<p><strong>ಯಾದಗಿರಿ: </strong>ನಗರ ಸೇರಿದಂತೆ ಜಿಲ್ಲಾದ್ಯಂತ ಶುಕ್ರವಾರ ಗಣೇಶೋತ್ಸವ ಹಬ್ಬ ಆಚರಣೆ ಮಾಡಲಾಗುತ್ತಿದ್ದು, ಹೂ, ಹಣ್ಣು ದರ ಏರಿಕೆಯಾಗಿದೆ. ಆದರೆ, ವ್ಯಾಪಾರ ಕಳೆಗುಂದಿದೆ.</p>.<p>ನಗರದ ಗಾಂಧಿ ವೃತ್ತದ ಗುರುವಾರ ಬಳಿ ಹಣ್ಣು, ಹಂಪಲು ಮಾರಾಟಕ್ಕೆ ಇಡಲಾಗಿದ್ದು, ಗ್ರಾಮೀಣ ಭಾಗದಿಂದ ಜನರು ಬಾರದೇ ವ್ಯಾಪಾರ ಹೆಚ್ಚಿನ ಮಟ್ಟದಲ್ಲಿ ಆಗಿಲ್ಲ.</p>.<p>ಮಲ್ಲಿಗೆ, ಕನಕಾಂಬರ, ಸಂಪಿಗೆ ಹೂವು ಒಂದು ಮೊಳ ₹100 ಆಗಿದೆ. ಒಂದು ಗುಲಾಬಿ ₹5ರಿಂದ ₹10 ಇದೆ. ಪೇರಲ ₹50 ಕೆಜಿ, ಒಂದು ಸೇಬು ₹20, ಬಾಳೆಹಣ್ಣು ₹50ಗೆ ಡಜನ್, ಒಂದು ಮೊಸಂಬಿ, ಸಂತೂರು, ದಾಳಿಂಬೆ ₹15ರಿಂದ 20 ದರ ಇದೆ.</p>.<p>‘ಗುರುವಾರ ವ್ಯಾಪಾರ ಡಲ್ ಆಗಿದೆ. ಶುಕ್ರವಾರ ಗಣೇಶ ಪ್ರತಿಷ್ಠಾಪನೆ ಮಾಡುವುದರಿಂದ ಅಂದು ವ್ಯಾಪಾರವಾಗುವ ಸಾಧ್ಯತೆ ಇದೆ. ಮಾರುಕಟ್ಟೆಗಳಲ್ಲಿ ಹೆಚ್ಚಿನ ಜನ ಸಂದಣಿ ಇಲ್ಲ. ಹೀಗಾಗಿ ವ್ಯಾಪಾರವೂ ಆಗಿಲ್ಲ’ ಎಂದು ವ್ಯಾಪಾರಿ ಮಹಮದ್ ಹೇಳುತ್ತಾರೆ.</p>.<p><strong>ಪಿಒಪಿ, ಮಣ್ಣಿ ಮೂರ್ತಿ ಮಾರಾಟ:</strong>ಗಾಂಧಿ ವೃತ್ತದ ಬಳಿ ಪ್ಲಾಸ್ಟರ್ ಆಫ್ ಪ್ಯಾರೀಸ್ (ಪಿಒಪಿ) ಮಣ್ಣಿನ ಗಣೇಶ ಮೂರ್ತಿಗಳನ್ನು ಮಾರಾಟ ಮಾಡಲಾಗುತ್ತಿದೆ. ಪಿಒಪಿ ₹100ರಿಂದ ಆರಂಭವಾದರೆ ಮಣ್ಣಿನ ಗಣೇಶ ಕೂಡ ₹150 ದರ ಇತ್ತು. ಪಿಒಪಿ ದೊಡ್ಡ ಗಾತ್ರದ ಗಣೇಶ ಮೂರ್ತಿ ₹5ರಿಂದ 6 ತನಕ ಇದ್ದರೆ ಮಣ್ಣಿನ ಮೂರ್ತಿ ₹3 ಸಾವಿರ ಬೆಲೆ ಇತ್ತು. ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ನಗರಸಭೆ ಬಳಿ ಪರವಾನಗಿ ಪಡೆಯಲು ಮಂಡಳಿಯವರು ಬಂದಿದ್ದರು.</p>.<p>ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಹಲವಾರು ಷರತ್ತುಗಳನ್ನು ವಿಧಿಸಿಸಿದ್ದರಿಂದ ಈ ಬಾರಿ ಹಲವು ಮಂಡಳಿಗಳು ಆಸಕ್ತಿ ತೋರಿಸಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ: </strong>ನಗರ ಸೇರಿದಂತೆ ಜಿಲ್ಲಾದ್ಯಂತ ಶುಕ್ರವಾರ ಗಣೇಶೋತ್ಸವ ಹಬ್ಬ ಆಚರಣೆ ಮಾಡಲಾಗುತ್ತಿದ್ದು, ಹೂ, ಹಣ್ಣು ದರ ಏರಿಕೆಯಾಗಿದೆ. ಆದರೆ, ವ್ಯಾಪಾರ ಕಳೆಗುಂದಿದೆ.