘ನೂರಾರು ವರ್ಷಗಳ ಇತಿಹಾಸವಿರುವ ಕಟ್ಟಡ ನೆಲಸಮ ಮಾಡುವುದು ಎಷ್ಟು ಮಾತ್ರವೂ ಸರಿಯಲ್ಲ. ಕಟ್ಟಡದ ನಾಲ್ಕು ದಿಕ್ಕುಗಳಿಂದಲೂ ಅಕ್ಕಪಕ್ಕದ ಘಟನೆಗಳನ್ನುಇಲ್ಲಿಂದಲೇ ವೀಕ್ಷಣೆ ಮಾಡಬಹುದಾಗಿದೆ. ನಗರಕ್ಕೆ ಇದು ಐತಿಹಾಸಿಕ ಶ್ರೇಯಸ್ಸು ಆಗಿದೆ. ಬ್ರಿಟಿಷರುಈ ಕಟ್ಟಡವನ್ನು ನಿರ್ಮಿಸಿದ್ದಾರೆ. ಈಗಿನ ಸರ್ಕಾರವಲ್ಲ. ಈ ಕಟ್ಟಡ ತೆರವುಗೊಂಡರೆ ಗಾಂಧಿ ವೃತ್ತದ ಮಹತ್ವ ಕಳೆಗುಂದುತ್ತದೆ’ ಎನ್ನುತ್ತಾರೆ ಅವರು.</p>.<p>**<br />ಪೊಲೀಸ್ ಇಲಾಖೆ ಕೆಟ್ಟದ್ದೇನೂ ಮಾಡುತ್ತಿಲ್ಲ. ನಗರ ಠಾಣೆಯನ್ನು ಕೆಡವಿ ನೂತನ ಕಟ್ಟಡವನ್ನು ನಿರ್ಮಿಸಲು ಟೆಂಡರ್ ಕರೆಯಲಾಗುತ್ತಿದೆ. ಇದನ್ನು ಭಾವನಾತ್ಮಕವಾಗಿ ನೋಡಬಾರದು<br /><em><strong>-ಸಿ.ಎಂ. ಪಟ್ಟೇದಾರ್, ನಿವೃತ್ತ ಉಪನ್ಯಾಸಕ</strong></em></p>.<p>**</p>.<p>ನಗರ ಪೊಲೀಸ್ ಠಾಣೆ ನಗರದ ಮಧ್ಯ ಭಾಗದಲ್ಲಿ ಎಲ್ಲರಿಗೂ ಅನುಕೂಲವಾಗುವಂತೆ ಈ ಕಟ್ಟಡವಿದ್ದು, ಇದನ್ನು ಯಾವುದೇ ಕಾರಣಕ್ಕೂ ನೆಲಸಮಗೊಳಿಸಬಾರದು<br /><em><strong>-ಅಯ್ಯಣ್ಣ ಹುಂಡೇಕರ್, ಸಾಹಿತಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ</strong>: ನಗರ ಪೊಲೀಸ್ ಠಾಣೆಯನ್ನು ಕೆಡವಲು ಪೊಲೀಸ್ ಇಲಾಖೆ ಟೆಂಡರ್ ಕರೆಯಲಾಗಿದೆ ಎನ್ನುವ ವಿಷಯ ಜಿಲ್ಲೆಯಲ್ಲಿ ಈಗ ಚರ್ಚೆಯ ವಿಷಯವಾಗಿದೆ. ಈ ಬಗ್ಗೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.</p>.<p>ನಿವೃತ್ತ ಉಪನ್ಯಾಸಕ ಸಿ.ಎಂ. ಪಟ್ಟೇದಾರ್ ‘ನಗರ ಪೊಲೀಸ್ ಠಾಣೆ ಧಾರ್ಮಿಕ ಸ್ಥಳವಲ್ಲ. ಅದೊಂದು ಭಾವನಾತ್ಮಕ ಕಟ್ಟಡವೂ ಅಲ್ಲ. ಹೀಗಾಗಿ ಇದನ್ನು ಕೆಡವಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡುವುದು ನನಗೇನೂ ತಪ್ಪು ಅನಿಸುವುದಿಲ್ಲ’ ಎನ್ನುತ್ತಾರೆ.</p>.<p>‘ಮಂದಿರ, ಮಸೀದಿ, ಚರ್ಚ್ ಆಗಿದ್ದರೆ ಅದೊಂದು ಭಾವನಾತ್ಮಕ ವಿಷಯವಾಗುತ್ತಿತ್ತು. ಆದರೆ, ಇಂಥ ಸನ್ನಿವೇಶ ಇಲ್ಲಿಲ್ಲ. ಪೊಲೀಸ್ ಇಲಾಖೆ ಈ ಕಟ್ಟಡವನ್ನು ಕೆಡವಲು ಕೆಟ್ಟ ಉದ್ದೇಶಗಳೇನು ಇಲ್ಲ. ನೂತನ ಕಟ್ಟಡ ನಿರ್ಮಾಣಕ್ಕೆ ನಮ್ಮ ಸ್ವಾಗತವಿದೆ’ ಎಂದು ತಿಳಿಸುತ್ತಾರೆ.</p>.<p>ಸಾಹಿತಿ ಅಯ್ಯಣ್ಣ ಹುಂಡೇಕರ್ ‘ನಗರದ ಹೃದಯ ಭಾಗವಾಗ ಗಾಂಧಿ ವೃತ್ತದ ನಗರ ಪೊಲೀಸ್ ಠಾಣೆ ಕಳಸಪ್ರಾಯವಾಗಿದೆ. ಕೆಲ ಧಾರ್ಮಿಕ ಆಚರಣೆಗಳನ್ನೇ ಇಲ್ಲಿಂದಲೇ ಆರಂಭಿಸಲಾಗುತ್ತಿದೆ’ ಎಂದು ತಿಳಿಸುತ್ತಾರೆ.</p>.<p>‘ಹೋಳಿ ಹಬ್ಬವನ್ನು ಆಚರಿಸುವ ಮುನ್ನ ಪೊಲೀಸ್ ಠಾಣೆಗೆ ತೆರಳಿ ಅಲ್ಲಿಂದ ಮೈಲಾಪುರ ಅಗಸಿಗೆ ಬಣ್ಣ ತರಲು ತೆರಳಲಾಗುತ್ತಿತ್ತು. ಅಂಥ ಧಾರ್ಮಿಕ ಭಾವನಾತ್ಮಕ ವಿಷಯವನ್ನು ಈ ಕಟ್ಟಡ ಒಳಗೊಂಡಿದೆ’ ಎಂದು ಮಾಹಿತಿ ನೀಡುತ್ತಾರೆ.</p>.<p>‘ನೂರಾರು ವರ್ಷಗಳ ಇತಿಹಾಸವಿರುವ ಕಟ್ಟಡ ನೆಲಸಮ ಮಾಡುವುದು ಎಷ್ಟು ಮಾತ್ರವೂ ಸರಿಯಲ್ಲ. ಕಟ್ಟಡದ ನಾಲ್ಕು ದಿಕ್ಕುಗಳಿಂದಲೂ ಅಕ್ಕಪಕ್ಕದ ಘಟನೆಗಳನ್ನುಇಲ್ಲಿಂದಲೇ ವೀಕ್ಷಣೆ ಮಾಡಬಹುದಾಗಿದೆ. ನಗರಕ್ಕೆ ಇದು ಐತಿಹಾಸಿಕ ಶ್ರೇಯಸ್ಸು ಆಗಿದೆ. ಬ್ರಿಟಿಷರುಈ ಕಟ್ಟಡವನ್ನು ನಿರ್ಮಿಸಿದ್ದಾರೆ. ಈಗಿನ ಸರ್ಕಾರವಲ್ಲ. ಈ ಕಟ್ಟಡ ತೆರವುಗೊಂಡರೆ ಗಾಂಧಿ ವೃತ್ತದ ಮಹತ್ವ ಕಳೆಗುಂದುತ್ತದೆ’ ಎನ್ನುತ್ತಾರೆ ಅವರು.</p>.<p>**<br />ಪೊಲೀಸ್ ಇಲಾಖೆ ಕೆಟ್ಟದ್ದೇನೂ ಮಾಡುತ್ತಿಲ್ಲ. ನಗರ ಠಾಣೆಯನ್ನು ಕೆಡವಿ ನೂತನ ಕಟ್ಟಡವನ್ನು ನಿರ್ಮಿಸಲು ಟೆಂಡರ್ ಕರೆಯಲಾಗುತ್ತಿದೆ. ಇದನ್ನು ಭಾವನಾತ್ಮಕವಾಗಿ ನೋಡಬಾರದು<br /><em><strong>-ಸಿ.ಎಂ. ಪಟ್ಟೇದಾರ್, ನಿವೃತ್ತ ಉಪನ್ಯಾಸಕ</strong></em></p>.<p>**</p>.<p>ನಗರ ಪೊಲೀಸ್ ಠಾಣೆ ನಗರದ ಮಧ್ಯ ಭಾಗದಲ್ಲಿ ಎಲ್ಲರಿಗೂ ಅನುಕೂಲವಾಗುವಂತೆ ಈ ಕಟ್ಟಡವಿದ್ದು, ಇದನ್ನು ಯಾವುದೇ ಕಾರಣಕ್ಕೂ ನೆಲಸಮಗೊಳಿಸಬಾರದು<br /><em><strong>-ಅಯ್ಯಣ್ಣ ಹುಂಡೇಕರ್, ಸಾಹಿತಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>