</p>.<p>ನಗರದ ಗಾಂಧಿ ವೃತ್ತದ ಗುರುವಾರ ಬಳಿ ಹಣ್ಣು, ಹಂಪಲು ಮಾರಾಟಕ್ಕೆ ಇಡಲಾಗಿದ್ದು, ಗ್ರಾಮೀಣ ಭಾಗದಿಂದ ಜನರು ಬಾರದೇ ವ್ಯಾಪಾರ ಹೆಚ್ಚಿನ ಮಟ್ಟದಲ್ಲಿ ಆಗಿಲ್ಲ.</p>.<p>ಮಲ್ಲಿಗೆ, ಕನಕಾಂಬರ, ಸಂಪಿಗೆ ಹೂವು ಒಂದು ಮೊಳ ₹100 ಆಗಿದೆ. ಒಂದು ಗುಲಾಬಿ ₹5ರಿಂದ ₹10 ಇದೆ. ಪೇರಲ ₹50 ಕೆಜಿ, ಒಂದು ಸೇಬು ₹20, ಬಾಳೆಹಣ್ಣು ₹50ಗೆ ಡಜನ್, ಒಂದು ಮೊಸಂಬಿ, ಸಂತೂರು, ದಾಳಿಂಬೆ ₹15ರಿಂದ 20 ದರ ಇದೆ.</p>.<p>‘ಗುರುವಾರ ವ್ಯಾಪಾರ ಡಲ್ ಆಗಿದೆ. ಶುಕ್ರವಾರ ಗಣೇಶ ಪ್ರತಿಷ್ಠಾಪನೆ ಮಾಡುವುದರಿಂದ ಅಂದು ವ್ಯಾಪಾರವಾಗುವ ಸಾಧ್ಯತೆ ಇದೆ. ಮಾರುಕಟ್ಟೆಗಳಲ್ಲಿ ಹೆಚ್ಚಿನ ಜನ ಸಂದಣಿ ಇಲ್ಲ. ಹೀಗಾಗಿ ವ್ಯಾಪಾರವೂ ಆಗಿಲ್ಲ’ ಎಂದು ವ್ಯಾಪಾರಿ ಮಹಮದ್ ಹೇಳುತ್ತಾರೆ.</p>.<p><strong>ಪಿಒಪಿ, ಮಣ್ಣಿ ಮೂರ್ತಿ ಮಾರಾಟ:</strong>ಗಾಂಧಿ ವೃತ್ತದ ಬಳಿ ಪ್ಲಾಸ್ಟರ್ ಆಫ್ ಪ್ಯಾರೀಸ್ (ಪಿಒಪಿ) ಮಣ್ಣಿನ ಗಣೇಶ ಮೂರ್ತಿಗಳನ್ನು ಮಾರಾಟ ಮಾಡಲಾಗುತ್ತಿದೆ. ಪಿಒಪಿ ₹100ರಿಂದ ಆರಂಭವಾದರೆ ಮಣ್ಣಿನ ಗಣೇಶ ಕೂಡ ₹150 ದರ ಇತ್ತು. ಪಿಒಪಿ ದೊಡ್ಡ ಗಾತ್ರದ ಗಣೇಶ ಮೂರ್ತಿ ₹5ರಿಂದ 6 ತನಕ ಇದ್ದರೆ ಮಣ್ಣಿನ ಮೂರ್ತಿ ₹3 ಸಾವಿರ ಬೆಲೆ ಇತ್ತು. ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ನಗರಸಭೆ ಬಳಿ ಪರವಾನಗಿ ಪಡೆಯಲು ಮಂಡಳಿಯವರು ಬಂದಿದ್ದರು.</p>.<p>ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಹಲವಾರು ಷರತ್ತುಗಳನ್ನು ವಿಧಿಸಿಸಿದ್ದರಿಂದ ಈ ಬಾರಿ ಹಲವು ಮಂಡಳಿಗಳು ಆಸಕ್ತಿ ತೋರಿಸಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>